ಶಾಯಿರಿ ಪ್ರಕಾರ ಹೆಚ್ಚಳವೇ ಇಟಗಿ ಈರಣ್ಣಗೆ ನುಡಿಕಾಣಿಕೆ


Team Udayavani, Mar 27, 2017, 1:09 PM IST

dvg3.jpg

ದಾವಣಗೆರೆ: ಕನ್ನಡದಲ್ಲಿ ಶಾಯಿರಿ ಪ್ರಕಾರವನ್ನು ಇನ್ನೂ ಹೆಚ್ಚು ಸದೃಢಗೊಳಿಸುವ ಮೂಲಕ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ನುಡಿಕಾಣಿಕೆ ಸಲ್ಲಿಸಬೇಕು ಎಂದು ಕವಿ ಚಂದ್ರಶೇಖರ ತಾಳ್ಯ ತಿಳಿಸಿದ್ದಾರೆ. 

ಭಾನುವಾರ ರೋಟರಿ ಬಾಲಭವನದಲ್ಲಿ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ದಾವಣಗೆರೆಯ ಪ್ರಗತಿಪರ ಸಾಹಿತ್ಯ ಪರಿಷತ್ತು ಮತ್ತು ಕಾವ್ಯ ಮಂಡಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಟಗಿ ಈರಣ್ಣ ಅವರು ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ತಕ್ಕುದಾದ ಶಾಯಿರಿ ಕವಿ ಆಗಿದ್ದರು. ಶಾಯಿರಿ ರಚನೆ ಹೆಚ್ಚಿಸುವ ಮೂಲಕ ಅವರಿಗೆ ನಿಜ ಅರ್ಥದಲ್ಲಿ ನುಡಿಕಾಣಿಕೆ ಸಲ್ಲಿಸಬೇಕೆಂದು ತಿಳಿಸಿದರು. ಕನ್ನಡಕ್ಕೆ ಅರೇಬಿಕ್‌ ಮೂಲದಿಂದ ಶಾಯಿರಿ ಪ್ರಾಕಾರ ಬಂದಿದೆ. ಅಂತಹ ಶಾಯಿರಿಯನ್ನು ಕವಿಗೋಷ್ಠಿಯಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. 

ಈಗಂತೂ ಕವಿಗೋಷ್ಠಿ ಎಂದರೆ ತೀರಾ ಸಪ್ಪೆ, ನಿರಾಸೆ ಮೂಡಿಸುವಂತಿರುತ್ತವೆ. ಓದುಗರು ಮತ್ತು ಕೇಳುಗರಲ್ಲಿ ಇರುಸು ಮುರುಸು ಉಂಟು ಮಾಡುವಂತಿರುತ್ತವೆ. ಅಂತಹ ಕಡೆ ಶಾಯಿರಿ ಬಳಸಬೇಕು. ಶಾಯಿರಿ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳಕಿನಂತಿವೆ ಎಂದು ಅಭಿಪ್ರಾಯಪಟ್ಟರು. ಹಳೆಗನ್ನಡ ಮತ್ತಿತರ ಕಡೆ ಶಾಯಿರಿ ಇರಲಿಲ್ಲ.

ಇದ್ದರೂ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ಬಂದಿಲ್ಲ. ನವೋದಯ ಕಾವ್ಯ ಪ್ರಚಲಿತಕ್ಕೆ ಬಂದ ನಂತರ ಹೆಚ್ಚಾಗಿ ಶಾಯಿರಿ ಕಂಡು ಬಂದವು. ಎಲ್ಲಾ ಕಮ್ಮಟದಂತೆ ಶಾಯಿರಿ ಕಮ್ಮಟ ಏರ್ಪಡಿಸುವ ಮೂಲಕ ಹೊಸ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. 

ಸಂತೇಬೆನ್ನೂರಿನ ಯುವ ಕವಿ ಸಂತೆಬೆನ್ನೂರು ಫೈಜ°ಟ್ರಾಜ್‌ ಮಾತನಾಡಿ, ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ಅತಿ ಸರಳವಾದ ಮಾತಿನಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ, ಹೇಳುವಂತಹ ಶಕ್ತಿ ಇತ್ತು. ಸಾಹಿತ್ಯ ವಲಯದಲ್ಲಿ ಈ ರೀತಿಯ ನೆನಪು ಕಾರ್ಯಕ್ರಮಗಳ ಮೂಲಕ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುವುದು ಒಳ್ಳೆಯ ಕಾರ್ಯ.

ಸಾಂಸ್ಕೃತಿಕ ವಲಯದಲ್ಲಿ ಇಂತದ್ದು ಸದಾ ಕಾಡಬೇಕು ಎಂದು ಬಯಸಿದರು. ಇಟಗಿ ಈರಣ್ಣ ಅವರಗಿಂತಲೂ ಮುಂಚೆಯೇ ಈ.ಗೋ. ದುಂಡೆಪ್ಪ, ಕೆಸಿಕೆ, ಆರ್‌. ಎನ್‌. ಕುಬೇರಪ್ಪ ಮುಂತಾದವರು ಶಾಯಿರಿ ರಚಿಸಿದ್ದರು. ಪಾಟೀಲಪ್ಪ ಅವರಿಂದ ಶಾಯಿರಿ ಹುಚ್ಚು ಬೆಳೆಸಿಕೊಂಡಂತಹ ಈರಣ್ಣ ಅವರು ಉತ್ತರ ಕರ್ನಾಟಕದ  ಗಂಡುಮೆಟ್ಟಿನ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಮೂಲಕ ಕನ್ನಡ ಲೋಕಕ್ಕೆ ಶಾಯಿರಿ ಕಾಣಿಕೆ ನೀಡಿದರು ಎಂದು ಸ್ಮರಿಸಿದರು. 

ವಿಶ್ರಾಂತ ಪ್ರಾಚಾರ್ಯ ಪ್ರೊ| ಎಚ್‌.ಎ. ಭಿಕ್ಷಾವರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್‌.ಎಚ್‌. ಹೂಗಾರ್‌, ಹರಪನಹಳ್ಳಿ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌, ಪ್ರಗತಿಪರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳ ಕಾರ್ಯದರ್ಶಿ ನಾಗರಾಜ ಸಿರಿಗೆರೆ ಇತರರು ಇದ್ದರು. 

ಟಾಪ್ ನ್ಯೂಸ್

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.