ವೀರಶೈವರು ಒಂದಾದ್ರೆ ರಾಜ್ಯ ಆಳಬಹುದು


Team Udayavani, Mar 27, 2017, 1:05 PM IST

dvg1.jpg

ದಾವಣಗೆರೆ: ವೀರಶೈವ ಸಮಾಜ ಒಂದಾದರೆ ಇಡೀ ರಾಜ್ಯವನ್ನು ಆಳಲಿದೆ. ಆದರೆ, ನಾವು ನಮ್ಮ ಒಳಪಂಗಡಗಳ ಹೆಸರಲ್ಲಿ ಒಡೆದುಹೋಗಿ ಅವಕಾಶ ತಪ್ಪಿಸಿಕೊಂಡಿದ್ದೇವೆ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಜ್ಯೋತಿ ಪ್ರಕಾಶ್‌ ಮಿರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅಭಿನವ ರೇಣುಕಾ ಮಂದಿರಲ್ಲಿ ಭಾನುವಾರ ವೀರಶೈವ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.

ವೀರಶೈವ ಸಮಾಜದಲ್ಲಿನ ಎಲ್ಲಾ ಒಳಪಂಡಗಳು ಒಂದಾದರೆ ನಮ್ಮದೇ ಸರ್ಕಾರವನ್ನು  ರಚಿಸಬಹುದಾಗಿದೆ. ಆದರೆ, ಇಡೀ ಸಮಾಜ ಒಳಪಂಗಡಗಳಲ್ಲಿ ಹರಿದುಹೋಗಿವೆ ಎಂದರು. ನಮ್ಮ ಸಮಾಜ ರಾಜ್ಯದಲ್ಲಿಯೇ ಅತಿದೊಡ್ಡ ಸಮಾಜವಾಗಿದೆ. ನಮ್ಮಲ್ಲಿನ ಒಳಪಂಗಡಗಳ ಕಲಹ, ವೈಯಕ್ತಿಕ ಆಸಕ್ತಿಗಳಿಂದ ಇಂದಿಗೂ ನಮಗೆ ಸಿಗಬೇಕಾದ ಹಕ್ಕು, ಸವಲತ್ತು ಸಿಗುತ್ತಿಲ್ಲ. ಹಕ್ಕಿಗಾಗಿ ಹೋರಾಟ ಮಾಡುವ ಸ್ಥಿತಿ ಇದೆ.

ನಮ್ಮ ಸಮಾಜದ ನಾಯಕರು ನಾವು ಹೇಳಿದಂತೆ ಕೇಳಬೇಕು. ಆದರೆ, ಇಂದು ಅವರು ತಮ್ಮ ಹಿತಾಸಕ್ತಿಗೆ ಸಮಾಜದ ಹಿತವನ್ನು ಬಲಿ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಸಮಾಜದ ಆಶಯ ಧಿಕ್ಕರಿಸುವ ಯಾವುದೇ ನಾಯಕರನ್ನು ನಾವು ತಿರಸ್ಕಾರ ಮನೋಭಾವದಿಂದ ನೋಡಬೇಕಿದೆ. ವೀರಶೈವ ಸಮಾಜಕ್ಕೆ ಇರುವ ಪ್ರಬಲ ಶಕ್ತಿಯನ್ನು ನಾವು ಮನದಟ್ಟು ಮಾಡಿಕೊಡಬೇಕು.

ಹೀಗೆ ಆಗಬೇಕಾದರೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಿದೆ. ದೃಢ ನಿರ್ಧಾರ ಕೈಗೊಳ್ಳುವ ಶಕ್ತಿ ಸಮಾಜಕ್ಕೆ ಬರಬೇಕಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಹೆಚ್ಚಿನ ಮಟ್ಟದಲ್ಲಿ ಸಂಘಟನೆ ಆಗಬೇಕು. ವೀರಶೈವ ಸಂಘರ್ಷ ಸಮಿತಿ ಇಂದು ಉತ್ತಮ ಕಾರ್ಯ ಮಾಡುತ್ತಿದೆ. ಸಮಾಜದ ಎಲ್ಲಾ ಬಾಂಧವರು ಅವರ ಜೊತೆ ಕೈ ಜೋಡಿಸಿ. ಸಮಾಜ ಯಾವ ದಿಕ್ಕಿಗೆ ಸಾಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಘಟನೆಯ ವರಿಷ್ಠರಿಗೆ ಬಿಟ್ಟುಬಿಡಿ.

ಆದರೆ, ಪ್ರತೀ ನಿರ್ಧಾರ ತೆಗೆದುಕೊಂಡಾಗಲೂ ಅವರೊಂದಿಗೆ ಕೈ ಜೋಡಿಸಿ. ಯಾವುದೇ ಕರೆಕೊಟ್ಟಾಗ ಒಟ್ಟಾಗಿ ಕೆಲಸಮಾಡಿ ಎಂದು ಹೇಳಿದರು.ಸಮಾಜದ ಮುಖಂಡ ಎಚ್‌.ಎಸ್‌. ನಾಗರಾಜ್‌ ಮಾತನಾಡಿ, ವೀರಶೈವರು ಎಂದರೆ ವಿಶಾಲ ಮನೋಭಾವದಿಂದ ಎಲ್ಲರನ್ನೂ ಅಪ್ಪಿಕೊಂಡು ಯಶಸ್ಸು ಗಳಿಸುವವರಾಗಿದ್ದಾರೆ. ಆದರೆ, ಇಂದು ನಮ್ಮ ಸಮಾಜದ ಮುಖಂಡರು ಮಾಡುವ ತಪ್ಪಿಗೆ ಇಡೀ ಸಮಾಜ ಸಮಸ್ಯೆಗೆ ತುತ್ತಾಗಿದೆ.

ಇದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ನಮ್ಮ ಯುವ ಸಮೂಹದಿಂದ ನಮ್ಮಲ್ಲಿರುವ ಒಳಪಂಡಗಳು ದೂರ ಆಗುವಂತೆ ನಾವು ಮಾಡಬೇಕಿದೆ ಎಂದರು. ಇಂದಿನ ಕಾರ್ಯಕ್ರಮಕ್ಕೆ ಅನೇಕ ಮುಖಂಡರು ಗೈರಾಗಿದ್ದಾರೆ. ಇದಕ್ಕೆ ಕಾರಣ ಅನೇಕ ಇವೆ. ಆದರೆ, ಅವರೆಲ್ಲರ ಬೆಂಬಲ ನಿಮಗೆ ಮುಂದೆ ಸಿಕ್ಕೇ ಸಿಗಲಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಹೊಂದಿದವರ ಬೆಂಬಲಕ್ಕೆ ಸಮಾಜ ಸದಾ ನಿಲ್ಲುತ್ತದೆ.

ಇದನ್ನು ಯುವ ಸಮೂಹ ಮನಗಾಣಬೇಕು. ಮುಂದಿನ ವರ್ಷದ ವೇಳೆಗೆ ಸಮಿತಿಯ ಧ್ಯೇಯೋದ್ದೇಶಗಳ ಪೈಕಿ ಕೆಲವನ್ನಾದರೂ ಈಡೇರಿಸಿಕೊಂಡು ಸಮಾವೇಶ ಮಾಡುವಂತೆ ಆಗಬೇಕು ಎಂದು ತಿಳಿಸಿದರು. ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಬಿರಾದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಸಂಘರ್ಷ ಸಮಿತಿ ಕಟ್ಟಿಕೊಂಡಿರುವುದು ಇತರೆ ಯಾವುದೋ ಸಮಾಜದ ಜೊತೆ ಸಂಘರ್ಷ ಕಟ್ಟಿಕೊಳ್ಳಲಲ್ಲ.

ಆದರೆ, ನಮ್ಮ ಸಮಾಜಕ್ಕೆಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು. ಮುಂದೆ ನಮ್ಮ ಸಮಿತಿ ಸಮಾಜದ ಯಾವುದೇ ವ್ಯಕ್ತಿ, ಸಮುದಾಯಕ್ಕೆ ಅನ್ಯಾಯವಾದರೂ ಅವರ ಪರ ನಿಲ್ಲಲಿದೆ ಎಂದರು. ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಧ್ಯಕ್ಷೆ ವೀಣಾ ಕಾಶಪ್ಪನವರ್‌, ದಾವಣಗೆರೆ  ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಹೈಕೋಟ್‌ ವಕೀಲ ಅಮೃತೇಶ್‌, ಸಹಕಾರಿ ಧುರೀಣ ಎನ್‌.ಎಂ.ಜೆ.ಬಿ. ಆರಾಧ್ಯ, 

ಕೈಗಾರಿಕೋದ್ಯಮಿ ಡಿ.ವಿ. ಪ್ರಶಾಂತ್‌,ನಗರಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌, ಸಮಿತಿಯ ದೇವರಮನಿ ಶಿವಕುಮಾರ್‌, ಒಣರೊಟ್ಟಿ ಮಹಾಂತೇಶ್‌, ಬೂಸನೂರು ವಿಶ್ವನಾಥ್‌, ಉಮೇಶ್‌ ಕತ್ತಿ, ಜಿ. ಶಿವಯೋಗಪ್ಪ, ಕಿರುವಾಡಿ ಸೋಮಶೇಖರ್‌, ದೇವರಮನಿ ಶಿವಕುಮಾರ್‌, ಗಣೇಶ ಹಾದಿಮನಿ, ಅಜಯ್‌, ಸಿದ್ದೇಶಪ್ಪ ಇತರರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮದ ಮುನ್ನ ಜಯದೇವ ವೃತ್ತದಿಂದ ಮೆರವಣಿಗೆ ನಡೆಯಿತು.  

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

1-wewewqeqwewqe

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.