ರೈತ ಸಂಘ-ಹಸಿರು ಸೇನೆ ಪ್ರತಿಭಟನೆ
Team Udayavani, Feb 2, 2017, 12:21 PM IST
ದಾವಣಗೆರೆ: ಪವನ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಪರಿಸರ ನಾಶ ಮಾಡುತ್ತಿದ್ದು, ಆ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿ, ಪವನ ವಿದ್ಯುತ್ ಉತ್ಪಾದಿಸುವ ಕಂಪನಿಗಳು ಗುಡ್ಡಗಳಲ್ಲಿನ ಮರಗಳ ಮಾರಣ ಹೋಮ ಮಾಡುತ್ತಿವೆ.ಕಾನೂನು ಉಲ್ಲಂಘಿಸುತ್ತಿದ್ದು, ತಕ್ಷಣ ಕ್ರಮ ವಹಿಸಿ ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಎಂ. ಮಹೇಶ್ವರ ಸ್ವಾಮಿ, ಹರಪನಹಳ್ಳಿ ತಾಲೂಕಿನ ಅನೇಕ ಕಡೆ ಪವನ ವಿದ್ಯುತ್ ಉತ್ಪಾದನೆಗೆ ವಿವಿಧ ಕಂಪನಿಗಳಿಗೆ ಷರತ್ತು ವಿಧಿಸಿ ಪರವಾನಗಿ ನೀಡಲಾಗಿದೆ. ಯಾವುದೇ ಕಂಪನಿ ಷರತ್ತು ಅನುಸರಿಸುತ್ತಿಲ್ಲ.
ಈ ಕಂಪನಿಗಳು ಗ್ರಾಪಂಗೆ ಯಾವುದೇ ತೆರಿಗೆ ಕಟ್ಟುವುದಿಲ್ಲ. ಗುಡ್ಡದ ಮೇಲಿನ ಮರಗಳನ್ನು ಕಡಿದುಹಾಕಿ, ತಮಗೆ ಬೇಕಾದ ರೀತಿ ರಸ್ತೆ ನಿರ್ಮಿಸಿಕೊಳ್ಳುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೆ, ನಮಗೆ ಅನುಮತಿ ಇದೆ ಎಂದೇಳುತ್ತಾರೆ ಎಂದು ಆರೋಪಿಸಿದರು. ಮೊದಲೇ ಪ್ರಕೃತಿಯಲ್ಲಿನ ಏರುಪೇರನಿಂದಾಗಿ ಮಳೆ ಕೊರತೆ ಉಂಟಾಗುತ್ತಿದೆ.
ಇದನ್ನು ನಿಯಂತ್ರಿಸಲು ಸಮತೋಲಿತ ಪ್ರಕೃತಿ ಕಾಪಾಡಿಕೊಳ್ಳಬೇಕು. ಈ ಕಂಪನಿಗಳಿಂದ ಇಂದು ಪ್ರಕೃತಿ ನಾಶವಾಗಿದೆ. ಸರ್ಕಾರ ಈ ಕಂಪನಿಗಳಿಗೆ ದಂಡ ವಿಧಿಸಿ, ಅನುಮತಿ ರದ್ದುಮಾಡಬೇಕು ಎಂದು ಅವರು ಆಗ್ರಹಿಸಿದರು. ಮಲ್ಲಾಪುರ ದೇವರಾಜ, ಬೂದಿಹಾಳ ಸಿದ್ದೇಶ, ಮರಡಿ ನಾಗಣ್ಣ, ಕಲ್ಲಹಳ್ಳಿ ಗೋಣೆಪ್ಪ, ಶμàವುಲ್ಲಾ, ಮರುಳಸಿದ್ಧಪ್ಪ, ಕುಲುಮಿ ಚಂದ್ರಪ್ಪ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ
Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!
Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್
Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್ ಕುಮಾರಸ್ವಾಮಿ
Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.