ಮಾರಿಹಳ್ಳಕ್ಕೆ ಬಿದ್ದು 175 ಕುರಿಗಳ ಸಾವು
Team Udayavani, Feb 21, 2017, 1:12 PM IST
ಹೊನ್ನಾಳಿ: ಹಳ್ಳಕ್ಕೆ ಬಿದ್ದು 175 ಕುರಿಗಳು ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಬಲಮುರಿ ಗ್ರಾಮಕ್ಕೆ ಸಮೀಪದ ಮಾರಿಹಳ್ಳದಲ್ಲಿ ಭಾನುವಾರ ಸಂಜೆ 7ರ ಸುಮಾರಿಗೆ ಸಂಭವಿಸಿದೆ. ಕುರಿಗಳನ್ನು ರಕ್ಷಿಸಲು ಮುಂದಾದ ಕುರಿಗಾಹಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟ ಕುರಿಗಳೆಲ್ಲ ರಾಣಿಬೆನ್ನೂರು ತಾಲೂಕು ದೇವರಗುಡ್ಡದ ನೀಲಪ್ಪ, ಹೂವಿನಹಡಗಲಿಯ ಮಾಲತೇಶ್, ಸವಣೂರು ತಾಲೂಕಿನ ಚೀಲಗಟ್ಟೆಯ ನಾಗಪ್ಪ ಮತ್ತು ಬಾಳಪ್ಪ ಎಂಬುವವರಿಗೆ ಸೇರಿದವು. ಘಟನೆ ವೇಳೆ ಕುರಿಗಳನ್ನು ಸಂರಕ್ಷಿಸಲು ಮುಂದಾದ ಮಾಳಪ್ಪ ದೇವರಗುಡ್ಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿಗಾಹಿಗಳು ಕಳೆದ ಒಂದು ತಿಂಗಳಿಂದ ಬಲಮುರಿ ಗ್ರಾಮದ ಜಮೀನೊಂದರಲ್ಲಿ 1,500 ಕುರಿಗಳೊಂದಿಗೆ ಬೀಡುಬಿಟ್ಟಿದ್ದರು. ಎಂದಿನಂತೆ ಭಾನುವಾರ ಹೊಲದಲ್ಲಿ ಕುರಿಗಳನ್ನು ಮೇಯಿಸಿ ನಂತರ ದೊಡ್ಡಿಗೆ ಹೊಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುರಿಗಳು ಹಳ್ಳಕ್ಕೆ ಕಾಲು ಜಾರಿ ಬಿದ್ದಿವೆ. ಒಂದರ ಹಿಂದೆ ಒಂದು ಕುರಿ ಹಳ್ಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಿಲ್ಲಾ ಕುರಿ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ| ಎಚ್. ನಾಗರಾಜ್, ತಾಲೂಕು ಪಶು ವೈದ್ಯಾಧಿಧಿಕಾರಿ ಡಾ| ವಿಶ್ವ ನಟೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ| ಕಾರ್ತಿಕ್, ಡಾ| ರಾಜಶೇಖರ್ ಮತ್ತು ಡಾ| ಪ್ರವೀಣ್ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಆಕಸ್ಮಿಕ ಸಾವು: ಉದಯವಾಣಿ ಜತೆ ಮಾತನಾಡಿದ ತಾಲೂಕು ಪಶು ವೈದ್ಯಾಧಿಧಿ ಕಾರಿ ಡಾ| ವಿಶ್ವನಟೇಶ್, ಕುರಿಗಳ ಸಾವು ಆಕಸ್ಮಿಕವಾಗಿದೆ. ಯಾವುದೇ ಔಷಧ ಸೇವಿಸಿ ಅಥವಾ ಇನ್ನಾವುದೇ ಕಾರಣಗಳಿಂದ ಕುರಿಗಳು ಸತ್ತಿಲ್ಲ ಎಂದು ಹೇಳಿದರು.
ಹೊನ್ನಾಳಿ ಠಾಣೆಯ ಸಿಪಿಐ ಜೆ. ರಮೇಶ್, ಪಿಎಸ್ಐ ಎನ್.ಸಿ. ಕಾಡದೇವರಮಠ, ಎಎಸ್ಐ ಶಂಕರಮೂರ್ತಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಪಂ ಮಾಜಿ ಸದಸ್ಯ ಪಿ. ಆನಂದಪ್ಪ, ರೈತ ಮುಖಂಡ ಮಲ್ಲಿಕಾರ್ಜುನ್, ಪಶು ವೈದ್ಯ ಸಹಾಯಕ ರವಿಕುಮಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ
Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!
Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್
Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್ ಕುಮಾರಸ್ವಾಮಿ
Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.