ಗಾಂಧೀಜಿಯವರಲ್ಲೂ ಇದ್ದವು ಅನೇಕ ವೈರುಧ್ಯ


Team Udayavani, Oct 3, 2018, 3:20 PM IST

3-october-16.gif

ದಾವಣಗೆರೆ: ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ ನಿವಾರಣೆಗೆ ಆಗಬೇಕೆಂಬ ಗುಣ ಹೊಂದಿದ್ದ ಮಹಾತ್ಮ ಗಾಂಧೀಜಿ ಅವರು ಅನೇಕ ವೈರುಧ್ಯಗಳನ್ನೂ ಹೊಂದಿದ್ದರು ಎಂದು ರಾಜ್ಯಸಭಾ ಸದಸ್ಯ ಡಾ| ಎಲ್‌. ಹನುಮಂತಯ್ಯ ತಿಳಿಸಿದ್ದಾರೆ.

ಎ.ವಿ. ಕಮಲಮ್ಮ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯನ್ನು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೈವಾರಾಧಕ, ಆಧ್ಯಾತ್ಮಿಕವಾದಿ ಹಿಂದೂ ಧರ್ಮ, ಪರಂಪರೆಯಲ್ಲಿ ಅಪಾರ ನಂಬಿಕೆ, ಭಕ್ತಿ ಇಟ್ಟುಕೊಂಡಿದ್ದವರು ಮಹಾತ್ಮ ಗಾಂಧೀಜಿ. ಹಾಗಾಗಿ ಅವರಿಗೆ ಹಿಂದೂ ಧರ್ಮದ ಒಳ್ಳೆಯ ಗುಣಗಳು ಕಂಡು ಬಂದಷ್ಟು ಅಸಮಾನತೆ ಗುಣ ಕಾಣಲಿಲ್ಲ ಎಂದರು. ಸನಾತನ ಧರ್ಮ ಪರಮ ಶ್ರೇಷ್ಠ, ಪವಿತ್ರ ಎಂದು ಭಾವಿಸಿದ್ದ ಅವರು ತಾರತಮ್ಯದ ಗುಣಗಳನ್ನು ಎಲ್ಲಿಯೂ ಪ್ರಸ್ತಾಪ ಮಾಡಲು ಹೋಗುವುದಿಲ್ಲ. ನಮ್ಮಲ್ಲಿದ್ದ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಈ ಗುಣಗಳು ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕೆ ಮೂಲ ಕಾರಣವಾದ ಸನಾತನ ಅಥವಾ ಹಿಂದೂ ಧರ್ಮ ಕಾರಣ ಅಂಥಾ ಎಲ್ಲಿಯೂ ಒಪ್ಪುವುದಿಲ್ಲ. ಹೀಗೆ ಅನೇಕ ವೈರುಧ್ಯಗಳು ಗಾಂಧೀಜಿಯವರಲ್ಲಿದ್ದವು ಎಂದು ತಿಳಿಸಿದರು.

ಗಾಂಧೀಜಿ ಅನೇಕ ರೀತಿಯ ವಿರುದ್ಧ ದಿಕ್ಕಿನಲ್ಲಿ ಚಿಂತನೆ ಮಾಡುವ ವ್ಯಕ್ತಿತ್ವ ಹೊಂದಿದ್ದರು. ಅವರು ನೇರವಾಗಿ ಯಾರಿಗೂ ಅರ್ಥ ಆಗದವರು. ಎಲ್ಲಾ ಮನುಷ್ಯರು ಮಾಡುವಂತೆ ತಪ್ಪು ಮಾಡಿ ಪಶ್ಚಾತ್ತಾಪ ಮಾಡಿಕೊಂಡ ವ್ಯಕ್ತಿತ್ವ ಅವರದಾಗಿತ್ತು. ಆದರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಎಲ್ಲಾ ಜನರನ್ನು ಸಂಘಟಿಸಿದ್ದು ಅವರ ಬಹುಮುಖ ವ್ಯಕ್ತಿತ್ವವೇ ಸರಿ ಎಂದು ಸ್ಮರಿಸಿದರು.

ಈ ಹಿಂದೆ ವರ್ಣಭೇದ ನೀತಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿತ್ತು. ಅದೇ ರೀತಿ ನಮ್ಮಲ್ಲೂ ಸ್ವಲ್ಪ ಹಿಂದೆ ಅದೇ ಪರಿಸ್ಥಿತಿ ಇತ್ತು. ಕೆಲವೇ ಬಸ್ಸುಗಳ ಸಂಪರ್ಕವಿದ್ದಾಗ ಅಸ್ಪೃಶ್ಯರು ಟಿಕೆಟ್‌ ಖರೀದಿಸಿ ಪ್ರಯಾಣ ಮಾಡಿದರೂ ಕೂಡ ಊರಿನ ಪಟೇಲ ಬಂದರೆ ಸೀಟು ಬಿಟ್ಟು ಕೊಡುವ ಮಟ್ಟಿಗೆ ಅಸ್ಪೃಶ್ಯತೆ ಆವರಿಸಿತ್ತು. ಅಂತಹ ಅನುಭವವನ್ನು ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮತ್ತು ಬಿಳಿಯರ ಮಧ್ಯೆ ಇದ್ದದ್ದು ಕಾಣುವ ಜೊತೆಗೆ ಅನುಭವಿಸಿದ್ದರು. ಹಾಗಾಗಿ ನಂತರ ಇಂತಹ ಅನಿಷ್ಠ ಪದ್ಧತಿ ವಿರುದ್ಧ ಹೋರಾಟಕ್ಕೆ ಮುಂದಾದರು ಎಂದರು.

ಕೈಗಾರಿಕಾ ಕ್ರಾಂತಿ ಆಗದಿದ್ದರೆ ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಅಸಾಧ್ಯ ಎಂದು ನೆಹರೂ ಅವರ ಅಭಿಪ್ರಾಯವಾಗಿತ್ತು. ಆದರೆ, ದೇಶದ ಪ್ರಗತಿಗೆ ಬೇಕಾಗಿರುವುದು ಗುಡಿ ಕೈಗಾರಿಕೆ ವಿನಹ ಬೃಹತ್‌ ಕೈಗಾರಿಕೆ ಅಲ್ಲ. ದೇಶ ಗ್ರಾಮ ಸ್ವರಾಜ್ಯ ಆಗಬೇಕು ಎಂಬುದು ಗಾಂಧೀವಾದವಾಗಿತ್ತು ಎಂದು ಹೇಳಿದರು. ಖಾದಿಬಟ್ಟೆ ತೊಡುವುದು, ಮದ್ಯ ಸೇವನೆ ಮಾಡದಿರುವುದು, ಅಸ್ಪೃಶ್ಯರ ಮನೆಯ ಹೆಣ್ಣು ಮಗುವನ್ನು ಪೋಷಣೆ ಮಾಡುವವರಿಗೆ ಮಾತ್ರ ಅಂದು ಕಾಂಗ್ರೆಸ್‌ನ ಸದಸ್ಯತ್ವ ನೀಡಲಾಗುವುದು ಎಂಬ ದೃಢ ನಿರ್ಧಾರವನ್ನ ಕೈಗೊಂಡಿದ್ದರು. ಆ ಮೂಲಕ ದೇಶದಲ್ಲಿ ನೈತಿಕವಾಗಿ ಭಯದ ಹತೋಟಿಯಲ್ಲಿ ಇಡುವಂತ ಶಕ್ತಿ ಹೊಂದಿದ್ದರು. ಆದರೆ, ಎಲ್ಲೂ ಕೂಡ ಅಹಿಂಸೆ ಮಾರ್ಗ ಬಿಡಲಿಲ್ಲ. ಅಂಬೇಡ್ಕರ್‌ ಅವರು ಸಾಕಷ್ಟು ಟೀಕೆ ಮಾಡಿದರೂ ಕೂಡ ಎಂದಿಗೂ ಅವರ ಮೇಲೆ ಗಾಂಧೀಜಿ ಕೋಪಗೊಳ್ಳಲಿಲ್ಲ . ಅಂತಹ ಶಾಂತಿಧೂತ ಅವರಾಗಿದ್ದರು ಎಂದರು.

ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಅನುಸರಿಸಿಕೊಂಡವರು ಗಾಂಧೀಜಿ. ಪ್ರತಿಯೊಬ್ಬರ ಜೀವನದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಅವರ ಆತ್ಮ ಚರಿತ್ರೆಗಿದೆ. ಹಾಗಾಗಿ ಎಲ್ಲರೂ ಕೂಡ ಅವರ ಆತ್ಮಚರಿತ್ರೆ ಓದಬೇಕು ಎಂದು ಮನವಿ ಮಾಡಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಡಾ| ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ಕಾರ್ಯದರ್ಶಿ ಎಲ್‌. ಎಚ್‌. ಅರುಣ್‌ಕುಮಾರ್‌, ನಾಗರತ್ನಮ್ಮ, ಬಸವರಾಜ್‌, ಕುಮಾರ್‌ ಉಪಸ್ಥಿತರಿದ್ದರು. ಮಯೂರಿ, ಲಕ್ಷ್ಮಿ ಸಂಗಡಿಗರು ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ. ಪಿ.ಎಸ್‌. ಶಿವಪ್ರಕಾಶ್‌ ಸ್ವಾಗತಿಸಿದರು. ಅನುರಾಧ ನಿರೂಪಿಸಿದರು. ಡಾ| ಕೆ. ಹನುಮಂತಪ್ಪ ವಂದಿಸಿದರು.

ತ್ಯಾಗ-ಬಲಿದಾನದ  ಪರಿಚಯ ಆಗಲಿ
ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ. ಇಂತಹ ಮಹಾನೀಯರ ಆಚರಣೆಯನ್ನು ಕೇವಲ ಚಾಕಲೇಟ್‌ ಹಂಚಿ ಸಂಭ್ರಮಿಸುವುದಲ್ಲ. ಇನ್ನೂ ಸರ್ಕಾರಿ ಹಾಗೂ ಐಟಿ, ಬಿಟಿ ಕ್ಷೇತ್ರದವರು ಒಂದು ದಿನದ ಪ್ರವಾಸ ಕೈಗೊಂಡು ರಜೆಯ ಮಜೆ ಅನುಭವಿಸುವುದಲ್ಲ. ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಅವಿರತ ಹೋರಾಟದ ಸ್ಮರಣೀಯ ಘಟನೆಗಳನ್ನು ಪರಿಚಯಿಸುವ ಕೆಲಸ ಇಂದಿನ ಶಿಕ್ಷಣದ್ದಾಗಬೇಕು.
. ಡಾ| ಎಲ್‌. ಹನುಮಂತಯ್ಯ,
ರಾಜ್ಯಸಭಾ ಸದಸ್ಯ

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.