ಪರಿಣಾಮಕಾರಿ ಅನುಷ್ಠಾನವಾಗದ ಖಾತರಿ
Team Udayavani, Apr 18, 2017, 12:55 PM IST
ದಾವಣಗೆರೆ: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದ ಸಂಬಂಧ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದರು.
ಜಗಳೂರಲ್ಲಿ ಶೇ.198ರಷ್ಟು ಕೆಲಸವಾಗಿದೆ. ಹರಪನಹಳ್ಳಿಯಲ್ಲಿ ಸಹ ಚೆನ್ನಾಗಿ ಕೆಲಸ ಆಗಿದೆ. ಇನ್ನುಳಿದ ನಾಲ್ಕು ತಾಲೂಕಿನಲ್ಲಿ ಖಾತರಿ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿದಿನ ಮಾನವದಿನ ಸೃಷ್ಟಿಯಾಗಬೇಕು.
ಜನರು ಕೆಲಸ ಅರಸುತ್ತಾ ಬೇರೆ ಕಡೆ ಹೋಗುವಂತಾಗಬಾರದು. 21 ಅಂಶಗಳ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಚನ್ನಗಿರಿ ತಾಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರು ಬರುವುದೇ ಇಲ್ಲ ಎನ್ನುವ ವಾತಾವರಣ ಇದೆ.
ಕೇವಲ ಶೇ. 63.2 ರಷ್ಟು ಪ್ರಗತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಆಟದ ಮೈದಾನ, ಕಣ, ದನ, ಕುರಿ ದೊಡ್ಡಿ, ಸ್ಮಶಾನ ಅಭಿವೃದ್ಧಿಯಂತಹ ಸಮುದಾಯ ಆಧಾರಿತ ಕೆಲಸ ಕೈಗೊಳ್ಳುವ ಮೂಲಕ ಜನರಿಗೆ ಉದ್ಯೋಗ ಒದಗಿಸಬೇಕು. ಖಾತರಿ ಯೋಜನೆಯ ಮಾರ್ಗಸೂಚಿಯಂತೆ ಅಗತ್ಯ ನೆರಳು, ಶುದ್ಧ ಕುಡಿಯುವ ನೀರು, 100ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದರೆ ಆರೋಗ್ಯ ತಪಾಸಣೆ, 10-15 ಮಕ್ಕಳಿದ್ದಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು.
ಅತಿ ಹೆಚ್ಚಿನ ಮಾನವ ದಿನ ಸೃಷ್ಟಿಸುವಂತಾಗಬೇಕು ಖಾತರಿ ಯೋಜನೆಯಡಿ ಏನೆಲ್ಲಾ ಮಾಡಬಹುದು. ಆದರೂ, ಯೋಜನೆಯನ್ನೇ ಸರಿಯಾಗಿ ಬಳಕೆ ಮಾಡದಿದ್ದರೆ ಹೇಗೆ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು. ಜಿಲ್ಲೆಯಲ್ಲಿ 42.84 ಲಕ್ಷ ಮಾನವ ದಿನಗಳಲ್ಲಿ ಮಾರ್ಚ್ ಅಂತ್ಯಕ್ಕೆ 39.45 ಲಕ್ಷ ದಿನ ಸೃಜಿಸಲಾಗಿದೆ.
ಎಲ್ಲಾ ತಾಲೂಕಿನಲ್ಲಿ 7 ಸಾವಿರದಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ನಲ್ಲಿ ಕೂಲಿ ಹಣ ಬಿಡುಗಡೆಯಾಗದ ಕಾರಣ ಸಮಸ್ಯೆ ಉಂಟಾಯಿತು. ಚನ್ನಗಿರಿಯಲ್ಲಿ ಜನರು ಅಂತಹ ಆಸಕ್ತಿ ತೋರುತ್ತಿಲ್ಲ ಎಂದು ಸಿಇಒ ಎಸ್. ಅಶ್ವತಿ ಸಮಜಾಯಿಷಿ ನೀಡಿದರು. ಮಾ. 28ರ ವರೆಗೆ ಕೇಂದ್ರದಿಂದ ಹಣ ಬಂದಿರಲಿಲ್ಲ. ಹಾಗಾಗಿ ಕೂಲಿ ಪಾವತಿಗೆ ಅಡಚಣೆ ಉಂಟಾಗಿತ್ತು.
ಈಗ ಅನುದಾನ ಬಂದಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಖಾತರಿ ಯೋಜನೆ ಆಯುಕ್ತ ಉಪೇಂದ್ರ ತ್ರಿಪಾಠಿ ಸಿಂಗ್ ತಿಳಿಸಿದರು. ಜಿಪಂ ಸದಸ್ಯರಾ ತೇಜಸ್ವಿ ಪಟೇಲ್, ಖಾತರಿ ಯೋಜನೆಯಡಿ ಭದ್ರಾ ನಾಲೆಯಲ್ಲಿ ಹೂಳು ತೆಗೆಸುವ, ವಿಕಲ ಚೇತನರಿಗೆ ತರಬೇತಿ, ಶೈಲಾ ಬಸವರಾಜ್, ಪೈಪ್ಲೈನ್ ಕಾಮಗಾರಿ ಅಳವಡಿಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಯೋಗೀಶ್, ಶಾಲಾ ಕಟ್ಟಡ ನಿರ್ಮಾಣಕ್ಕೆ ಅವಕಾಶದ ಬಗ್ಗೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
Davanagere: ಮರಳು ತೆಗೆದ ವಿಚಾರದಲ್ಲಿ ಘರ್ಷಣೆ… ಓರ್ವ ಮೃತ್ಯು, ಇನ್ನೋರ್ವ ಗಂಭೀರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.