Davanagere: ದಸರಾ ಹಬ್ಬದ ಬೃಹತ್ ಶೋಭಾಯಾತ್ರೆ


Team Udayavani, Oct 12, 2024, 3:31 PM IST

Davanagere: Dussehra festival grand procession

ದಾವಣಗೆರೆ: ವಿಶ್ವ ಹಿಂದು ಪರಿಷದ್, ಸಾರ್ವಜನಿಕ ವಿಜಯ ದಶಮಿ ಮಹೋನ್ನತ ಸಮಿತಿ ಆಶ್ರಯದಲ್ಲಿ ದಸರಾ ಹಬ್ಬದ ಅಂಗವಾಗಿ ಶನಿವಾರ 43ನೇ ವರ್ಷದ ಬೃಹತ್ ಶೋಭಾಯಾತ್ರೆ ನಡೆಯಿತು.

ಬೇತೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾ ಯಾತ್ರೆಗೆ ವಿನೋಬ ನಗರದ ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿ ಚಾಲನೆ ನೀಡಿದರು.

ಸಮಾಳ, ನಂದಿಕೋಲು, ವೀರಗಾಸೆ, ಡೊಳ್ಳು, ಕೋಲಾಟ, ಸಾಂಪ್ರದಾಯಿಕ ವಾದ್ಯ ಇತ್ಯಾದಿ ಕಲಾತಂಡಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸಿದವು.

ರಾಷ್ಟ್ರಪಿತ ಮಹಾತ್ಮ ಗಾಂಧಿ, ಬಸವಣ್ಣ, ವಿವೇಕಾನಂದ, ಗೋಲಾವಲ್ಕರ್, ವಾಲ್ಮೀಕಿ ಮುಂತಾದ ಮಹನೀಯರು, ದಾರ್ಶನಿಕರ ಸ್ತಬ್ದ ಚಿತ್ರಗಳಿದ್ದವು. ಹಗೇದಿಬ್ಬ ವೃತ್ತದಲ್ಲಿ ಉಗ್ರ ನರಸಿಂಹವತಾರದ ರೂಪಕ ಚಿತ್ರ ಗಮನ ಸೆಳೆಯಿತು.

ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆ ಹಳೆ ಬಿಡಿಒ ಆಫೀಸ್ ರಸ್ತೆ, ಚಾಮರಾಜಪೇಟೆ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ಹಳೆ ಪಿಬಿ ರಸ್ತೆ ಮೂಲಕ ಶ್ರೀ ಬೀರಲಿಂಗೇಶ್ವರ ಮೈದಾನ ತಲುಪಲಿದೆ.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.‌ಎ.ಎಚ್. ಶಿವಯೋಗಿಸ್ವಾಮಿ, ಕೆ.ಬಿ. ಶಂಕರನಾರಾಯಣ, ಎಸ್. ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಶ್ರೀ ನಿವಾಸ್ ದಾಸಕರಿಯಪ್ಪ, ಬಿ.ಜಿ. ಅಜಯ್ ಕುಮಾರ್, ಮಲ್ಲಿಕಾರ್ಜುನ, ಹರೀಶ್ ಪವಾರ್, ಆರ್.ಎಲ್. ಶಿವಪ್ರಕಾಶ್, ಚೇತನಾ ಶಿವಕುಮಾರ್, ಎಚ್.ಬಿ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ವಿನಾಯಕ ರಾನಡೆ, ಶಿವನಗೌಡ ಪಾಟೀಲ್, ಟಿಂಕರ್‌‌ ಮಂಜಣ್ಣ ಇತರರು ಇದ್ದರು.

ಮೇಯರ್ ಕೆ.‌ ಚಮನ್ ಸಾಬ್, ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದುಸೇಠ್, ಟಿ. ಅಸ್ಗರ್ ಒಳಗೊಂಡಂತೆ ಮುಸ್ಲಿಂ ಸಮಾಜದ ಮುಖಂಡರು ಶೋಭಾಯಾತ್ರೆ ಮೆರವಣಿಗೆಯಲ್ಲಿನ ಹಿಂದು ಸಮಾಜದ ಮುಖಂಡರಿಗೆ ಹೂಮಾಲೆ, ಶಾಲು ಹಾಕಿ ಸನ್ಮಾನಿಸಿದರು. ಪರಸ್ಪರ ಸಿಹಿ ಹಂಚುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡ್ರೋಣ್ ಮೂಲಕ ಮೆರವಣಿಗೆ ಮೇಲೆ ನಿಗಾ ವಹಿಸಲಾಗಿತ್ತು.

ಟಾಪ್ ನ್ಯೂಸ್

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

1-nda

NDA; ರಾಜ್ಯ ಚುನಾವಣೆಗಳಲ್ಲಿ ಒಗ್ಗಟ್ಟಿನ ಸ್ಪರ್ಧೆ

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

1-fucker

Champions Trophy; ಫ‌ಖರ್‌ ಹೊರಕ್ಕೆ?: ಪಾಕ್‌ ತಂಡಕ್ಕೆ ಮತ್ತೊಂದು ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: I can’t say anything about the Hebbalkar-Ravi case: Speaker UT Khader

Davanagere: ಹೆಬ್ಬಾಳ್ಕರ್‌- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್‌ ಖಾದರ್

Precautionary measures to prevent load shedding this time: Minister K.J. George

Electricity: ಈ ಬಾರಿ ಲೋಡ್‌ ಶೆಡ್ಡಿಂಗ್‌ ಆಗದಂತೆ ಮುಂಜಾಗೃತಾ ಕ್ರಮ: ಸಚಿವ ಕೆ.ಜೆ. ಜಾರ್ಜ್

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

1-nda

NDA; ರಾಜ್ಯ ಚುನಾವಣೆಗಳಲ್ಲಿ ಒಗ್ಗಟ್ಟಿನ ಸ್ಪರ್ಧೆ

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

MUDA CASE: ತಪ್ಪು ಆಗಿದ್ದರೆ ಅದು ಮುಡಾದ್ದು, ಸಿಎಂ ಅವರದಲ್ಲ: “ಲೋಕಾ’ ವರದಿ

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.