ಷಟಲ್ ಬ್ಯಾಡ್ಮಿಂಟನ್: ಕೇರಳ ಜೋಡಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ
Team Udayavani, Feb 24, 2017, 12:25 PM IST
ದಾವಣಗೆರೆ: ಅಖೀಲ ಭಾರತ ಹಿರಿಯರ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ್ಯಾಂಕಿಂಗ್ನ ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಮಹಾರಾಷ್ಟ್ರದ ಅಕ್ಷಯ್ ರಾವತ್, ರೈಲ್ವೇಸ್ನ ಕಬೀರ್ ಖಂಜರ್ಕರ್ ಪ್ರಶಸ್ತಿ ಪಡೆದಿದ್ದಾರೆ.
ದಾವಣಗೆರೆಯ ನೇತಾಜಿ ಸುಭಾಶ್ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಅಕ್ಷಯ್ ರಾವತ್ ಮತ್ತು ಕಬೀರ್ ಖಂಜರ್ಕರ್ ಜೋಡಿ ತಮಿಳುನಾಡಿನ ಆರ್. ಮೊಹಮ್ಮದ್ ರೆಹಾನ್ ಹಾಗೂ ವಿ. ವೆಲವನ್ ಜೋಡಿ ವಿರುದ್ಧ 21-10, 21-10 ರಲ್ಲಿ ಜಯಗಳಿಸಿ, ಪ್ರಶಸ್ತಿ ಗಳಿಸಿತು.
ಮಹಿಳಾ ವಿಭಾಗದ ಪ್ರಶಸ್ತಿ ಕೇರಳದ ಆಗ್ನ ಆ್ಯಂಟೋ, ಸ್ನೇಹಾ ಶಾಂತಿಲಾಲ್ ಪಾಲಾಯಿತು. ಪ್ರಶಸ್ತಿ ಸುತ್ತಿನಲ್ಲಿ ಆಗ್ನ ಆ್ಯಂಟೋ ಮತ್ತು ಸ್ನೇಹಾ ಶಾಂತಿಲಾಲ್ ಜೋಡಿ ಮಹಾರಾಷ್ಟ್ರದ ಸಂಯೋಗಿತಾ ಘೋರ್ಪಡೆ ಹಾಗೂ ರೈಲ್ವೇಸ್ನ ಧನ್ಯಾ ನಾಯರ್ ಜೋಡಿ ವಿರುದ್ಧ 24-22, 21-19 ರಲ್ಲಿ ಗೆಲುವು ಸಾಧಿಸಿದರು. ಪ್ರಥಮ ಸೆಟ್ ತೀವ್ರ ಹಣಾಹಣಿಯಿಂದ ಕೂಡಿತ್ತು. ಪ್ರತಿ ಪಾಯಿಂಟ್ಗೆ ಭಾರೀ ಪೈಪೋಟಿ ನಡೆಯಿತು.
ಎರಡನೇ ಸುತ್ತಿನಲ್ಲಿ ಆಗ್ನ ಆ್ಯಂಟೋ, ಸ್ನೇಹಾ ಶಾಂತಿಲಾಲ್ ನಿರಾಯಾಸ ಜಯ ಸಾಧಿಸಿದರು. ಮಿಕ್ಸೆಡ್ ಡಬಲ್ಸ್ನಲ್ಲಿ ಉತ್ತಮ ಆಟವಾಡಿದ ದೆಹಲಿಯ ಉತ್ಕರ್ಷ್ ಅರೋರಾ ಮತ್ತು ಮಹಾರಾಷ್ಟ್ರದ ಕರೀಷ್ಮಾ ವಾಡಕರ್ ಜೋಡಿಯು ದೆಹಲಿಯ ವಿಶಾಂತ್ ದುವಾ, ಅನಾಮಿಕ ಕಶ್ಯಪ್ ವಿರುದ್ಧ 21-7, 21-17 ರಲ್ಲಿ ಗೆಲುವಿನ ನಗೆ ಬೀರಿ, ಪ್ರಶಸ್ತಿ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mudbidri ಅರಮನೆ ಆನೆಬಾಗಿಲಿಗೆ ಟ್ರಕ್ ಡಿಕ್ಕಿ ಹೊಡೆದು ಹಾನಿ
Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ ಖಂಡನೆ; ಮನವಿ ಸಲ್ಲಿಕೆ
High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ
Hunsur: ಮಾಜಿ ಶಾಸಕ ಮಂಜುನಾಥ್ಗೆ ಎಚ್1ಎನ್1 ದೃಢ; ಖಾಸಗಿ ಆಸ್ಪತ್ರೆಗೆ ದಾಖಲು
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್ಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.