ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಣ್ಣದ ಮಡಿಕೆ ಒಡೆದರು..
Team Udayavani, Mar 14, 2017, 2:47 PM IST
ಹರಪನಹಳ್ಳಿ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಎಲ್ಲಿ ನೋಡಿದರೂ ಬಣ್ಣ ಎರಚುವ ಪೋರ ಹಾಗೂ ಕಿಶೋರಿಯರು, ಜಾತಿ-ಮತದ ಹಂಗಿಲ್ಲದೇ ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುತ್ತಾ ಜನತೆ ಬಣ್ಣದಲ್ಲಿ ಮಿಂದೆದ್ದರು. ಮತ್ತೂಂದೆಡೆ ಯುವಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಕುಳಿ ತುಂಬಿದ ಮಡಿಕೆ ಒಡೆಯುವ ಆಟದಲ್ಲಿ ಭಾಗವಹಿಸಿ ಸಾಹಸ ಪ್ರವೃತ್ತಿ ಮರೆದರು.
ಪಟ್ಟಣದ ತಾಯವ್ವನ ಹುಣಸೇಮರದ ಹತ್ತಿರ ಸಂಸ್ಕಾರ ಭಾರತಿ ಹಾಗೂ ಸಹೃದಯಿ ನಾಗರಿಕರ ಬಳಗದ ವತಿಯಿಂದ ಸೋಮವಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಕುಳಿ ತುಂಬಿದ ಮಡಿಕೆ ಒಡೆಯುವ ಆಟ ಆಯೋಜಿಸಿದ್ದರು.ಪಟ್ಟಣದ ಯುವಕರು ಉತ್ಸಾಹದಿಂದ ಭಾಗವಹಿಸಿ ರೋಮಾಂಚನ ಮೂಡಿಸಿದರು.
ಈ ಸಂದರ್ಭದಲ್ಲಿ ಯುವಕರ ಶಿಳ್ಳೆ ಮತ್ತು ಚಪ್ಪಾಳೆಗಳ ಝೆಂಕಾರ ಮುಗಿಲು ಮುಟ್ಟಿತ್ತು. ಪ್ರತಿ ವರ್ಷ ಮಡಿಕೆಯನ್ನು ಮರದಲ್ಲಿ ಎತ್ತರಕ್ಕೆ ಕಟ್ಟಿ, ಯುವಕರ ತಂಡ ಒಬ್ಬರ ಮೇಲೊಬ್ಬರು ಹತ್ತಿಕೊಂಡು ಅದನ್ನು ಒಡೆಯುವ ಸಾಹಸ ಮಾಡುತ್ತಿದ್ದರು. ಆದರೆ ಈ ಭಾರಿ ನೆಲದ ಮೇಲೆ ಡ್ರಮ್ ಇಟ್ಟು ಅದರ ಮೇಲೆ ಓಕುಳಿ ಮಡಿಕೆ ಇಟ್ಟು ಕಣ್ಣು ಕಟ್ಟಿ ಒಡೆಸಲಾಯಿತು.
ತಾಪಂ ಸದಸ್ಯ ವೆಂಕಟೇಶರೆಡ್ಡಿ, ಮುಖಂಡ ಓಂಕಾರಗೌಡಸೇರಿದಂತೆ ಹಲವರು ಮಡಿಕೆ ಒಡೆದರು. ಮಡಿಕೆ ಒಡೆಯಲು ಹರಸಾಹಸಪಡುತ್ತಿದ್ದ ದೃಶ್ಯ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಜಿಪಂ ಸದಸ್ಯ ಉತ್ತಂಗಿ ಮಂಜುನಾಥ್,ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಸಂಘಟಕ ಸುರೇಂದ್ರ ಮಂಚಾಲಿ, ಮಹಾವೀರ ಭಂಡಾರಿ, ನಾಗೇಶಭಟ್ ಮತ್ತಿತರರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ಯುವಕರನ್ನು ಹುರಿ ದುಂಬಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್ ಸಿಂಹ
BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ
BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Dandeli : ಸರಣಿ ಕಳ್ಳತನ ಪ್ರಕರಣ… ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
Mangaluru: ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಸಮ್ಮಾನ
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
Karkala: ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
Hubli: ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ…; ಸಿಎಂ ಕುರಿತು ಶೆಟ್ಟರ್ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.