ಸೂರ್ಯ ಸಕಲ ಸವಲತ್ತು ಕೊಡುವಂತಹ ದೇವರು
Team Udayavani, Feb 6, 2017, 12:24 PM IST
ದಾವಣಗೆರೆ: ಸೂರ್ಯ ಸಕಲ ಸವಲತ್ತು ಕೊಡುವಂತಹ ದೇವರು. ಹಾಗಾಗಿ ಪ್ರತಿಯೊಬ್ಬರು ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ರಥಸಪ್ತಮಿ ಅಂಗವಾಗಿ ಭಾನುವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾಗನೂರು ಬಸಪ್ಪ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೂರ್ಯನೇ ಇಲ್ಲದೇ ಹೋದರೆ ಎಲ್ಲಾ ಜೀವಿಗಳು ಕತ್ತಲಲ್ಲೇ ಇರಬೇಕಾಗುತ್ತಿತ್ತು. ಸೂರ್ಯ ಇಡೀ ಜಗತ್ತಿಗೆ ಬೆಳಕನ್ನು ಹಾಗೂ ಸಕಲ ಸವಲತ್ತು ಕೊಡುವಂತಹ ದೇವರು ಎಂದು ಪ್ರತಿಪಾದಿಸಿದರು. ಪ್ರತಿಯೊಬ್ಬರು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವುದಾದರೆ ಪ್ರತಿ ದಿನ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡಬೇಕು. ಹಣ, ಸಂಪತ್ತು, ಹೆಂಡತಿ, ಮಕ್ಕಳು ಎಲ್ಲ ಇದ್ದರೂ ಆರೋಗ್ಯವೇ ಇರದಿದ್ದರೆ ಏನು ಮಾಡಲಿಕ್ಕೆ ಆಗುವುದಿಲ್ಲ.
ಹಾಗಾಗಿ ಆರೋಗ್ಯವನ್ನ ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಯೋಗ, ಪ್ರಾಣಾಯಾಮಕ್ಕೆ ಗಮನ ನೀಡಬೇಕು ಎಂದು ತಿಳಿಸಿದರು. ನಾವೆಲ್ಲರೂ 100 ವರ್ಷ ಬದುಕುವ ಛಲ, ಸಂಕಲ್ಪ ಮಾಡಬೇಕು. ಒಂದೇ ಕಡೆ ಇರುವಂತಹ ಮರ ನೂರಾರು ವರ್ಷ ಬಾಳುವಂತಹ ಚಲನವಲನತೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿ ದಿನ 10 ನಿಮಿಷ ಪ್ರಾಣಾಯಾಮ, 1 ಗಂಟೆ ಯೋಗ ಮಾಡುವ ಮುಖೇನ ಅಂತಹ ಚಲನವಲನವಂತರಾಗಬೇಕು ಎಂದು ತಿಳಿಸಿದರು.
ಜಾತಿ, ಮತ, ಪಂಥ ಯಾವುದೇ ಭೇದವೇ ಇಲ್ಲದಂತಹ ಯೋಗ ಭಾರತೀಯರ ಹೆಮ್ಮೆ. ಅಂತಹ ಯೋಗದಿಂದ ಸುಂದರ, ಶ್ರೀಮಂತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಯೋಗವನ್ನ ಕ್ಷಣಕ್ಕೆ ಅಲ್ಲದೆ ಜೀವನ ವಿಧಾನ, ಮಾರ್ಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಯಾರ ಮುಖ ಪ್ರಸನ್ನತೆಯಿಂದ ಕೂಡಿರುತ್ತದೆಯೋ ಅವರೇ ನಿಜವಾದ ಯೋಗಿಗಳು. ಅಂತಹ ಯೋಗಿಗಳನ್ನುಸಿದ್ಧಪಡಿಸುವಂತಹ ಶಕ್ತಿ ಯೋಗಕ್ಕಿದೆ.
ಪ್ರತಿಯೊಬ್ಬರು ಪ್ರತಿ ದಿನ ಯೋಗ ಮಾಡುವ ಮೂಲಕ ಯೋಗಿಗಳಾಗಬೇಕು ಎಂದು ತಿಳಿಸಿದರು. ರಾಜ ಯೋಗೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ವೈಚಾರಿಕತೆ ಜೊತೆಗೆ ವೈಜ್ಞಾನಿಕ ಚಿಂತನೆ ಹೇಳಿದ್ದಾರೆ ಅದಕ್ಕೆ ಯೋಗವೇ ನಿದರ್ಶನ. ಸದೃಢ ದೇಹ, ಮನಸ್ಸಿಗೆ ಯೋಗ. ಬದುಕು ಸುಂದರವಾಗಿರಲು ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ ಮಾಡಬೇಕು. ಭೌತಿಕಸಂಪತ್ತಾದ ಶರೀರವನ್ನು ಉತ್ತಮ ಸಾಧನೆಗೆ ಬಳಸಬೇಕು ಎಂದು ತಿಳಿಸಿದರು.
ಇಂದಿನ ವಾತಾವರಣದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯಲ್ಲಿನ ವಿಕೃತಿಯನ್ನು ಅನುಸರಣೆ ಮಾಡುವ ಮೂಲಕ ದಾರಿ ತಪ್ಪುತ್ತಿದ್ದಾರೆ. ಗುರು ಹಿರೊಯರು ಅವರ ಮಾನಸಿಕ ದೌರ್ಬಲ್ಯವನ್ನ ತಿಳಿ ಹೇಳಿ, ಸರಿದಾರಿಗೆ ತರುವಂಥಾಗಬೇಕು ಎಂದು ತಿಳಿಸಿದರು. ಮೇಯರ್ ರೇಖಾ ನಾಗರಾಜ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ. ಉಮಾಪತಿ, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್ಬಾಸ್ ಮನೆಯ ಫೋಟೋಸ್ ವೈರಲ್
Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…
Hubli: ಕಾಂಗ್ರೆಸ್ ನ ರಾಜಭವನದ ದುರ್ಬಳಕೆಯ ಬಗ್ಗೆ ದೊಡ್ಡ ಇತಿಹಾಸವೇ ಇದೆ: ಶಾಸಕ ಟೆಂಗಿನಕಾಯಿ
Terrace garden: ಗೃಹಿಣಿಯ ಮಾನಸಿಕ ಖಿನ್ನತೆಗೆ ಔಷಧಿಯಾದ ತಾರಸಿ ಕೈತೋಟ
Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.