ಅಮ್ಮ ಕಾಣಿಸಿಕೊಳ್ಳದಿರಲು ಎಂಎಂಆರ್‌ ಹಾಕಿಸಿ


Team Udayavani, Feb 7, 2017, 12:48 PM IST

dvg1.jpg

ದಾವಣಗೆರೆ: ನಮ್ಮ ದೇಶದ ಜನರ ಆರೋಗ್ಯ ಸ್ಥಿತಿ ಗಣನೀಯವಾಗಿ ಸುಧಾರಣೆ ಕಂಡಿದೆ. ಕಳೆದ 2 ದಶಕಗಳಲ್ಲಿ ಅನೇಕ ಮಾರಕ ರೋಗಗಳು ಕಣ್ಮರೆಯಾಗಿವೆ. ಲಕ್ಷಾಂತರ ಭಾರತೀಯರನ್ನು ಸಂಹರಿಸಿದ ಪ್ಲೇಗ್‌, ಮಕ್ಕಳ ಆರೋಗ್ಯ ಕುಂಟಿತಗೊಳಿಸಿದ್ದ ಪೋಲಿಯೋ ಈಗ ಮನುಜ ಕುಲದಿಂದ ದೂರಾಗಿವೆ. ಇದೀಗ ಭಾರತ ಪೋಲಿಯೋಮುಕ್ತ ದೇಶವಾಗಿ ಮಾರ್ಪಟ್ಟಿದೆ.

ಪೋಲಿಯೋದಂತೆಯೇ ಈಗ ದಡಾರಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎಂಎಂಆರ್‌ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಪೋಷಕರು ತಮ್ಮ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕಸರ್ಕಾರದ ಈ ಪ್ರಯತ್ನಕ್ಕೆ ಬೆಂಬಲ  ನೀಡಬೇಕಿದೆ ಎಂಬುದಾಗಿ ಮನವಿ ಮಾಡಿರುವ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಮಕ್ಕ ತಜ್ಞ ಡಾ| ಜಿ. ಗುರುಪ್ರಸಾದ್‌, ದಡಾರ-ರುಬೆಲ್ಲಾ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.

ದಡಾರ ಅಂದರೇನು?: ಆಡುಭಾಷೆಯಲ್ಲಿ ಮೈ ಮೇಲೆ ಅಮ್ಮ ಕಾಣಿಸಿಕೊಳ್ಳುವುದು ಎಂದು ಕರೆಸಿಕೊಳ್ಳುವ ಈ ಕಾಯಿಲೆ ಮಕ್ಕಳು ಮರಣ ಹೊಂದುವ ಸಾಧ್ಯತೆ ಸಹ ಇರುತ್ತದೆ. ಈ ಕಾಯಿಲೆ ಆರಂಭವಾದಾಗ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತವೆ. ನಂತರ ಮೈ ತುಂಬಾ ಕೆಂಪು ಬಣ್ಣದ ದುಂಡಾಕಾರದ ಗುಳೆ Û(ಅಮ್ಮ) ಗೋಚರಿಸುತ್ತವೆ. ಇದರಿಂದ ಚೇತರಿಸಿಕೊಂಡರೂ ಅನೇಕ ಮಕ್ಕಳು ನಿಮೋನಿಯಾ, ವಾಂತಿ-ಬೇಧಿಯಿಂದ ನರಳುತ್ತಾರೆ. ಇದು ಮಕ್ಕಳು ಸಾವಿಗೆ ಕಾರಣವಾಗಲಿದೆ. 

ರುಬೆಲ್ಲಾ ಕುರಿತು ಒಂದಿಷ್ಟು: ಜರ್ಮನ್‌ ರುಬೆಲ್ಲಾ ಒಂದು ಅತೀ ಸಾಮಾನ್ಯ ಕಾಯಿಲೆ. ಸ್ವಲ್ಪಮಟ್ಟಿನ ಜ್ವರ, ಶೀತ, ಕೆಮ್ಮಿನಿಂದ ಆರಂಭವಾಗುವ ಕಾಯಿಲೆ ಬಂದಾಗ ಕುತ್ತಿಗೆ ಇತರೆ ಜಾಗಗಳಲ್ಲಿ ಗಂಟು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆ ಕಾಣಿಸಿಕೊಂಡಾಗ ಮಕ್ಕಳು ಸಾಯುವುದಿಲ್ಲ. ಆದರೆ, ಗರ್ಬಿಣಿಯ ಹೊಟ್ಟೆಯಲ್ಲಿರುವ ಹಸುಳೆಯ ಮೇಲೆ ದುಷ್ಪರಿಣಾಮ ಬೀರಬಹುದು. ಇದರಿಂದ ಮಗು ಸಾವನ್ನಪ್ಪಬಹುದು. ಇಲ್ಲವೇ ಮಗುವಿನ ಬೆಳವಣಿಗೆ ಕುಂಟಿತಗೊಳ್ಳಬಹುದು.ಹೃದಯ, ಕಣ್ಣು, ಕಿವಿ ಮೇಲೆ ದುಷ್ಪರಿಣಾಮ ಬೀರಬಹುದು. 

ಎಂಎಂಆರ್‌ ಚುಚ್ಚುಮದ್ದು: ದಡಾರ ಹಾಗೂ ಜರ್ಮನ್‌ ರುಬೆಲ್ಲಾ ಕಾಯಿಲೆಗಳನ್ನು ಲಸಿಕೆ ನೀಡುವುದರ ಮೂಲಕ ನಿಯಂತ್ರಿಸಬಹುದು ಮತ್ತುತಡೆಗಟ್ಟಬಹುದು. ಕಳೆದ 2   ದಶಕಗಳಿಂದ ಎಂಎಂಆರ್‌ ಲಸಿಕೆಯನ್ನು ಚುಚ್ಚುಮದ್ದು ರೂಪದಲ್ಲಿ ನೀಡುವ ಮೂಲಕ ಇದನ್ನು ತಡೆಯಬಹುದು. ಈಗಾಗಲೇದೇಶದ ಶೇ.70-80ರಷ್ಟು ಮಕ್ಕಳಿಗೆ ಈ  ಲಸಿಕೆ ಹಾಕಿಸಲಾಗಿದೆ. 9ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಹಾಕಿಸಬೇಕು. ಆಗ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ. 

ಲಸಿಕೆ ಯಾವಾಗ? ಎಲ್ಲಿ ಹಾಕ್ತಾರೆ?: ಸರ್ಕಾರದಿಂದ ಫೆ.7ರಿಂದ 28ರ ವರೆಗೆ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಮಕ್ಕಳ ಆರೋಗ್ಯ ಕೇಂದ್ರ, ಮಕ್ಕಳ ತಜ್ಞರು ಎಂಎಂಆರ್‌ ಲಸಿಕೆ ನೀಡಲಿದ್ದಾರೆ. ಈಗಾಗಲೇ ಲಸಿಕೆ ಕೊಡಿಸಿದ್ದರೂ ಇನ್ನೊಮ್ಮೆ ಲಸಿಕೆ ಕೊಡಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರದು. ಲಸಿಕೆ ನೀಡಿದಾಗ ಒಂದಿಷ್ಟು ಜ್ವರ ಕಾಣಸಿಕೊಳ್ಳಬಹುದಷ್ಟೇ. ಎಲ್ಲಾ ಪೋಷಕರು ತಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಈ ಲಸಿಕೆ ಕೊಡಿಸಬೇಕು. 

ಟಾಪ್ ನ್ಯೂಸ್

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

1-pragyan

Pragyan rover; ಚಂದ್ರನ ಮೇಲೆ 160 ಕಿ.ಮೀ. ಕುಳಿ ಪತ್ತೆ!

ಪ್ರಧಾನಿ ಮೋದಿ ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PM Modi ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PRAVASI-Mandir

Udupi: ಬ್ರಹ್ಮಗಿರಿಯಲ್ಲಿರುವ ಪ್ರವಾಸಿ ಮಂದಿರಕ್ಕೆ ಕತ್ತಲ ಭಾಗ್ಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

Horoscope: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ

1-pragyan

Pragyan rover; ಚಂದ್ರನ ಮೇಲೆ 160 ಕಿ.ಮೀ. ಕುಳಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.