ಸರ್ಕಾರಿ ಶಾಲಾ ಮಕ್ಕಳಿಂದ ಆಂಗ್ಲ ನಾಟಕ ಪ್ರದರ್ಶನ


Team Udayavani, Feb 25, 2017, 1:18 PM IST

dvg3.jpg

ದಾವಣಗೆರೆ: ತಾಲೂಕಿನ  ನರಗನಹಳ್ಳಿಯ ಸಮಾನ ಮನಸ್ಕ ಸಂಘಟನೆಗಳ ಗೆಳೆಯರ ಬಳಗದಿಂದ ಮಾಜಿ ಶಿಕ್ಷಣ ಸಚಿವ ದಿ. ಎಚ್‌.ಜಿ. ಗೋವಿಂದೇಗೌಡರ ಸ್ಮರಣಾರ್ಥ ಶಿಕ್ಷಕ ಪ್ರಕಾಶ್‌ ಕೊಡಗನೂರು ಅವರ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಹಾಗೂ ಮಕ್ಕಳ ರಂಗ ಪ್ರದರ್ಶನ ಫೆ. 25, 26 ರಂದು ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗಂಗಾಧರ ಬಿ.ಎಲ್‌. ನಿಟ್ಟೂರು ತಿಳಿಸಿದ್ದಾರೆ. 

ನರಗನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್‌ ಕೊಡಗನೂರು 3 ರಿಂದ 10ನೇ ತರಗತಿಯ ಇಂಗ್ಲಿಷ್‌ ಪಠ್ಯಾಧಾರಿಸಿ ರೋಲ್‌ ಪ್ಲೇಸ್‌… ಕೃತಿ ರಚಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯದ ಅನುಭವದೊಂದಿಗೆ ಭಾಷೆಯನ್ನು ಸಂತಸದಿಂದ ನಿರರ್ಗಳವಾಗಿ ಬಳಸುವಂತೆ ಬರೆದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ನರಗನಹಳ್ಳಿಯ ಸರ್ಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯ 65ಕ್ಕೂ ಹೆಚ್ಚು ಮಕ್ಕಳು ಇಂಟ್ರಡಕ್ಷನ್‌, ಎ ಯೂನಿಕ್‌ ಪೇಂಟಿಂಗ್‌, ಲವ್‌ ಫಾರ್‌ ಅನಿಮಲ್ಸ್‌, ಆ್ಯಕ್ಷನ್‌ ವರ್ಡ್ಸ್‌, ದಿ ಎಂಚಾಂಟೆಡ್‌ ಪೂಲ್‌… ಎಂಗ ಆಂಗ್ಲ ನಾಟಕ ಪ್ರದರ್ಶನ ನೀಡುವರು. ಗ್ರಾಮೀಣ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಂಗ್ಲ ಭಾಷೆ ಓದುವುದು ಮತ್ತು ಬರೆಯುವುದೇ ಕಷ್ಟ.

ಅದರಲ್ಲೂ  ಆಂಗ್ಲ ನಾಟಕ ಪ್ರದರ್ಶನ  ನೀಡುವುದು ಸುಲಭದ ಮಾತಲ್ಲ. ಶಿಕ್ಷಕ ಪ್ರಕಾಶ್‌ ಕೊಡಗನೂರು ಅದನ್ನು ಸಾಧ್ಯವಾಗಿಸಿದ್ದಾರೆ. ಮಕ್ಕಳು ಆಂಗ್ಲ ಭಾಷಾ ರಂಗ ಪ್ರದರ್ಶನ ನೀಡುವಂತೆ ಸಜ್ಜುಗೊಳಿಸಿದ್ದಾರೆ ಎಂದು ತಿಳಿಸಿದರು. ಶನಿವಾರ ಸಂಜೆ 4ಕ್ಕೆ ಮಕ್ಕಳ ರಂಗ ಪ್ರದರ್ಶನವನ್ನು ಶಿಕ್ಷಣಾಧಿಕಾರಿ ಜಿ.ಎಂ. ಬಸವಲಿಂಗಪ್ಪ ಉದ್ಘಾಟಿಸುವರು. 

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಆರ್‌. ಅಣ್ಣೇಶಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಗೌರವಾಧ್ಯಕ್ಷ ಎನ್‌. ವಾಸುದೇವರಾಯ್ಕರ್‌, ಬಿಇಒ ಬಿ.ಆರ್‌. ಬಸವರಾಜಪ್ಪ ಇತರರು ಭಾಗವಹಿಸುವರು. ಫೆ. 26ರ ಭಾನುವಾರ ಬೆಳಗ್ಗೆ 10.30ಕಕೆ ನಡೆಯುವ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ಪ್ರೊ. ಮಲ್ಲಿಕಾರ್ಜುನ್‌ ಪಾಟೀಲ್‌, ಡಿಡಿಪಿಐ ಎಚ್‌.ಎಂ. ಪ್ರೇಮಾ, ಪ್ರೊ. ಭಿಕ್ಷಾವರ್ತಿ, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌ ಇತರರು ಭಾಗವಹಿಸುವರು ಎಂದು ತಿಳಿಸಿದರು. 

ಶಿಕ್ಷಕ ಪ್ರಕಾಶ್‌ ಕೊಡಗನೂರು ಮಾತನಾಡಿ, ನನ್ನಂಥಹ ಸಾವಿರಾರು ಶಿಕ್ಷಕರಿಗೆ ಸೇವೆ ಒದಗಿಸುವ ಅವಕಾಶ ಮಾಡಿಕೊಟ್ಟವರು ಮಾಜಿ ಶಿಕ್ಷಣ ಸಚಿವ ದಿ. ಎಚ್‌. ಜಿ. ಗೋವಿಂದೇಗೌಡರು. ಹಾಗಾಗಿ ಅವರ ಸ್ಮರಣಾರ್ಥ ರೋಲ್‌ ಪ್ಲೇಸ್‌… ಕೃತಿ ಬಿಡುಗಡೆ ಹಾಗೂ ಮಕ್ಕಳ ರಂಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಆಂಗ್ಲ ಭಾಷೆಯಲ್ಲಿ ಮಾತನಾಡುವುದು ಮಾತ್ರವಲ್ಲ ನಾಟಕಗಳನ್ನು ಮಾಡಬಲ್ಲರು ಎಂಬುದನ್ನು ರುಜುವಾತುಪಡಿಸುವುದಕ್ಕಾಗಿಯೇ ಆಂಗ್ಲ ನಾಟಕಗಳ ಪ್ರದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಾಹಿತಿ ಬಿ. ಶಿವಯೋಗಿ , ಭುವನ್‌ ಪ್ರಕಾಶ್‌ ಕೊಡಗನೂರು ಸುದ್ದಿಗೋಷ್ಠಿಯಲ್ಲಿದ್ದರು.   

ಟಾಪ್ ನ್ಯೂಸ್

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basvaraj

CM Aspirant: ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ: ಶಾಸಕ ಶಿವಗಂಗಾ

SSM

High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

Puttur: ಟ್ರೀ ಪಾರ್ಕ್‌ ನಿರ್ಲಕ್ಷ್ಯಕ್ಕೆ ದುಡ್ಡಿನ ಕೊರತೆ ನೆಪ

10-chikkamagalur

Chikkamagaluru: ಓವರ್ ಟೇಕ್ ಮಾಡಲು ಹೋಗಿ ಸೇತುವೆಗೆ ಗುದ್ದಿದ ಬಸ್;‌ ವಿದ್ಯಾರ್ಥಿಗಳಿಗೆ ಗಾಯ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

9-koratagere

Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.