ಹಿಜಾಬ್ಗ ಅವಕಾಶಕ್ಕೆಆಗ್ರಹಿಸಿ ಪಟ್ಟು
Team Udayavani, Feb 17, 2022, 12:53 PM IST
ಶಿವಮೊಗ್ಗ: ಹಿಜಾಬ್ ವಿವಾದ ಬುಧವಾರಕೂಡ ಮುಂದುವರಿದಿದೆ. ಹಿಜಾಬ್ಧರಿಸಲು ಅವಕಾಶ ನೀಡುವಂತೆಒತ್ತಾಯಿಸಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ.
ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಬೆಳಗ್ಗೆಕಾಲೇಜು ಆರಂಭವಾಗುತ್ತಿದ್ದಂತೆಹಿಜಾಬ್ ಧರಿಸಿ ಅನೇಕ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದರು.ಆದರೆ ಆಡಳಿತ ಮಂಡಳಿ ಕೋರ್ಟ್ಆದೇಶದಂತೆ ಹಿಜಾಬ್ ತೆಗೆದು ತರಗತಿಯಲ್ಲಿ ಕೂರುವಂತೆ ಸೂಚಿಸಿತು. ಆದರೆಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದರು.
ಹಿಬಾಬ್ ನಮ್ಮಜನ್ಮಸಿದ್ಧ ಹಕ್ಕು. ಸಾಂವಿಧಾನಿಕ ಹಕ್ಕಾಗಿದ್ದು,ಹೈಕೋರ್ಟ್ ಆದೇಶ ಏನೇ ಇರಲಿ.ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕುಎಂದು ಪಟ್ಟು ಹಿಡಿದರು. ಕೋರ್ಟ್ಆದೇಶ ಇನ್ನೂ ಬಂದಿಲ್ಲ. ಹಾಗಾಗಿ ನಾವುಹಿಜಾಬ್ ಧರಿಸಿಯೇ ತರಗತಿಯೊಳಗೆಕೂರುವುದಕ್ಕೆ ಬಿಡಬೇಕು. ಇದೆಲ್ಲತಾರತಮ್ಯ ಯಾಕೆ ಎಂದು ಕಾಲೇಜುಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.
ವಿದ್ಯಾರ್ಥಿನಿ ಯರೊಂದಿಗೆಕಾಲೇಜಿಗೆ ಬಂದಿದ್ದ ಪೋಷಕರುಕೂಡ ಪ್ರವೇಶ ನಿರಾಕರಿಸಿದ ಕಾಲೇಜುಆಡಳಿತ ಮಂಡಳಿ ವಿರುದ್ಧ ಆಕ್ರೋಶಹೊರ ಹಾಕಿದರು. ಕಾಲೇಜು ಪ್ರವೇಶದಸಂದರ್ಭದಲ್ಲಿ ಅದು, ಇದು ಅಂತೆಲ್ಲಲಕ್ಷ ಗಟ್ಟಲೆ ಶುಲ್ಕ ತೆಗೆದುಕೊಳ್ಳುತ್ತೀರಿ.ಈಗ ಅದು ಬೇಡ, ಇದು ಬೇಡ ಎಂದುವಿದ್ಯಾರ್ಥಿಗಳ ನಡುವೆ ನೀವೇ ತಾರತಮ್ಯಸೃಷ್ಟಿ ಮಾಡುತ್ತಿದ್ದೀರಿ. ನೀವು ಸರಿಯಾದಕ್ರಮ ತೆಗೆದುಕೊಂಡರೆ ಇದೆಲ್ಲ ಆಗುತ್ತಾಎಂದು ಕಿಡಿಕಾರಿದರು.
ಇಷ್ಟಾಗಿಯೂಪ್ರವೇಶ ನೀಡದ ಹಿನ್ನೆಲೆಯಲ್ಲಿ ಡಿವಿಎಸ್ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದಹಲವು ವಿದ್ಯಾರ್ಥಿನಿಯರು ವಾಪಸ್ಮನೆಗೆ ತೆರಳಿದರು. ಡಿವಿಎಸ್ ಕಾಲೇಜುಮಾದರಿಯಲ್ಲೇ ನಗರದ ಎಟಿಎಸ್ ಸಿಸಿಕಾಲೇಜಿನಲ್ಲೂ ಬೆಳಗ್ಗೆ ಹಿಜಾಬ್ ಧರಿಸಿಕಾಲೇಜಿಗೆ ಬಂದ ಸುಮಾರು 20 ಮುಸ್ಲಿಂಸಮುದಾಯ ವಿದ್ಯಾರ್ಥಿನಿಯರನ್ನುಒಳಗೆ ಬಿಟ್ಟುಕೊಳ್ಳಲಾಯಿತು. ಆದರೆಕಾಲೇಜಿನ ತರಗತಿ ಒಳಗೆ ಪ್ರವೇಶಿಸುವಾಗಹಿಜಾಬ್ ತೆಗೆಯುವಂತೆ ಕಾಲೇಜಿನಸಿಬ್ಬಂದಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಮನವೊಲಿಸಲು ಪ್ರಯತ್ನಿಸಿದರೂಪ್ರಯೋಜನವಾಗಲಿಲ್ಲ.
ತರಗತಿಗಳಿಂದಹೊರ ನಡೆದರು. ಪೊಲೀಸರು ಸೆಕ್ಷನ್144 ಜಾರಿ ಯಲ್ಲಿರುವುದರಿಂದ ಗುಂಪುಗೂಡಬೇಡಿ. ಕಾಲೇಜಿಗೆ ಹೋಗಿ ಇಲ್ಲವೇಮನೆಗೆ ತೆರಳಿ ಎಂದು ತಿಳಿಸಿದರು.ಮುನ್ನೆಚ್ಚರಿಕೆ ಕ್ರಮವಾಗಿ ಬಾಪೂಜಿನಗರದ ಸರ್ಕಾರಿ ಪದವಿ ಕಾಲೇಜುಮತ್ತು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿಪಪೂ ಕಾಲೇಜಿಗೆ ರಜೆ ಘೋಷಿಸಲಾಗಿತ್ತು.ಕಾಲೇಜಿನೊಳಗೆ ಮಾಧ್ಯಮದವರಿಗೆಪ್ರವೇಶ ನಿರಾಕರಿಸಲಾಗಿತ್ತು.ಬಿಗಿ ಪೊಲೀಸ್ ಬಂದೋಬಸ್ತ್ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.