![Kundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರು](https://www.udayavani.com/wp-content/uploads/2024/07/kun-1-415x249.jpg)
BJP-JDS ಮೈತ್ರಿ ಕಳ್ಳರು ಕಳ್ಳರು ಸಂತೆ ಮಾಡಿದಂತಿದೆ: ಮುಖ್ಯಮಂತ್ರಿ ಚಂದ್ರು
Team Udayavani, Sep 12, 2023, 6:20 PM IST
![BJP-JDS ಮೈತ್ರಿ ಕಳ್ಳರು ಕಳ್ಳರು ಸಂತೆ ಮಾಡಿದಂತಿದೆ: ಮುಖ್ಯಮಂತ್ರಿ ಚಂದ್ರು](https://www.udayavani.com/wp-content/uploads/2023/09/chandru-620x342.jpg)
ದಾವಣಗೆರೆ: ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಕಳ್ಳರು ಕಳ್ಳರು ಸೇರಿ ಸಂತೆ ಮಾಡಿದಂತೆ ಆಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನ್ನು ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷ ಎಂದೇ ಪ್ರಧಾನಿ ದೂರುತ್ತಿದ್ದರು. ಈಗ ಅದೇ ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷವನ್ನು ತಬ್ಬಿಕೊಳ್ಳಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಈಗ ಪರಿವಾರವಾದಿ, ಕುಟುಂಬ ರಾಜಕಾರಣ ಮಾಡದ ಪಕ್ಷ ಯಾವುದಿದೆ. ಎಲ್ಲ ಪಕ್ಷಗಳು ಮಾಡುತ್ತಿವೆ. ಬಿಜೆಪಿ ಯಲ್ಲೇ 30ಕ್ಕೂ ಹೆಚ್ಚು ಶಾಸಕರು ಅಪ್ಪ, ಮಗ… ಒಂದಿಲ್ಲ ಒಂದು ಸಂಬಂಧಿಗಳೇ ಇದ್ದಾರೆ. ಈಗ ಕೋಮುವಾದ ಮತ್ತು ಜಾತ್ಯತೀತತೆ ಒಂದಾಗುವ ಕಾಲ ಬಂದಿದೆ. ಇದಕ್ಕೆ ಪ್ರಧಾನಮಂತ್ರಿಗಳು ಏನನ್ನುತ್ತಾರೆ ಎಂದು ಪ್ರಶ್ನಿಸಿದರು.
ಒಂದು ದೇಶ… ಒಂದು ಚುನಾವಣೆ ಮೂಲಕ ಇಡೀ ದೇಶದ ಚುನಾವಣಾ ವ್ಯವಸ್ಥೆಯನ್ನೇ ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಸರ್ಕಾರ ಸ್ವಾಮ್ಯದ ತನಿಖಾ ಸಂಸ್ಥೆಗಳ ಮೂಲಕ ಜನರನ್ನ ಬೆದರಿಸುವ ಕೆಲಸ ನಡೆಯುತ್ತಿದೆ. ದೆಹಲಿಯಲ್ಲಿ ಎರಡು ಇಲಾಖೆ ಹೊರತುಪಡಿಸಿ ಇತರೆ ಇಲಾಖೆಯಲ್ಲಿ ಜವಾನ ಹುದ್ದೆ ನೇಮಕಕ್ಕೂ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆಯಬೇಕಾದಂತಹ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿ ಅನುಸರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಇದನ್ನೂ ಓದಿ:Mirzapur; ಕ್ಯಾಶ್ ವ್ಯಾನ್’ನಿಂದ ₹ 39 ಲಕ್ಷ ದೋಚಿದ ದರೋಡೆಕೋರರು; ವಿಡಿಯೋ ನೋಡಿ
ಆಮ್ ಆದ್ಮಿ ಪಾರ್ಟಿಯನ್ನು ರಾಜ್ಯದಲ್ಲಿ ಸಂಘಟಿಸುವ ಉದ್ದೇಶದಿಂದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಲಾ ಐದು ದಿನ ಪ್ರವಾಸ ಮಾಡಲಾಗುವುದು. ಎಲ್ಲಾ ಸೇರೋಣ… ಬನ್ನಿ ಮಾತನಾಡೋಣ ಎಂಬ ಘೋಷವಾಕ್ಯದೊಂದಿಗೆ ಜನರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಗುವುದು. ಉಚಿತವಾಗಿ ಪಕ್ಷದ ಸದಸ್ಯತ್ವ ಆಂದೋಲನ ನಡೆಸಲಾಗುವುದು. ಮುಂದಿನ ಜಿಲ್ಲಾ, ತಾಲೂಕು, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವುದು ಎಂದು ತಿಳಿಸಿದರು.
ದೇಶದಲ್ಲಿನ ಭ್ರಷ್ಟಾಚಾರ, ಲೂಟಿ, ಕೋಮುವಾದದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಆಪ್ ಇಂಡಿಯಾ…ಜೊತೆ ಗುರುತಿಸಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್, ದೆಹಲಿ ಮಾದರಿಯಂತೆ ಕರ್ನಾಟಕದಲ್ಲೂ ಕೆಲವಾರು ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶಕ್ಕೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
![Kundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್ ಹೆಸರಿನಲ್ಲಿ ಲಕ್ಷ ದೋಚಿದರು](https://www.udayavani.com/wp-content/uploads/2024/07/kun-1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-sa-dsadsa](https://www.udayavani.com/wp-content/uploads/2024/07/1-sa-dsadsa-150x84.jpg)
Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ
![1-asdsad](https://www.udayavani.com/wp-content/uploads/2024/07/1-asdsad-150x100.jpg)
Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ
![pejawar swamiji reacts to Rahul Gandhi’s Hindu remark on parliament](https://www.udayavani.com/wp-content/uploads/2024/07/pejara-150x83.jpg)
Hindu remark; ಅಂತವರನ್ನು ದೂರ ಇಡಬೇಕು..: ರಾಹುಲ್ ಹೇಳಿಕೆಗೆ ಪೇಜಾವರಶ್ರೀ ಕಿಡಿ
![“ದರ್ಶನ್ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್](https://www.udayavani.com/wp-content/uploads/2024/07/13-2-150x90.jpg)
“ದರ್ಶನ್ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್
![Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ](https://www.udayavani.com/wp-content/uploads/2024/07/12-3-150x90.jpg)
Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.