ಭಕ್ತಿ-ಗೌರವ ಭಾವನೆಗೆ ಭಯ ಮೂಲವಾಗದಿರಲಿ
Team Udayavani, Jun 3, 2017, 1:31 PM IST
ದಾವಣಗೆರೆ: ಗುರು, ಹಿರಿಯರ ಬಗ್ಗೆ ಗೌರವ ಬೆಳೆಸಲು ಭಯ ಮೂಲವಾಗಿಟ್ಟುಕೊಂಡರೆ ಅಂತಹ ಗೌರವ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶುಕ್ರವಾರ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಉದ್ಘಾಟಿಸಿ, ಮಾತನಾಡಿದರು.
ನಾವು ಸದಾ ಗುರು, ಹಿರಿಯರ ಬಗ್ಗೆ ಗೌರವ ಬೆಳೆಸಲು ಅವರಲ್ಲಿ ಭಯ, ಭಕ್ತಿ ಇರಬೇಕು ಎಂದು ಮಕ್ಕಳಲ್ಲಿ ಹೇಳುತ್ತಿದ್ದೇವೆ. ಇದರಿಂದ ಬೆಳೆಯುತ್ತಿರುವ ಗೌರವ, ಭಕ್ತಿ ಶಾಶ್ವತವಾಗಿ ಉಳಿಯುತ್ತಿಲ್ಲ ಎಂದರು. ಇಂದು ವಯಸ್ಸಾದವರ ಬಗ್ಗೆ ಕಿರಿಯರಲ್ಲಿ ಅಗೌರವ ಬೆಳೆಯುತ್ತಿದೆ. ಇದರಬದಲಿಗೆ ಹಿರಿಯರ ಬಗ್ಗೆ ಶ್ರದ್ಧೆ, ಪ್ರೀತಿ, ಕೃತಜ್ಞತೆ ಬೆಳೆಸಿಕೊಳ್ಳಲು ಸಣ್ಣ ವಯಸ್ಸಿನಿಂದ ತಿಳಿಹೇಳಬೇಕು.
ಆಗ ಮಾತ್ರ ಮಕ್ಕಳು ತಂದೆ, ತಾಯಿ ಕುರಿತು ಕೃತಜ್ಞತೆ, ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಯಾವುದೇ ಕೌಟುಂಬಿಕೆ ವ್ಯವಸ್ಥೆಯಲ್ಲಿ ಸಂಬಂಧಗಳ ಮಧ್ಯ ವ್ಯವಹಾರ ಇದ್ದರೆ, ಆ ಸಂಬಂಧ ಬಹು ದಿನಗಳ ಕಾಲ ಉಳಿಯುವುದಿಲ್ಲ. ಕುಟುಂಬದಲ್ಲಿ ಪ್ರೀತಿ, ಮಮತೆ, ವಾತ್ಸಲ್ಯ ಇರಬೇಕು. ಆಗ ಮಾತ್ರ ಕೌಟುಂಬಿಕ ಸಂಬಂಧ ಗಟ್ಟಿಗೊಳ್ಳುತ್ತವೆ.
ಯಾವುದೇ ಸಂಬಂಧವನ್ನು ಬಲವಂತವಾಗಿ ಬಹು ದಿನಗಳ ಕಾಲ ಉಳಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದನ್ನು ನಾವು ಮಕ್ಕಳ ಹಂತದಲ್ಲಿಯೇ ಕಲಿಸಬೇಕು ಎಂದು ತಿಳಿಸಿದರು. ಸಂಧ್ಯಾಕಾಲದಲ್ಲಿರುವ ನಿವೃತ್ತ ನೌಕರರು ಅತ್ಯಂತ ಕ್ರಿಯಾಶೀಲರಾಗಿ ಸಂಘ ಕಟ್ಟಿಕೊಂಡಿದ್ದಾರೆ. ಇದೀಗ ಮನೋರಂಜನ ಕೇಂದ್ರ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆ.
ಕೇಂದ್ರದಲ್ಲಿ ಆಟಗಳನ್ನು ಮಾತ್ರ ಆಡಿ. ಜೂಜು ಆಡುವ ಮಟ್ಟಕ್ಕೆ ಹೋಗಬೇಡಿ. ಹಾಗೇನಾದರೂ ಮಾಡಿದರೆ ನಿಮಗೆ ಬರುವ ಅಲ್ಪ ಪಿಂಚಣಿಯನ್ನೂ ಕಳೆದುಕೊಂಡು ಮಕ್ಕಳಿಂದ ತೆಗಳಿಕೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು. ನಿವೃತ್ತಿಗೂ ಮುನ್ನ ಮಕ್ಕಳು, ಹೆಂಡತಿಯ ಜೊತೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿರುವುದಿಲ್ಲ. ನಿವೃತ್ತಿ ನಂತರ ಹೆಚ್ಚಿನ ಕಾಲ ಕಳೆಯುವ ಉದ್ದೇಶ ನೀವು ಹೊಂದಿರುತೀ¤ರ.
ಆದರೆ, ನಿಮ್ಮ ನಿವೃತ್ತಿ ವೇಳೆಗೆ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಮೊಮ್ಮಕ್ಕಳು ಶಾಲೆಗೆ ಹೋಗುತ್ತಾರೆ. ಹಾಗಾಗಿ ನೀವು ಮತ್ತೆ ಒಂಟಿಯಾಗಿ ಕಾಲ ಕಳೆಯುವ ಸ್ಥಿತಿ ಬರುತ್ತದೆ. ಇದನ್ನು ನಿಭಾಯಿಸಲು ಹಳೆ ನೆನಪುಗಳ ಮೆಲುಕು ಹಾಕಲು ಮನೋರಂಜನಾ ಕೇಂದ್ರ ಬೇಕು. ಬದುಕಿಗೆ ಸ್ಫೂರ್ತಿ ತುಂಬಲು ಹಳೆಯ ನೆನಪು ಮೆಲುಕುಹಾಕುವುದು, ಗೆಳೆಯರ ಜೊತೆ ಕಾಲ ಕಳೆಯುವುದು ಅನಿವಾರ್ಯ, ಅತೀ ಅವಶ್ಯಕ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್. ಗುರುಮೂರ್ತಿ ಮಾತನಾಡಿ, ಸಂಘದಿಂದ ಇನ್ನೊಂದು ದೊಡ್ಡ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ ಮಾಡಬೇಕಿದೆ. ಹಾಲಿ ಇರುವ ಭನವದ ಮೇಲ್ಚಾವಣಿಗೆ ಸೋಲಾರ್ ಅಳವಡಿಸುವ ಉದ್ದೇಶ ಇದೆ. ಇದಕ್ಕೆ ಬೇಕಾದ ಅಗತ್ಯ ನಿವೇಶನ, ಹಣಕಾಸು ಒದಗಿಸಿಕೊಡಲು ದಾನಿಗಳು ಮುಂದೆ ಬರಬೇಕು ಎಂದು ಮನವಿಮಾಡಿದ ಅವರು, ದಾವಣಗೆರೆ ನಗರದಲ್ಲಿ 2 ವೈದ್ಯಕೀಯ ಕಾಲೇಜು ಇವೆ.
ಬಾಪೂಜಿ ವಿದ್ಯಾಸಂಸ್ಥೆಯ ಆಸ್ಪತ್ರೆಗಳಲ್ಲಿ ಹಿರಿಯರು ಚಿಕಿತ್ಸೆ ಪಡೆದರೆ ಶೇ.50ರಷ್ಟು ರಿಯಾಯಿತಿ ಕೊಡಿಸುವುದಾಗಿ ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಅದನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಸ್ವಾಮೀಜಿಗಳು ಶಾಸಕರ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು.
ಸಂಘದ ರಾಜ್ಯ ಅಧ್ಯಕ್ಷ ಡಿ.ಎನ್. ಸಂಪತ್, ಜಂಟಿ ಕಾರ್ಯದರ್ಶಿ ಎನ್.ಜಿ. ಬಸವರಾಜು, ನಿರ್ದೇಶಕರಾದ ಕೆ.ಎಂ. ಜಯದೇವಯ್ಯ, ಬಿ.ಆರ್. ಶಂಕ್ರಪ್ಪ, ಎಂ.ಎನ್. ಪಂಚಾಕ್ಷರಯ್ಯ, ಕೆ.ಯು. ಸುರೇಂದ್ರಪ್ಪ, ಬಿ.ಆರ್. ಶಂಕರಪ್ಪ ಇತರರು ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರನ್ನು, ಸಂಘಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Davanagere; ಸಿಎಂ ರಾಜೀನಾಮೆ ಕೊಡಲ್ಲ,ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್.ಮಲ್ಲಿಕಾರ್ಜುನ್
Davanagere City Corporation: ನೂತನ ಮೇಯರ್-ಉಪ ಮೇಯರ್ ಆಯ್ಕೆ
Raj Bhavan ದುರ್ಬಳಕೆ ಮಾಡಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ: ಶಾಮನೂರು ಶಿವಶಂಕರಪ್ಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.