BJP ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

ಯಾವ ಕಾರಣಕ್ಕೆ ವಿಜಯೇಂದ್ರ ವಿರುದ್ಧ ವೀಕ್ ಕ್ಯಾಂಡಿಡೇಟ್ ನಿಲ್ಲಿಸಬೇಕಿತ್ತು ?

Team Udayavani, Aug 16, 2024, 6:18 PM IST

renukaacharya

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಶುಕ್ರವಾರ (ಆ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇಮಕ ಮಾಡಿದ್ದಾರೆ. ಅಂತಹ ನಾಯಕರ ತೀರ್ಮಾನವನ್ನ ಪ್ರಶ್ನಿಸಲು ಆಗುತ್ತಾ ಎಂದರು.

ಎಲ್ಲ ಪಕ್ಷಗಳಂತೆ ಬಿಜೆಪಿಯಲ್ಲೂ ಸಣ್ಣ ಪುಟ್ಟ ಸಮಸ್ಯೆ ಇವೆ. ಅವುಗಳನ್ನೆಲ್ಲವನ್ನೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ, ಬಗೆಹರಿಸಲಾಗುವುದು. ಪಕ್ಷದ ಎಲ್ಲ ಹಿರಿಯರು ಎಲ್ಲವನ್ನೂ ಬಗೆಹರಿಸುವರು. ಬಿಜೆಪಿ ಹಿಂದಿನಿಂದ ಮಾತ್ರವಲ್ಲ ಈ ಕ್ಷಣಕ್ಕೂ ಶಿಸ್ತಿನ ಪಕ್ಷ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಜಯೇಂದ್ರ ಅವರು ಗೆದ್ದಿರುವುದು ಕಾಂಗ್ರೆಸ್‌ನ ಭಿಕ್ಷೆ ಯಿಂದ ಎಂಬ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರಿಗೆ ಯಾವುದೇ ಭಿಕ್ಷೆ ಬೇಕಾಗಿಯೇ ಇಲ್ಲ. ಅವರ ತಂದೆ ಯಡಿ ಯೂರಪ್ಪ ಅವರು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ, ಪುರಸಭೆ ಸದಸ್ಯರು, ಅಧ್ಯಕ್ಷರು, ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದವರು. ಅದನ್ನು ನೋಡಿಯೇ ಶಿಕಾರಿಪುರದ ಜನರು ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಹೇಳಿಕೆಯನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾ ಯಿಸಿದರು.

ಡಿ.ಕೆ. ಶಿವಕುಮಾರ್ ಯಾವ ಕಾರಣಕ್ಕೆ ಮತ್ತು ಯಾಕೆ ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ವೀಕ್ ಕ್ಯಾಂಡಿ ಡೇಟ್ ನಿಲ್ಲಿಸಬೇಕಿತ್ತು ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಯಡಿಯೂರಪ್ಪ. ಯಡಿಯೂರಪ್ಪ ಎಂದಿದ್ದರೂ ಯಡಿಯೂರಪ್ಪ. ಅವರಂತಹ ನಾಯಕ ಮತ್ತೆ ಹುಟ್ಟಿ ಬರುವುದಿಲ್ಲ. ಯಡಿಯೂರಪ್ಪ ಯಡಿಯೂರಪ್ಪನೇ ಎಂದು ತಿಳಿಸಿದರು.

ವಿಜಯಪುರ ಶಾಸಕ ಬಸವಗೌಡ ಯತ್ನಾಳ್ ಇತರರು ಪಕ್ಷದ ಹೈಕಮಾಂಡ್ ಅನುಮತಿ ಕೊಟ್ಟರೆ ಮಾತ್ರವೇ ಪಾದಯಾತ್ರೆ ನಡೆಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಹ ಇದೇ ಮಾತು ಹೇಳಿದ್ದಾರೆ. ಹೈಕಮಾಂಡ್ ಪಾದಯಾತ್ರೆಗೆ ಅನುಮತಿ ನೀಡಿದರೆ ನಾವು ಸಹ ಭಾಗವಹಿಸುತ್ತೇವೆ ಎಂದು ತಿಳಿಸಿದರು.

ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ, ಹಿಂದುತ್ವ ಇದೆ. ವಿದ್ಯಾರ್ಥಿಯಾಗಿದ್ದಾಗಲೇ ನಾನು ಜೆಪಿ ಚಳವಳಿಯಿಂದ ರಾಜಕೀಯಕ್ಕೆ ಬಂದವನು. ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿಕೊಂಡು ಬರುತ್ತಿ ದ್ದೇನೆ. ಹಾಗಾಗಿ ನನಗೆ ಕಾಂಗ್ರೆಸ್ ಸೇರುವ ಅನಿವಾರ್ಯತೆ ಮತ್ತು ಅವಶ್ಯಕತೆಯೇ ಇಲ್ಲ. ನಾನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿದ್ದೇನೋ ನಿಜ. ಹೊನ್ನಾಳಿ-ನ್ಯಾಮತಿ ತಾಲೂಕುಗಳನ್ನು ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ, ಹೊನ್ನಾಳಿ ಮುಖಂಡರೊಬ್ಬರ ಕೆಲಸ, ಅಭಿವೃದ್ದಿ ಕಾರ್ಯ ಅನುದಾನಕ್ಕೆ ಒತ್ತಾಯಿಸಿ ಭೇಟಿ ಮಾಡಿದ್ದೆ ಅಷ್ಟೇ. ಅವರೇ ಪಕ್ಷ ಸೇರುತ್ತೀಯಾ… ಎಂದು ತಮಾಷೆ ಮಾಡಿದ್ದರು. ಎಂದು ತಿಳಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

1-a-abhi

ನೂಪುರ್‌ ಪ್ರಸ್ತಾವ‌: ಅಭಿನವ್‌ ಚಂದ್ರಚೂಡ್‌ ವಿರುದ್ಧ ಆಕ್ಷೇಪ

Manipura

Manipur; ಕದ್ದೊಯ್ದ ಶಸ್ತ್ರಾಸ್ತ್ರ ಒಪ್ಪಿಸಿ: ಗವರ್ನರ್‌ ಮನವಿ

bansuri

ಬಾನ್ಸುರಿ ವಿರುದ್ಧ ಮಾಜಿ ಸಚಿವ ಜೈನ್‌ ದಾಖಲಿಸಿದ್ದ ಕೇಸು ವಜಾ

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

ED notice cannot be issued after returning MUDA site: Lawyer Sandesh Chauta

MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ

Davanagere: I can’t say anything about the Hebbalkar-Ravi case: Speaker UT Khader

Davanagere: ಹೆಬ್ಬಾಳ್ಕರ್‌- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್‌ ಖಾದರ್

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

pinarayi

UGC ನಿಯಮದಿಂದ ಕೋಮುವಾದಿಗಳಿಗೆ ಅಧಿಕಾರ: ಪಿಣರಾಯಿ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

1-a-abhi

ನೂಪುರ್‌ ಪ್ರಸ್ತಾವ‌: ಅಭಿನವ್‌ ಚಂದ್ರಚೂಡ್‌ ವಿರುದ್ಧ ಆಕ್ಷೇಪ

Manipura

Manipur; ಕದ್ದೊಯ್ದ ಶಸ್ತ್ರಾಸ್ತ್ರ ಒಪ್ಪಿಸಿ: ಗವರ್ನರ್‌ ಮನವಿ

bansuri

ಬಾನ್ಸುರಿ ವಿರುದ್ಧ ಮಾಜಿ ಸಚಿವ ಜೈನ್‌ ದಾಖಲಿಸಿದ್ದ ಕೇಸು ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.