ಕವಿ ಗ್ರಹಿಸಿರುವ ಅನುಭವವೇ ಸಂಕಲನ


Team Udayavani, May 15, 2017, 1:05 PM IST

dvg4.jpg

ಹರಪನಹಳ್ಳಿ: ಕವಿಯಾದವನಿಗೆ ಹೇಳಲು ವಿಷಯವಿರಬೇಕು ಮತ್ತು ಅದನ್ನು ಹೇಳಲು ಬರಬೇಕು. ದುರಾದೃಷ್ಟರವೆಂದರೆ ಹೇಳಲಿಕ್ಕೆ ಏನೂ ವಿಷಯವಿಲ್ಲದವರ ಬಳಿ ಹೇಳುವ ಕಲೆ, ನೈಪುಣ್ಯತೆ ಅಡಗಿದೆ. ಹಾಗಾಗಿ ವೇದ ಉಪನಿಷತ್‌, ಪುರಾಣಗಳಲ್ಲಿ ಹೇಳಿರುವುದನ್ನೇ ಹಾಡಿದ್ದು ಹಾಡೋ ಕಿಸುಬಾಯಿ ದಾಸ ಎಂಬಂತೆ ಮತ್ತೆ ಮತ್ತೆ ಬರೆಯುತ್ತಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್‌ ಹೇಳಿದರು. 

ಪಟ್ಟಣದ ತಾಪಂ ಸಾಮರ್ಥ್ಯಸೌಧ ಆವರಣದಲ್ಲಿ ಭಾನುವಾರ ಶಿವಮೊಗ್ಗ ಸಿರಿಗನ್ನಡ ಪುಸ್ತಕ ಮನೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಉಪನ್ಯಾಸಕ ದುಗೇಶ್‌ ಪೂಜಾರ್‌ ಅವರ “ಮಸಣದ ಮುತ್ತು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎಪ್ಪತ್ತರ ದಶಕದಲ್ಲಿ ಕಟ್ಟುಪಾಡಿನ ಬಂಧನದ ಕಟ್ಟೆ ಸಿಡಿದು ಪ್ರವಾಹ ಶುರುವಾಯ್ತು.

3ಸಾವಿರ ವರ್ಷಗಳ ನಂತರ ಹೇಳಲಿಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡದಲ್ಲಿ ದಾಖಲಾಗದಿರುವ ಬದುಕಿನ ಅನುಭವದ ಲೋಕವನ್ನು ತೆರೆದಿಡುವವರು ಇದೀಗ ನದಿಯಾಗಿ ಭೋರ್ಗರೆಯುತ್ತಿದ್ದಾರೆ. ಯಾವುದನ್ನು ಹೇಳಲು ಪವಿತ್ರವೋ ಉಳಿದೆಲ್ಲವೂ ನಗಣ್ಯ ಎನ್ನುವುದು ಮನುಷ್ಯ ಸಮುದಾಯಕ್ಕೆ ಅಪಾಯಕಾರಿ.

12ನೇ ಶತಮಾನದಲ್ಲಿ ಬಸವಣ್ಣ, ದಾಸರು, ದಲಿತ, ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಸಂಖ್ಯಾತ ಜನರು ಸೇರಿ ಸಾಹಿತ್ಯದ ಮೂಲಕ ಅನುಭವ ಹಂಚಿಕೊಂಡು ಸಂಸ್ಕೃತ ದಾರಿದ್ರ ಕೊನೆಗಾಣಿಸಿದ್ದಾರೆ ಎಂದು ತಿಳಿಸಿದರು. ಲೌಕಿಕ ದಾರ್ಶನಿಕತೆಯನ್ನು ಹೊಂದಿರುವ ಕಾರಣಕ್ಕೆ ಕವಿ ಬಹಳ ಮುಖ್ಯವಾಗುತ್ತಾನೆ. 

ಎಲ್ಲಾ ಕವಿಗಳ ದೃಷ್ಟಿಕೋನ ಒಂದೇ ಅಲ್ಲ, ಅವರವರ ಅನುಭವಕ್ಕೆ ತಕ್ಕಂತೆ ಒಂದು ದರ್ಶನವಿರುತ್ತದೆ. ಕವಿ ಗ್ರಹಿಸಿರುವ  ಅನುಭವವನ್ನು ಜನರಿಗೆ ತಲುಪಿಸುವ ಪ್ರಯತ್ನವೇ ಸಂಕಲನ. ಸಾಮಾನ್ಯ ಪದಗಳಲ್ಲಿ ಅಸಮಾನ್ಯವಾದ ಸಂದೇಶ ಸಾರುವವನೇ ನಿಜವಾದ ಕವಿ. ಇದೀಗ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬಂದಿರುವುದರಿಂದ ಪುನಃ ಕವಿಗಳಾಗುವ ಸಮಯ ಬಂದಿದೆ ಎಂದರು. 

ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಇಂದು ವರ್ಗ ಹಾಗೂ ಶೋಷಣೆ ರಹಿತ ಲಿಂಗಭೇಧವಿಲ್ಲದ ಸಮಾಜವನ್ನು ಕಟ್ಟಬೇಕಾಗಿದ್ದು, ಬುದ್ದ, ಬಸವಣ್ಣ, ಅಂಬೇಡ್ಕರ್‌, ಪೆರಿಯಾರ್‌, ಗಾಂಧಿಧೀಜಿ ಅವರ ವಿಚಾರಧಾರೆಗಳನ್ನು ನಾಶಗೊಳಿಸುವ ಕೆಲಸ ನಡೆಯುತ್ತಿವೆ.  

ಮನುಷ್ಯ ಮನುಷ್ಯರನ್ನು ಪ್ರೀತಿಸುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ ಎಂದರು. ಕೃತಿ ಕುರಿತು ಸಾಹಿತಿ ಮಲ್ಲಿಕಾರ್ಜುನ ಕಲರಹಳ್ಳಿ, ಅಕ್ಷರ ಸೀಡ್ಸ್‌ ಕಂಪನಿ ಮಾಲೀಕ, ಬಿಜೆಪಿ ಮುಖಂಡ ಎನ್‌.ಕೊಟ್ರೇಶ್‌, ಭದ್ರಾವತಿ ಆಕಾಶವಾಣಿ ಹಿರಿಯ ಉದ್ಘೋಷಕ ಕೆ.ಎಂ.ಶಿವಕುಮಾರ್‌, ಪ್ರಕಾಶಕ ಕೆ.ಸುಂದರ್‌, ಲೇಖಕ ದುಗೇìಶ್‌ ಪೂಜಾರ್‌ ಮಾತನಾಡಿದರು.

ಕಸಾಪ ಅಧ್ಯಕ್ಷ ಡಿ.ರಾಮನಮಲಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್‌, ಇಒ ಬಿ.ರೇವಣ್ಣ, ಕಲಾವಿದ ಪೂಜಾರ ಚಂದ್ರಪ್ಪ, ಪುಣಬಗಟ್ಟಿ ನಿಂಗಪ್ಪ, ಸಿ.ಗಂಗಾಧರ್‌, ಎಚ್‌. ಎಂ.ಜುಂಜಪ್ಪ ಇತರರು ಉಪಸ್ಥಿತರಿದ್ದರು.  

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

ಸಿಎಂ ರಾಜೀನಾಮೆ ಕೊಡಲ್ಲ, ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್. ಮಲ್ಲಿಕಾರ್ಜುನ್

Davanagere; ಸಿಎಂ ರಾಜೀನಾಮೆ ಕೊಡಲ್ಲ,ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್.ಮಲ್ಲಿಕಾರ್ಜುನ್

Davanagere City Corporation: new Mayor-Deputy Mayor elected

Davanagere City Corporation: ನೂತನ ಮೇಯರ್-ಉಪ ಮೇಯರ್‌ ಆಯ್ಕೆ

Shamanuru Shivashankarappa

Raj Bhavan ದುರ್ಬಳಕೆ ಮಾಡಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ: ಶಾಮನೂರು ಶಿವಶಂಕರಪ್ಪ

Davanagere; ಬಿಜೆಪಿ ವಿರುದ್ದ ಶೋಷಿತ ಸಮುದಾಯದ ಒಕ್ಕೂಟದಿಂದ ಮೌನ ಪ್ರತಿಭಟನೆ

Davanagere; ಬಿಜೆಪಿ ವಿರುದ್ದ ಶೋಷಿತ ಸಮುದಾಯದ ಒಕ್ಕೂಟದಿಂದ ಮೌನ ಪ್ರತಿಭಟನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.