![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 25, 2022, 5:24 PM IST
ದಾವಣಗೆರೆ: ಕವಿತೆ, ಕವನ ಸಂಕಲನ ಎಂದೆಂದಿಗೂ ಪ್ರಚಾರದ ಹಪಾಹಪಿಯ ಕೃತಿಗಳಂತೆ ಆಗಬಾರದು ಎಂದು ಮೈಸೂರಿನ ಚಿಂತಕ ಕೆ.ಪಿ. ಸುರೇಶ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಧಾರವಾಡದ ಚಿತ್ತಾರ ಕಲಾ ಬಳಗ, ಕವಲಕ್ಕಿಯ ಕವಿ ಪ್ರಕಾಶನ, ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕವಿಗೆ ಸದಾ ಸಾಮಾಜಿಕ ಕ್ರಾಂತಿಯ ಚಿಂತನೆ, ಸಂಯಮ, ಬರವಣಿಗೆ ಕೌಶಲ್ಯ ಇರಬೇಕು. ಆಯಾ ಕಾಲಘಟ್ಟದ ಆಗು-ಹೋಗು, ತಲ್ಲಣಗಳಿಗೆ ಸ್ಪಂದಿಸುವಂತಾಗಬೇಕು ಎಂದು ಆಶಿಸಿದರು.
ಕವಿಯಿಂದ ಸಮಾಜ ಅಪಾರವಾದುದನ್ನು ನಿರೀಕ್ಷಿಸುತ್ತದೆ. ಕವಿಯ ಹೃದಯದಲ್ಲಿ ಸದಾ ನೈತಿಕತೆಯ ದಿಕ್ಸೂಚಿ ಇರಲೇಬೇಕು. ನೈತಿಕತೆಯ ದಿಕ್ಸೂಚಿ ಇಲ್ಲದೇ ಹೋದಲ್ಲಿ ಕವಿ ಮಾತ್ರವಲ್ಲ, ಮನುಷ್ಯರಾಗಲಿಕ್ಕೂ ಸಾಧ್ಯವಿಲ್ಲ. ಕವಿ ತನ್ನದೇ ಆದ ನುಡಿಗಟ್ಟನ್ನು ಹೇಳುವಂತಹ ಶ್ರದ್ಧೆ ಇರಬೇಕು. ಯಾವುದೇ ಆಸೆ, ಆಮಿಷಗಳಿಗೆ ಮಣಿಯಬಾರದು. ಕಗ್ಗಂಟಿನ ಭಾಷೆಯ ಬದಲಿಗೆ ಜನಭಾಷೆಯನ್ನೇ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು.
ಸಮಾಜ ಬಯಸುವಂತಹ ನಿರೀಕ್ಷೆಯನ್ನ ಯುವ ಕವಿಗಳು ಈಡೇರಿಸುವಂತಾಗಬೇಕು. ಕಾಲ ಕಾಲದ ಆಧಾರಿತ ಪರಿಣಾಮವನ್ನು ಅಭಿವ್ಯಕ್ತಗೊಳಿಸಬೇಕು. ಕನ್ನಡದ ವರಕವಿ ದ.ರಾ. ಬೇಂದ್ರೆ ಕಾಲಕ್ಕೆ ತಕ್ಕಂತೆ ಬರೆದ ಪರಿಣಾಮ ಅವರ ಸಾಹಿತ್ಯ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದೆ. ಸಾಹಿತ್ಯದ ಮೂಲಕ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸಬೇಕು. ಇಲ್ಲದೇ ಹೋದಲ್ಲಿ ಧಾರ್ಮಿಕತೆ, ರಾಷ್ಟ್ರೀಯತೆಯ ಸರ್ವಾಧಿಕಾರವನ್ನ ಕಿತ್ತೂಗೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ ಎಂದರು. ಹೂವಿನಹಡಗಲಿಯ ಪ್ರಗತಿಪರ ಚಿಂತಕ ಪೀರ್ಬಾಷಾ ಮಾತನಾಡಿ, ಈಗ ಮತ್ತು ನಾಳೆ ಏನಾಗಬಹುದು ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜೋರಾಗಿ ಮಾತನಾಡುವುದು ಅರ್ಥಹೀನವಾಗಿದೆ, ಮಾತ್ರವಲ್ಲ ದೇಶದ್ರೋಹದ ಪಟ್ಟಕ್ಕೂ ಕಾರಣವಾಗುತ್ತಿದೆ. ಹಾಗಾಗಿ ಈಗ ಪಿಸು ಮಾತುಗಳ ಮೂಲಕವೇ ಸಾಮಾಜಿಕ ಕ್ರಾಂತಿ ಉಂಟು ಮಾಡುವಂತಾಗಿದೆ ಎಂದು ವಿಷಾದಿಸಿದರು. ಸಾಹಿತಿ ಡಾ| ದಾದಾಪೀರ್ ನವಿಲೇಹಾಳ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ| ಆನಂದ ಋಗ್ವೇದಿ ಇತರರು ಇದ್ದರು. ಸನಾವುಲ್ಲಾ ನವಿಲೇಹಾಳ್ ನಿರೂಪಿಸಿದರು.
ಈಗ ಎಲ್ಲೆಡೆ ಬುಲ್ಡೋಜರ್ ಸಂಸ್ಕೃತಿ ಕಂಡು ಬರುತ್ತಿದೆ. ಕರ್ನಾಟಕಕ್ಕೂ ಬುಲ್ಡೋಜರ್ ಸಂಸ್ಕೃತಿಯ ಆಡಳಿತವನ್ನು ಕರೆ ತರುವ ಮಾತುಗಳು ಕೇಳಿ ಬರುತ್ತಿವೆ. ತಪ್ಪು ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಮನೆ ಇತರೆ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವ ಬಗ್ಗೆ ಜನಪ್ರತಿನಿಧಿಗಳೇ ಮಾತನಾಡುತ್ತಿದ್ದಾರೆ. ಧರ್ಮ, ರಾಷ್ಟ್ರೀಯತೆ ಸಹ ಬುಲ್ಡೋಜರ್ನಂತಾಗುತ್ತಿದೆ. ದಾವಣಗೆರೆ: ಕವಿಗೋಷ್ಠಿಯಲ್ಲಿ ಮೈಸೂರಿನ ಚಿಂತಕ ಕೆ.ಪಿ. ಸುರೇಶ್ ಮಾತನಾಡಿದರು. -ಪೀರ್ಬಾಷಾ, ಪ್ರಗತಿಪರ ಚಿಂತಕ
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.