ಅಧಿಕೃತ ಬ್ಲಾಕ್ ‌ಗಳಲ್ಲೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ!

ಸರ್ಕಾರದ ನಿಯಮಾವಳಿ ಗಾಳಿಗೆ ತೂರುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

Team Udayavani, Jun 15, 2020, 5:54 PM IST

1-June-25

ಸಾಂದರ್ಭಿಕ ಚಿತ್ರ

ಹರಿಹರ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಅಧಿಕೃತವಾಗಿ ಹರಾಜಾಗಿರುವ ಮರಳು ಬ್ಲಾಕ್‌ಗಳಲ್ಲೇ ಗುತ್ತಿಗೆದಾರರು ಒಪ್ಪಂದದ ಬಹುತೇಕ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅಕ್ರಮ ಎಸಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನಿಯಂತ್ರಿಸುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

ತಾಲೂಕಿನಲ್ಲಿ ಗುರುತಿಸಿರುವ ಒಟ್ಟು 9 ಮರಳು ನಿಕ್ಷೇಪಗಳಲ್ಲಿ ಗುತ್ತೂರು, ಇಂಗಳಗೊಂದಿ, ಹೊಸಪಾಳ್ಯ, ಹಳೆಪಾಳ್ಯ ಹೊರತುಪಡಿಸಿ ಬಿಳಸನೂರು, ರಾಜನಹಳ್ಳಿ ಹಾಗೂ ಚಿಕ್ಕಬಿದರಿಯ 2 ಬ್ಲಾಕ್‌ಗಳನ್ನು 2019ರಲ್ಲಿ ಹಾಗೂ ಸಾರಥಿ ಬ್ಲಾಕ್‌ 2020ರಲ್ಲಿ ಹರಾಜು ಮಾಡಲಾಗಿದೆ. ಖಾಸಗಿ ಮರಳುಗಾರಿಕೆಯನ್ನು ನಿರ್ಬಂಧಿಸಿರುವ ಸರ್ಕಾರದ ಹೊಸ ಮರಳು ನೀತಿಯಲ್ಲೂ ಹಳೆ ಗುತ್ತಿಗೆದಾರರಿಗೆ 5 ವರ್ಷ ಅವಧಿ ಮುಗಿಯುವವರೆಗೂ ಅವಕಾಶ ಕಲ್ಪಿಸಿರುವುದು ಅಕ್ರಮ ನಡೆಸುವವರಿಗೆ ವರವಾಗಿ ಪರಿಣಮಿಸಿದೆ.

ಏನೇನು ಅಕ್ರಮ?: ನದಿ ಪಾತ್ರದಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಸ್ಟಾಕ್‌ ಯಾರ್ಡ್‌ ಇರಬೇಕೆಂಬ ನಿಯಮ ಪಾಲಿಸಿಲ್ಲ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ ಮರಳು ತೆಗೆಯುವ, ತುಂಬುವ, ಸಾಗಿಸುವುದಕ್ಕೆ ನಿಷೇಧಿಸಿದ್ದರೂ ಲೆಕ್ಕಿಸುತ್ತಿಲ್ಲ. ನಿಗ ದಿತ ಪ್ರಮಾಣಕ್ಕಿಂತ ಹೆಚ್ಚಿನ ಬೆಲೆಗೆ ಮರಳು ಮಾರಲಾಗುತ್ತಿದೆ. ಸರ್ಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ತಪ್ಪಿಸಲು ಒಂದೇ ಪಾಸ್‌ನಲ್ಲಿ ಹಲವು ಟ್ರಿಪ್‌ ಓಡಿಸಲಾಗುತ್ತಿದೆ. ಗರಿಷ್ಟ ಮಿತಿಗಿಂತ ಹೆಚ್ಚಿನ ಮರಳು ತುಂಬುವ ಭಾರೀ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂಬುದು ಜನರ ಆರೋಪ.

ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಮತ್ತಿತರ ಸಂಕಷ್ಟ ಅನುಭವಿಸುವ ನದಿ ದಡದ ನಿವಾಸಿಗಳು ಕೂಡ ಸ್ವಂತ ಕಟ್ಟಡ ಕಾಮಗಾರಿಗಳಿಗೆ ದುಬಾರಿ ಬೆಲೆ ತೆತ್ತು ಮರಳು ಖರೀದಿಸಬೇಕಾಗಿದೆ. ಆದರೆ ಪ್ರಭಾವಿಗಳು ಮಾತ್ರ ಸಕ್ರಮದ ನೆರಳಿನಲ್ಲಿ ಅಕ್ರಮವಾಗಿ ಮರಳು ಸಾಗಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದರೂ ಕೇಳುವವರಿಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು. ಆದ್ದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಕ್ರಮ ಮರಳುಗಾರಿಕೆಗೆ ತಡೆ ಹಾಕಲು ಮುಂದಾಗಬೇಕಿದೆ.

ಹೊಸ ಮರಳು ನೀತಿಯಲ್ಲೇನಿದೆ?
1994 ರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನದಿ ಪಾತ್ರದಲ್ಲಿ ಮರಳು ನಿಕ್ಷೇಪ ಗುರುತಿಸಿ ಖಾಸಗಿ ವ್ಯಕ್ತಿಗಳಿಗೆ ಮರಳುಗಾರಿಕೆ ನಡೆಸಲು ಗುತ್ತಿಗೆ ನೀಡುತ್ತಿತ್ತು. 2011ರಿಂದ ಮರಳು ತೆಗೆದು ಸಂಗ್ರಹಿಸಿ ಗ್ರಾಹಕರಿಗೆ ಮಾರುವುದನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಿತು. 2016ರಲ್ಲಿ ಮತ್ತೆ ನದಿ ಪಾತ್ರದ ಮರಳು ನಿಕ್ಷೇಪಗಳನ್ನು ಗುರುತಿಸಿ ಹರಾಜು ಮಾಡುವ ಅಧಿ ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೊರೆಯಿತು. ಕಳೆದ ಮೇ 5ರಂದು ಹೊಸ ಮರಳು ನೀತಿ-2020ನ್ನು ಜಾರಿಗೊಳಿಸಲಾಗಿದೆ. ಇದರಂತೆ ಡಿಸಿ, ಗಣಿ ಮತ್ತು ಭೂವಿಜ್ಞಾನ, ಕಂದಾಯ, ಜಲಸಂಪನ್ಮೂಲ, ಅಂತರ್ಜಲ ಮತ್ತು ಪಿಡಿಒಗಳ ತಂಡ ಮರಳು ನಿಕ್ಷೇಪವನ್ನು ಗುರುತಿಸಿಕೊಟ್ಟ ನಂತರ ಹಳ್ಳ, ಕೆರೆ-ತೊರೆಗಳಲ್ಲಿನ ಮರಳನ್ನು ಸ್ಥಳೀಯ ಗ್ರಾಪಂ ನಿಗದಿತ ರಾಯಲ್ಟಿ ಪಾವತಿಸಿಕೊಂಡು ಗ್ರಾಹಕರಿಗೆ ನೇರವಾಗಿ ವಿಲೇವಾರಿ ಮಾಡುತ್ತದೆ. ಇದೇ ರೀತಿ ನದಿ, ಆಣೆಕಟ್ಟು ವ್ಯಾಪ್ತಿಯ ಮರಳು ನಿಕ್ಷೇಪಗಳಲ್ಲಿ ಮರಳು ತೆಗೆದು ಸಂಗ್ರಹಿಸಿ ಸರ್ಕಾರದ ರಾಯಲ್ಟಿ ಜೊತೆ ಖರ್ಚು ಸೇರಿಸಿ ಗ್ರಾಹಕರಿಗೆ ಮಾರಾಟ ಮಾಡುವ ಹೊಣೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗುತ್ತದೆ.

ನದಿ ಪುನಶ್ಚೇತನವಿಲ್ಲ
ಮರಳುಗಾರಿಕೆಯ ಉಪ ಉತ್ಪನ್ನಗಳಾದ ಕಲ್ಲು ಜರುಗನ್ನು ಪುನಃ ನದಿಯ ಒಡಲಿಗೆ ಗುತ್ತಿಗೆದಾರರೇ ತಮ್ಮ ಖರ್ಚಿನಲ್ಲಿ ತುಂಬಿಸಿ ನದಿ ಪುನಶ್ಚೇತನಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಲಾಭದಾಸೆಗೆ ಕಲ್ಲು ಜರುಗನ್ನು ಎಂ.ಸ್ಯಾಂಡ್‌ ಮತ್ತಿತರೆ ಕ್ರಶರ್‌ ನಡೆಸುವವರಿಗೆ ಮಾರಾಟ ಮಾಡಲಾಗುತ್ತಿರುವುದು ವಿಪರ್ಯಾಸ.

ಮರಳು ನಿಗಾ ಸಮಿತಿ ಸಭೆಗೆ ನಾನೂ ಹಾಜರಾಗುತ್ತೇನೆ. ಆದರೆ 2020ರಲ್ಲಿ ಸಾರಥಿ ಬ್ಲಾಕ್‌ ಹರಾಜು ಮಾಡಿರುವುದಾಗಲೀ, ಸರ್ಕಾರ ಗುತ್ತಿಗೆದಾರರಿಗೆ ವಿಧಿಸಿರುವ ಷರತ್ತು ಗಳಗಾಲೀ, ಅಕ್ರಮ ನಡೆಯುತ್ತಿರುವ ಬಗ್ಗೆಯಾಗಲೀ ನನಗೆ ಮಾಹಿತಿಯಿಲ್ಲ.
ದಳವಾಯಿ, ಪಿಡಬ್ಲ್ಯೂಡಿ ಎಇಇ,
ಮರಳು ಸಮಿತಿ ಸದಸ್ಯರು

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

Davanagere: Basanagowda Yatnal expelled from the party?: What did Vijayendra say?

Davanagere: ಪಕ್ಷದಿಂದ ಯತ್ನಾಳ್‌ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?

prison

Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ

Udayagiri police station attack case: Muthalik sparks controversy

Davanagere: ಉದಯಗಿರಿ ಪೊಲೀಸ್‌ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.