ಕನಿಷ್ಠ ಶೇ.65ರಷ್ಟು ಸಿಡಿ ಅನುಪಾತ ಕಾಯ್ದುಕೊಳ್ಳಿ
Team Udayavani, Mar 28, 2017, 1:13 PM IST
ದಾವಣಗೆರೆ: ಜಿಲ್ಲೆಯ ಎಲ್ಲಾ ಬ್ಯಾಂಕ್ಗಳು ಸಾಲ ನೀಡಿಕೆ, ಠೇವಣಿ ಸೀÌಕೃತಿಯ ಅನುಪಾತವನ್ನು ಕನಿಷ್ಠ 65ರಷ್ಟು ಸಾಧಿಸಲೇಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಾಕೀತು ಮಾಡಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಪುಸ್ತಕ ಬಿಡುಗಡೆಗೊಳಿಸಿ, ಮಾತನಾಡಿದರು.
ಅನೇಕ ಬ್ಯಾಂಕ್ಗಳು ಸಿಡಿ ಅನುಪಾತ ಕಾಪಾಡಿಕೊಂಡಿಲ್ಲ. ಸಾಲ ನೀಡಿಕೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಕೆಲ ಬ್ಯಾಂಕ್ಗಳು ಎರಡಂಕಿ ಸಹ ಮುಟ್ಟಿಲ್ಲ. ಅಂತಹ ಬ್ಯಾಂಕ್ಗಳು ಮುಂದಿನ ದಿನಗಳಲ್ಲಿ ತಮ್ಮ ನಿರೀಕ್ಷಿತ ಗುರಿ ಸಾಧಿಸಲು ಶ್ರಮಿಸಬೇಕಿದೆ ಎಂದರು. ಸಭೆ ಆರಂಭದಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ. ಯರ್ರಿಸ್ವಾಮಿ, ಈ ವರ್ಷ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ಮೂಲಕ ಒಟ್ಟು 3704.26 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ 125 ರಾಷ್ಟ್ರೀಕೃತ, 64 ಗ್ರಾಮೀಣ, 14 ಡಿಸಿಸಿ, 34 ಖಾಸಗಿ, 7 ಭೂ ಅಭಿವೃದ್ಧಿ/ಇತರೆ ಬ್ಯಾಂಕ್ಗಳಿವೆ. ಈ ಬ್ಯಾಂಕ್ಗಳ ಮೂಲಕ ಆದ್ಯತಾ ವಲಯಕ್ಕೆ 3166.14 ಕೋಟಿ, ಆದ್ಯತಾರಹಿತ ವಲಯಕ್ಕೆ 538.12 ಕೋಟಿ ರೂ. ಸಾಲ ನೀಡುವ ಉದ್ದೇಶ ಇದೆ ಎಂದರು. ಕೃಷಿಗೆ 2124.14 ಕೋಟಿ ರೂ., ಕೈಗಾರಿಕೆಗೆ 467.29 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ 2425.77 ಕೋಟಿ, ಗ್ರಾಮೀಣ ಬ್ಯಾಂಕ್ ಮೂಲಕ 931.45 ಕೋಟಿ, ಸಹಕಾರಿ ಬ್ಯಾಂಕ್ ಮೂಲಕ 340.04 ಕೋಟಿ ರೂ. ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಅವರು ನೀಡಿದರು. ಕಳೆದ ಸಾಲಿನಲ್ಲಿ 2371.51 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಇದರಲ್ಲಿ 2156.16 ಕೋಟಿ ರೂ. ಸಾಲ ನೀಡಲಾಗಿದೆ.
ಕೃಷಿ ವಲಯಕ್ಕೆ 1,410 ಗುರಿಯಲ್ಲಿ 1260 ಕೋಟಿ ರೂ., ಕೈಗಾರಿಕಾ ವಲಯಕ್ಕೆ 284 ಕೋಟಿ ರೂ. ಗುರಿಯಲ್ಲಿ 283 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಪ್ರಗತಿ ಕುರಿತು ಪ್ರಶ್ನಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಆಧಾರ್ ಜೋಡಣೆ ಕಾರ್ಯ ಚುರುಕುಗೊಳಿಸಿ.
ಗ್ರಾಹಕರು ಯಾವುದೇ ಕಾರಣಕ್ಕೂ ಬ್ಯಾಂಕ್ಗೆ ಬಂದು ಆಧಾರ್ ಜೋಡಣೆಗೆ ಮುಂದಾಗುವುದಿಲ್ಲ. ಅವರನ್ನು ನೀವೇ ಸಂಪರ್ಕಿಸಿ ಆಧಾರ್ ಸಂಖ್ಯೆ ಜೋಡಣೆ ಮನವರಿಕೆ ಮಾಡಿಕೊಡಿ ಎಂದರು. ಇದಕ್ಕೆ ಉತ್ತರಿಸಿದ ಯರ್ರಿಸ್ವಾಮಿ, ಜಿಲ್ಲೆಯಲ್ಲಿ ಒಟ್ಟು 19.53 ಲಕ್ಷ ಬ್ಯಾಂಕ್ ಖಾತೆಗಳಿದ್ದು, 1.62 ಲಕ್ಷ ಖಾತೆಗಳು ಚಾಲ್ತಿಯಲ್ಲಿಲ್ಲ.
17.91 ಲಕ್ಷ ಖಾತೆಯಲ್ಲಿ 10.03 ಲಕ್ಷ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಇನ್ನೂ 7.88 ಲಕ್ಷ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಆಗಬೇಕಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ನೀವು ನಮಗೆ ಒಪ್ಪಿಗೆ ಪತ್ರದ ಅರ್ಜಿ ನೀಡಿ.
ನಾವು ಉದ್ಯೋಗ ಖಾತ್ರಿ ಕೂಲಿಕಾರರ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯ ಒಪ್ಪಿಗೆ ಪತ್ರ ಪಡೆದುಕೊಂಡು ನೀಡುತ್ತೇವೆ ಎಂದರು. ಕೆನರಾ ಬ್ಯಾಂಕ್ ಕ್ಷೇತೀಯ ಮಹಾಪ್ರಬಂಧಕ ಎಚ್.ಎಂ. ಕೃಷ್ಣ, ಆರ್ಬಿಐನ ವಲಯ ವ್ಯವಸ್ಥಾಪಕ ಪಟ್ನಾಯಕ್, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರವೀಂದ್ರ, ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.