ಆಂತರಿಕ ಸಿರಿವಂತಿಕೆಗೆ ಗಮನ ಕೊಡಿ; ಡಾ| ಬಸವ ಮಾಚಿದೇವ ಸ್ವಾಮೀಜಿ

ಶಿಕ್ಷಿತರಾಗುವುದರ ಜೊತೆಗೆ ಸುಶಿಕ್ಷಿತರಾಗುವುದು ಮುಖ್ಯ

Team Udayavani, Aug 23, 2022, 11:17 AM IST

ಆಂತರಿಕ ಸಿರಿವಂತಿಕೆಗೆ ಗಮನ ಕೊಡಿ; ಡಾ| ಬಸವ ಮಾಚಿದೇವ ಸ್ವಾಮೀಜಿ

ದಾವಣಗೆರೆ: ಶಿಕ್ಷಿತ, ಸುಶಿಕ್ಷಿತ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಬಸವಾದಿ ಶರಣರ ತತ್ವದಲ್ಲಿ ಅಡಗಿದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾಮಠದ ಡಾ| ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ಶ್ರೀ ಮಡಿವಾಳ ಮಾಚಿದೇವ ಸಂಘದ ವತಿಯಿಂದ ವಿನೋಬನಗರದ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ವಾತಾವರಣದಲ್ಲಿ ಶಿಕ್ಷಿತರಾಗುವ ಜೊತೆಗೆ ಸುಶಿಕ್ಷಿತರೂ ಆಗಬೇಕು. ಪೋಷಕರು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಇಲ್ಲದಿದ್ದಲ್ಲಿ ಮುಂದೆ ವೃದ್ಧಾಶ್ರಮಗಳಿಗೆ ತೆರಳುವ ಸನ್ನಿವೇಶ ಎದುರಿಸಬೇಕಾಗುತ್ತದೆ ಎಂದರು.

12ನೇ ಶತಮಾನದಲ್ಲಿ ಸಾಮಾನ್ಯರಾಗಿದ್ದ ಬಸವಾದಿ ಶರಣರೇ ಕ್ರಾಂತಿಕಾರಿಕ ಬದಲಾವಣೆ ತಂದರು. ಸಾವಿರ ವರ್ಷ ಕಳೆದರೂ ಅವರ ವಿಚಾರಗಳೇ ನಮ್ಮನ್ನೇ ಆಳುತ್ತಿವೆ. ಉಳ್ಳವರೇ ಜಗತ್ತನ್ನು ಆಳುತ್ತಾರೆ ಎನ್ನುವುದು ಸುಳ್ಳು, ವಿದ್ಯಾವಂತರು, ಪ್ರತಿಭಾವಂತರೇ ಜಗತ್ತನ್ನು ಆಳುತ್ತಾರೆ. ಶೋಷಿತ ಮತ್ತು ತಳ ಸಮುದಾಯಗಳು ಸಿರಿವಂತಿಕೆಯೇ ಎಲ್ಲವೂ ಎನ್ನುವ ಹುಚ್ಚಿನಲ್ಲಿ ಅದರ ಬೆನ್ನತ್ತಿ ಹೋಗುತ್ತಿದ್ದೇವೆ. ಜ್ಞಾನ ಮರೆಯುತ್ತಿದ್ದೇವೆ.

ಆದರೆ ಮುಂದುವರೆದ ಸಮುದಾಯಗಳು ಜ್ಞಾನದ ಬೆನ್ನತ್ತಿರುವ ಕಾರಣ ಎಲ್ಲವೂ ಅವರಿಗೆ ಸಿಗುತ್ತದೆ. ಜ್ಞಾನದ ಸಿರಿವಂತಿಕೆ ಮುಂದೆ ಎಲ್ಲವೂ ಶೂನ್ಯ. ಬಾಹ್ಯವಾಗಿ ಕಾಣುವ ಸಿರಿವಂತಿಕೆ ಬದಲು ಜ್ಞಾನದ ಬೆಳಕನ್ನು ಹಚ್ಚಿಕೊಂಡು ಆಂತರಿಕವಾಗಿ ಸಿರಿವಂತರಾಗಬೇಕು ಎಂದು ಸಲಹೆ ನೀಡಿದರು.

ಮೂಡಬಿದರೆ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಮಡಿವಾಳ ಸಮಾಜಕ್ಕೆ ಅಸ್ಪೃಶ್ಯತೆ ಇದೆ. ನಮ್ಮನ್ನು ಯಾರೂ ಮಾತನಾಡಿಸಲ್ಲ ಎನ್ನುವ ಮಾತುಗಳು ಕೇಳಿ ಬರುತ್ತವೆ. ರಾಜಕೀಯವಾಗಿ ಅಸ್ತಿತ್ವಕ್ಕೆ ಬರಲು ನಾವು ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಜಯ ಸಿಗುವವರೆಗೂ ವಿರಮಿಸಬಾರದು. ಆಗ ಎಲ್ಲ ಕ್ಷೇತ್ರಗಳಲ್ಲಿ ಜಯ ನಿಶ್ಚಿತ ಎಂದು ಹೇಳಿದರು.

ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ|ಎ.ಎಚ್‌. ಶಿವಯೋಗಿಸ್ವಾಮಿ ಮಾತನಾಡಿ, ಶಿಕ್ಷಿತರಾಗುವುದರ ಜೊತೆಗೆ ಸುಶಿಕ್ಷಿತರಾಗುವುದು ಮುಖ್ಯ. ಇದು ಬೌದ್ಧಿಕ ಶಕ್ತಿಯ ಕಾಲಮಾನವಾಗಿದೆ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಕ ಗಳಿಕೆಯ ಜೊತೆ ಸುಶಿಕ್ಷಿತರಾಗಬೇಕು. ಸಮಾಜ, ದೇಶ, ಸಂಸ್ಕೃತಿಗೆ ಧಕ್ಕೆ ಬಂದಾಗ ಸಂಘಟಿತರಾಗಿ ಉಳಿಸಿ, ಬೆಳೆಸಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್‌ ಮಾತನಾಡಿ, ಮಡಿವಾಳ ಮಾಚಿದೇವ ಸಂಘದ ಸಮುದಾಯ ಭವನ ರಸ್ತೆಗೆ ಮಾಚಿದೇವ ರಸ್ತೆ ಹೆಸರಿಡಲು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಮಡಿಕಟ್ಟೆಯಲ್ಲಿ ಆಧುನಿಕ, ಸುಸಜ್ಜಿತ ಯಂತ್ರ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದದರು.

ಸಂಘದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಚ್‌.ಜಿ. ಉಮೇಶ್‌, ಓಂಕಾರಪ್ಪ, ಆರ್‌.ಎನ್‌. ಧನಂಜಯ, ಸುರೇಶ್‌ ಕೋಗುಂಡೆ, ಎಂ. ನಾಗರಾಜ್‌, ಮಹಾನಗರಪಾಲಿಕೆ ಸದಸ್ಯ ಎ. ನಾಗರಾಜ್‌, ಹರಪನಹಳ್ಳಿ ಪುರಸಭೆ ಅಧ್ಯಕ್ಷ ಎಚ್‌.ಎಂ. ಅಶೋಕ ಹರಾಳ್‌, ಬಿ.ಆರ್‌. ಪ್ರಕಾಶ್‌, ಎಸ್‌.ಎಲ್‌. ಆನಂದಪ್ಪ, ಜೆ.ಎಚ್‌. ನಾಗರಾಜ್‌, ಶ್ವೇತಾ ಗಾಂಧಿ, ಎಂ.ಎನ್‌. ಬಸವರಾಜಪ್ಪ, ಪತ್ರಕರ್ತ ಎಂ.ವೈ. ಸತೀಶ್‌, ಪಿ. ಮಂಜುನಾಥ್‌, ಜಿ. ವಿಜಯಕುಮಾರ್‌, ಯೋಗಪಟು ಎನ್‌. ಪರಶುರಾಮ, ಅಂಜಿನಪ್ಪ ಪೂಜಾರ್‌, ಎಂ. ರುದ್ರೇಶ್‌, ಸಿ. ಗುಡ್ಡಪ್ಪ, ಎಚ್‌.ದುಗ್ಗಪ್ಪ ಇತರರು ಇದ್ದರು.

12ನೇ ಶತಮಾನದಲ್ಲಿ ಮಾಚಿದೇವರು ಏಕಾಂಗಿಯಾಗಿ ಒಬ್ಬ ರಾಜನ ವಿರುದ್ದ ಹೋರಾಡಿ ಜಯ ಕಂಡರು. ಜಯ ಕಾಣುವವರೆಗೆ ಅವರು ವಿರಮಿಸಲಿಲ್ಲ. ಅವರ ಕುಲಸ್ಥರಾದ ಮಡಿವಾಳ ಸಮಾಜ ಬಾಂಧವರು ಹೋರಾಟದ ಮೂಲಕವೇ ಎಲ್ಲವನ್ನು ಪಡೆಯಬೇಕು.
ಶ್ರೀ ಮುಕ್ತಾನಂದ ಸ್ವಾಮೀಜಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

Davanagere: Basanagowda Yatnal expelled from the party?: What did Vijayendra say?

Davanagere: ಪಕ್ಷದಿಂದ ಯತ್ನಾಳ್‌ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?

prison

Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ

Udayagiri police station attack case: Muthalik sparks controversy

Davanagere: ಉದಯಗಿರಿ ಪೊಲೀಸ್‌ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.