ಗುರುಗಳಿಗೇ ಮಹಾನ್‌ ಗುರುಗಳಾಗಿದ್ದ ಜಯದೇವ ಶ್ರೀ


Team Udayavani, Mar 27, 2017, 1:14 PM IST

dvg5.jpg

ದಾವಣಗೆರೆ: ಶೈಕ್ಷಣಿಕ ಕ್ಷೇತ್ರಕ್ಕೆ ಮಠಮಾನ್ಯಗಳು ಶೇ.75ರಷ್ಟು ವಿದ್ಯಾವಂತರನ್ನ ಸಮಾಜಕ್ಕೆ ಕಾಣಿಕೆಯಾಗಿ ನೀಡಿವೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಬಸವ ಚೇತನ ಶ್ರೀ ಜಯದೇವ ಸ್ವಾಮೀಜಿಯವರ 60ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಅಂಗವಾಗಿ ಭಾನುವಾರ ಶ್ರೀ ಜಯದೇವಲೀಲೆ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಚಿತ್ರದುರ್ಗ ಬೃಹನ್ಮಠದಂತಹ ಮಠಾಧೀಶರಾಗಿದ್ದ ಅವರು ತಮ್ಮ ಸಮಾಜಮುಖೀ, ಸಮಾಜಯೋಗಿಯಾಗಿ ಆಲೋಚನೆ ಮಾಡಿ ಉಚಿತ ಜಯದೇವ ಪ್ರಸಾದ ನಿಲಯ ಪ್ರಾರಂಭಿಸುವ ಮೂಲಕ ಮಹತ್ತರ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದವರು. ಸಾವಿರಾರು ಜನರ ಬದುಕಿಗೆ ಬೆಳಕಾದವರು ಎಂದು ಸ್ಮರಿಸಿದರು. ನೀರಿನ ಮೂಲದಿಂದ ಸೃಷ್ಟಿಯಾದ ಉಪ್ಪು, ಆಲೆಕಲ್ಲು ಕರಗುತ್ತದೆ. ಆದರೆ, ಮುತ್ತು ಕರುಗುವುದೇ ಇಲ್ಲ.

ಮುತ್ತುವಿನಂತೆ ಜೀವನ ನಡೆಸಿದವರು ಬಸವಾದಿ ಶರಣರು. ಅಂತಹವರ ಸಾಲಿನಲ್ಲಿ ಜಯದೇವ ಸ್ವಾಮೀಜಿಯವರು ಸಹ ಒಬ್ಬರು. ಬಸವಾದಿ ಶರಣರಂತೆಯೇ ಜಯದೇವ ಸ್ವಾಮೀಜಿಯವರು ಆದರ್ಶಕ್ಕೆ ಮಹತ್ವ ಕೊಟ್ಟವರು. ಅವರ ಯುಗವನ್ನು ಸುವರ್ಣ ಯುಗ ಎನ್ನಲಾಗುತ್ತದೆ. ಅವರು ಮಾಡಿರುವಂತಹ ಕಾಯಕ ಯುಗ ಯುಗ ಕಳೆದರೂ ಅವಿಸ್ಮರಣೀಯವಾಗಿರುತ್ತವೆ ಎಂದು ತಿಳಿಸಿದರು. 

ತ್ರಿವಿಧ ದಾಸೋಹ ಮೂರ್ತಿಗಳಾಗಿದ್ದ ಜಯದೇವ ಸ್ವಾಮೀಜಿಯವರು ದಾವಣಗೆರೆಯಲ್ಲಿ 1907 ರಲ್ಲಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸುವ ಮೂಲಕ ಉಚಿತ ಪ್ರಸಾದ ನಿಲಯಕ್ಕೆ ಕಾರಣೀಭೂತರಾದರು. ಹಾಗಾಗಿಯೇ ಅವರನ್ನು ಉಚಿತ ಪ್ರಸಾದ ನಿಲಯಗಳ ಪಿತಾಮಹಾ, ಸಮಾಜಯೋಗಿ, ಯುಗಪುರುಷ, ಯುಗಪ್ರವರ್ತಕ ಎಂದೇ ಗುರುತಿಸಲ್ಪಡುತ್ತಾರೆ.

ಅವರು ಬೆಂಗಳೂರು, ಮೈಸೂರು, ಕೊಲ್ಲಾಪುರ, ತುಮಕೂರು ಇತರೆಡೆ ಪ್ರಾರಂಭಿಸಿದಂತಹ ಉಚಿತ ಪ್ರಸಾದ ನಿಲಯಗಳು ಶತಮಾನ ಕಂಡರೂ ಈ ಕ್ಷಣಕ್ಕೂ ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ಅವರ ದೂರದೃಷ್ಟಿತ್ವವೇ  ಕಾರಣ ಎಂದು ತಿಳಿಸಿದರು. ಜಯದೇವಶ್ರೀಗಳು ಗುರುಗಳಿಗೇ ಗುರುಗಳಾಗಿದ್ದಂತಹವರು. ಕರ್ನಾಟಕದ ಏಕೀಕರಣಕ್ಕೆ ಮಹತ್ತರ ಕಾಣಿಕೆ ನೀಡಿದವರು. 

ರಾಷ್ಟ್ರಪಿತ ಮಹಾತ್ಮಗಾಂಧೀಜಿ 1937 ರಲ್ಲಿ ಹಾವೇರಿಯ ಹೊಂಡದಮಠದಲ್ಲಿ ಜಯದೇವಶ್ರೀಗಳು ಅವರನ್ನು ಭೇಟಿ ಮಾಡಿ, ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಕ್ರಾಂತಿಯನ್ನು ಗಾಂಧೀಜಿಯವರಿಗೆ ತಿಳಿಸಿದ್ದರು. ಅಂತಹವರ ಸ್ಮರಣೆಯನ್ನು ನಿತ್ಯವೂ ಮಾಡಬೇಕು ಎಂದು ತಿಳಿಸಿದರು. ಜಯದೇವಶ್ರೀಗಳು ಚಿತ್ರದುರ್ಗ ಮಠಕ್ಕೆ ಬಂದಾಗ ಮಠದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಸಾಲದಲ್ಲಿತ್ತು.

ಅಂತಹ ಮಠವನ್ನು ಶ್ರೀಮಂತ ಮಠವನ್ನಾಗಿ ಮಾಡುವ ಮೂಲಕ ನವಕೋಟಿ ನಾರಾಯಣ ಎಂಬ ಹೆಸರನ್ನು ಪಡೆದಿದ್ದು ಅವರಲ್ಲಿನ ಕತೃìತ್ವ ಶಕ್ತಿಯ ಪ್ರತೀಕ ಎಂದು ತಿಳಿಸಿದರು. ಶ್ರೀ ಜಯದೇವ ಲೀಲೆ ಪ್ರವಚನ ನೀಡಿದ ಯಲಬುರ್ಗದ ಮಹಾಂತೇಶ್‌ ಶಾಸ್ತ್ರಿ ಮಾತನಾಡಿ, ಇಂದಿನ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಬಿನ್ನಾಳದಲ್ಲಿ ಚನ್ನಬಸವಯ್ಯ ಹಾಗೂ ಭ್ರಮರಾಂಬ ದಂಪತಿಗಳ ಪುಣ್ಯಗರ್ಭದಲ್ಲಿ ಜನಿಸಿದ

ಚನ್ನವೀರಯ್ಯ ಮುಂದೆ ಜಯದೇವ ಸ್ವಾಮೀಜಿಯಾಗಿ ಚಿತ್ರದುರ್ಗ ಮಠದ ಅಧಿಪತಿಯಾಗಿ ಸಮಾಜಕ್ಕೆ ಉತ್ತಮ ಸೇವೆ  ಸಲ್ಲಿಸಿದರು. ಜಯದೇವ ಸ್ವಾಮೀಜಿಯವರು ದೀಕ್ಷೆ, ಶಿಕ್ಷೆ ಮತ್ತು ಮೋಕ್ಷ ಎಂಬ ಮೂರು ಮಂತ್ರಗಳ ಮೂಲಕ ಸಮಾಜಮುಖೀಯಾದವರು ಎಂದು ತಿಳಿಸಿದರು. ಮಾಜಿ ಶಾಸಕ ಮೋತಿ ವೀರಣ್ಣ ಉದ್ಘಾಟಿಸಿದರು. ಡಾ| ಎಸ್‌.ಎಂ. ಎಲಿ ಇತರರು ಇದ್ದರು. ದಮಯಂತಿಗೌಡ ನಿರೂಪಿಸಿದರು.  

ಟಾಪ್ ನ್ಯೂಸ್

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್‌ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!

ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್‌ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.