Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
Team Udayavani, Nov 12, 2024, 5:04 PM IST
ದಾವಣಗೆರೆ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನ.9ರ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.9 ರಂದು ರಾಜ್ಯ ಸರ್ಕಾರ ಕೂಡಲೇ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂಬ ಆದೇಶ ಹೊರಡಿಸಿದೆ. ಆದರೆ, ಅದು ಈಗಾಗಲೇ ವಕ್ಫ್ ಆಸ್ತಿ ಎಂಬುದಾಗಿ ಸ್ವಾಧೀನ ಪಡಿಸಿಕೊಂಡಿದ್ದರೆ ಮತ್ತು ಆರ್ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ನ. 9 ರ ಆದೇಶ ಅನ್ವಯವಾಗುವುದೇ ಇಲ್ಲ ಎಂದು ತಿಳಿಸಿದರು.
ಮತಾಂಧರಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮ್ಮದ್ ಈಗಾಗಲೇ ಎಲ್ಲ ಕಡೆ ವಕ್ಫ್ ಅದಾಲತ್ ನಡೆಸಿ ಅನೇಕರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗುವಂತೆ ನೋಡಿಕೊಂಡಿದ್ದಾರೆ. ಅಂತಹ ಆಸ್ತಿಗಳ ಬಗ್ಗೆ ರಾಜ್ಯ ಸರ್ಕಾರದ ನ.9ರ ಆದೇಶದಲ್ಲಿ ಯಾವುದೇ ಸ್ಪಷ್ಟನೆಯೇ ಇಲ್ಲ. ಇಂತಹ ಕಾರಣದಿಂದ ಈವರೆಗೆ ವಕ್ಫ್ ಆಸ್ತಿ ಶೇ. 3 ರಷ್ಟು ಹೆಚ್ಚಾಗಿದೆ. ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ನಂತರ ವಕ್ಫ್ ಅದಾಲತ್ ನಲ್ಲಿ ಹಾಜರಾಗಬೇಕು ಎಂಬುದು ಎಷ್ಟು ಸರಿ. ಹಾಗಾಗಿ ಕೂಡಲೇ ಪಹಣಿಯಲ್ಲಿ ವಕ್ಫ್ ಎಂಬುದಾಗಿ ನಮೂದು ಮಾಡಿರುವುದರ ಜೊತೆಗೆ ಎಲ್ಲ ನೋಟಿಸ್ ರದ್ಧುಪಡಿಸಬೇಕು ಎಂದು ಒತ್ತಾಯಿಸಿದರು.
ಹಾನಗಲ್ ತಾಲೂಕಿನ ಹರಣಗಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗಿದ್ದರಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿರುವುದಕ್ಕೆ ಮತ್ತು ಅದನ್ನು ವರದಿ ಮಾಡಿದ ಪತ್ರಿಕೆಗಳ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿಕೊಂಡಿದೆ. ಅಂತಹ ನಿರ್ಲಜ್ಜ, ಮತಿಗೆಟ್ಟ, ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರದ್ದು ಎಂತಹ ಅಹಂಕಾರ ಮತ್ತು ತುಷ್ಟೀಕರಣ. ನಾವು ಬಿಜೆಪಿಯವರು ಆ ಬಗ್ಗೆ ಮಾತನಾಡಿದರೆ ಒಡೆದು ಆಳುವ ನೀತಿ ಎನ್ನಲಾಗುತ್ತದೆ ಎಂದು ಹರಿಹಾಯ್ದರು.
ಈಗಾಗಲೇ ವಕ್ಫ್ ಆಸ್ತಿ ಹೆಸರಲ್ಲಿ ನಡೆಯುತ್ತಿರುವುದೇ ಅತಿಯಾಗಿದೆ. 2013ರ ವಕ್ಫ್ ಕಾನೂನಿನಂತೆ ಎಲ್ಲ ಆಸ್ತಿಗಳನ್ನು ವಕ್ಫ್ ಆಸ್ತಿಗಳು ಎಂದು ಮಾಡಿ, ಅದನ್ನು ಸಮುದಾಯವರು ಉಪಯೋಗಿಸಿದರೆ ಮುಂದಿನ ದಿನಗಳಲ್ಲಿ ಭಾರತಕ್ಕೂ ನಿಜಕ್ಕೂ ಗಂಭೀರವಾದ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಂರಿಗೆ ಶೇ. 4 ರಷ್ಟು ಮೀಸಲಾತಿ ನೀಡಬೇಕು ಎಂಬುದು ಅಸಂವಿಧಾನಿಕ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Duty Neglect: ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ್ದ ನರ್ಸ್ ಅಮಾನತು
Court: ರೂಪಾ ಮೌದ್ಗಿಲ್- ರೋಹಿಣಿ ಸಿಂಧೂರಿಗೆ “ಒನ್ ಮಿನಿಟ್ ಅಪಾಲಜಿ’ ಓದಲು ಸಲಹೆ
BJP Crisis: ಲಿಂಗಾಯತ ದಾಳಕ್ಕೆ ಶಾಸಕ ಯತ್ನಾಳ್ ನೇತೃತ್ವದ ಭಿನ್ನರ ತಂಡ ಯತ್ನ
BJP Crisis: ಬಂಡೆದ್ದ ಯತ್ನಾಳ್ ತಂಡ ಉಚ್ಚಾಟಿಸಿ: ಬಿ.ವೈ.ವಿಜಯೇಂದ್ರ ಬಣ ಆಗ್ರಹ
Ration Card: ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ತೊಂದರೆ ಇಲ್ಲ: ಆಹಾರ ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Having Fun: 62ರ ಗರ್ಲ್ಫ್ರೆಂಡ್ ಜತೆ ಮೋಜು ಮಾಡುತ್ತಿರುವೆ… 69ರ ಬಿಲ್ಗೇಟ್ಸ್ ಹೇಳಿಕೆ
Solo Expedition: ಒಂಟಿಯಾಗಿ ಎವರೆಸ್ಟ್ ಶಿಖರ ಏರುವುದಕ್ಕೆ ನೇಪಾಲ ನಿರ್ಬಂಧ!
Bird Flu Suspected: ಆಂಧ್ರದಲ್ಲಿ ಶಂಕಿತ ಹಕ್ಕಿ ಜ್ವರಕ್ಕೆ 45ದಿನದಲ್ಲಿ 4 ಲಕ್ಷ ಕೋಳಿ ಸಾವು
Shantanu Naidu: ಟಾಟಾ ಮೋಟಾರ್ನಲ್ಲಿ ಉನ್ನತ ಹುದ್ದೆಗೇರಿದ ರತನ್ ಆಪ್ತ ಶಂತನು
ಈಶಾನ್ಯ ಭಾರತದ ಮುಕುಟ ದಿಬ್ರೂಗಢ ಅಸ್ಸಾಂನ ಎರಡನೇ ರಾಜಧಾನಿ