ಹೆತ್ತವರಿಲ್ಲ ಎಂಬ ಕೊರಗು ಬೇಡವೇ ಬೇಡ
Team Udayavani, Feb 22, 2017, 12:57 PM IST
ದಾವಣಗೆರೆ: ಯಾವುದೋ ಕಾರಣ, ಸಂದರ್ಭದಿಂದಾಗಿ ತಂದೆ-ತಾಯಿ ಕಳೆದುಕೊಂಡಂಥವರು ತಾವು ಅನಾಥರು ಎಂದು ಭಾವಿಸದೆ ಸರ್ಕಾರ, ಸಂಘ-ಸಂಸ್ಥೆಗಳ ನೆರವು ಸದುಪಯೋಗಪಡಿಸಿಕೊಂಡು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಅನುದಾನಂ ಚಾರಿಟಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ 20 ಬಡ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಶಾಲಾ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಇಲ್ಲದಂತಹ ಮಕ್ಕಳಿಗೆ ಸರ್ಕಾರ ಹಲವಾರು ಸೌಲಭ್ಯ ಒದಗಿಸುತ್ತಿದೆ ಎಂದರು. ಹೆತ್ತವರು ಇಲ್ಲ ಎಂಬ ಕೊರಗು ಬೇಡವೇ ಬೇಡ.
ಸರ್ಕಾರ ತಮ್ಮ ರಕ್ಷಣೆ, ಪೋಷಣೆಯ ಜವಾಬ್ದಾರಿ ಹೊರಲಿದೆ. ಹಾಗಾಗಿ ತಮ್ಮಲ್ಲಿನ ಕೀಳಿರಿಮೆ ಬಿಟ್ಟು ಎಲ್ಲರಂತೆ ಇರಬೇಕು. ಸುಂದರ ಬದುಕನ್ನ ಕಟ್ಟಿಕೊಳ್ಳುವತ್ತ ಗಮನ ನೀಡಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹ ತಂದೆ-ತಾಯಿ ಇಲ್ಲದಂತಹ 15 ಮಕ್ಕಳ ಪೋಷಣೆ ಮಾಡುತ್ತಿದೆ. ದತ್ತು ಪಡೆಯುವ ಆಸಕ್ತರಿಗೆ ಷರತ್ತುಗಳ ಆಧಾರದಲ್ಲಿ ದತ್ತು ನೀಡಲಾಗುತ್ತದೆ.
ಮುಂದಿನ ತಿಂಗಳು ಅಮೆರಿಕಾ ದಲ್ಲಿರುವ ಬೆಂಗಳೂರು ಮೂಲದವರು ಇಬ್ಬರು ಮಕ್ಕಳನ್ನು ದತ್ತು ಪಡೆಯಲಿದ್ದಾರೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ನಿಲಯದಲ್ಲಿರುವ ಯುವತಿ ಮದುವೆಯಾಗುವವರಿಗೆ 25 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಿ, ಮದುವೆ ಮಾಡಿಕೊಡಲಾಗುವುದು. ವರ, ಕುಟುಂಬದವರ ಬಗ್ಗೆ ಸಮಗ್ರ ಮಾಹಿತಿ ಪಡೆದ ನಂತರವೇ ಮದುವೆ ಮಾಡಿಕೊಡಲಾಗುತ್ತದೆ.
ಮದುವೆ ನಂತರ ಆಗಾಗ ಮನೆಗೆ ಹೋಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಈಚೆಗೆ ಕೆಲವಾರು ಸಂಘ-ಸಂಸ್ಥೆಗಳು ಸರ್ಕಾರಿ ಅನುದಾನಕ್ಕೆ ತೋರುವ ಆಸಕ್ತಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೋರಿಸುವಲ್ಲಿ ಹಿಂದೆ ಬೀಳುತ್ತವೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಂತವರು ಒಳ್ಳೆಯ ಕೆಲಸ ಮಾಡಬೇಕು. ಅನಿವಾರ್ಯತೆ ಮತ್ತು ತೀರಾ ಅಗತ್ಯತೆ ಹೊಂದಿರುವಂತಹವರಿಗೆ ಸಾಧ್ಯವಾದಷ್ಟು ನೆರವು ನೀಡುವಂತಾಗಬೇಕು.
ಅನುದಾನಂ ಚಾರಿಟಬಲ್ ಟ್ರಸ್ಟ್ 20 ಬಡ ಮಕ್ಕಳನ್ನು ದತ್ತು ಪಡೆದು, ಶಿಕ್ಷಣದ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಟಿ.ಜಿ. ಶಿವಕುಮಾರ್ ಮಾತನಾಡಿ, ಇಂದು ಮಕ್ಕಳನ್ನು ಶೈಕ್ಷಣಿವಾಗಿ ಬೆಳೆಸುವ ಮನಸ್ಸುಗಳ ಕೊರತೆ ಇದೆ. ವಿದ್ಯಾರ್ಥಿಗಳು ದೇಶದ ಆಸ್ತಿ. ಅವರೇ ಮುಂದೆ ರಾಷ್ಟ್ರ ಮುನ್ನಡೆಸಲಿದ್ದಾರೆ. ಅವರಿಗೆ ಎಲ್ಲ ವಲಯದ ಬಗ್ಗೆ ಸಮಗ್ರ ಮಾಹಿತಿ, ತಿಳವಳಿಕೆ ನೀಡಬೇಕು ಎಂದರು.
ಅನುದಾನಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುಬೇರನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೆಯುಐಡಿಎಫ್ಸಿ ಎಂಜಿನಿಯರ್ ಆರ್.ಸಿ. ಮೋಹನ್, ಡಾ| ನಾಗಪ್ಪ ಕೆ. ಕಡ್ಲಿ, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಆರ್. ಸುಲೋಚನಾ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ
MUDA Case:ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್,ರಾಜ್ಯಪಾಲರ ಅನುಮತಿಗೆ ಮೇಲುಗೈ
Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ
City Lights Kannada Movie: ವಿಜಯ್ ‘ಸಿಟಿ ಲೈಟ್ಸ್’ಗೆ ವಿನಯ್ ಹೀರೋ
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.