![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 12, 2021, 4:02 PM IST
ಹುಬ್ಬಳ್ಳಿ: ಧಾರವಾಡ ನಿವಾಸಿಯೊಬ್ಬರಿಗೆ ಅಪರಿಚಿತನು ಸಿಮ್ ಇ-ಕೆವೈಸಿ ಅಪ್ಡೇಟ್ ಮಾಡುವುದಾಗಿ ನಂಬಿಸಿ, ಕ್ವಿಕ್ ಶೇರ್ ಟೇಮಾ ವ್ಹೀವರ್ ಆ್ಯಪ್ ಡೌನ್ಲೋಡ್ ಮಾಡಿಸಿ, ಅದರ ಮುಖಾಂತರ ಆನ್ಲೈನ್ದಿಂದ 5,79,439 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಪದ್ಮಜಾ ಎಂಬುವರ ಮೊಬೈಲ್ ಸಂಖ್ಯೆಗೆ ಸಿಮ್ ಇ-ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲವಾದರೆ ಸಿಮ್ ಬ್ಲಾಕ್ ಆಗುತ್ತದೆ ಎಂಬ ಸಂದೇಶ ಕಳುಹಿಸಿದ್ದರು. ಅದರಲ್ಲಿ ಬಂದಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಅಪರಿಚಿತನು ಕೆವೈಸಿ ಅಪ್ ಡೇಟ್ ಮಾಡುವುದಾಗಿ ನಂಬಿಸಿ, ಆ್ಯಪ್ ಡೌನ್ ಲೋಡ್ ಮಾಡಲು ಹೇಳಿ, ಅದರಲ್ಲಿ ಬಂದ ಐಡಿ ಇಸಿದುಕೊಂಡು ಅವರಿಗೆ ಗೊತ್ತಾಗದಂತೆ ಎಸ್ಬಿಐ ಖಾತೆಯಿಂದ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್, ಇ ಆ್ಯಂಡ್ ಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
568 ಗ್ರಾಂ ಗಾಂಜಾ ವಶ; ಮೂವರ ಬಂಧನ:
ಮಂಟೂರ ರಸ್ತೆ ಅರಳಿಕಟ್ಟಿ ಕಾಲೋನಿಯ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಶಹರ ಠಾಣೆ ಪೊಲೀಸರು ಬಂ ಧಿಸಿ, ಅವರಿಂದ 568 ಗ್ರಾಂ ಗಾಂಜಾ ಹಾಗೂ 600 ರೂ. ವಶಪಡಿಸಿಕೊಂಡಿದ್ದಾರೆ. ಅರಳಿಕಟ್ಟಿ ಕಾಲೋನಿಯ ಗುರುರಾಜ ವೈ. ಕುರುಬರ, ದಾವೂದ ಐ. ಶೇಖ, ರμàಕ ಐ. ಆದೋನಿ ಬಂ ಧಿತರಾಗಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂ ಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮದ್ಯ ಅಕ್ರಮ ಸಂಗ್ರಹ; ಓರ್ವನ ಬಂಧನ:
ಗದಗ ರಸ್ತೆ ಗಾಂ ಧಿವಾಡದ ಎಬಿಎಂ ಚರ್ಚ್ ಬಳಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಕೇಶ್ವಾಪುರ ಪೊಲೀಸರು ಶುಕ್ರವಾರ ಬಂ ಧಿಸಿ 1,960ರೂ. ಮೌಲ್ಯದ ಟೆಟ್ರಾ ಪ್ಯಾಕೆಟ್ಗಳು ಹಾಗೂ 150 ನಗದು ವಶಪಡಿಸಿಕೊಂಡಿದ್ದಾರೆ. ಕೇಶ್ವಾಪುರ ಗಾಂಧಿ ವಾಡ ಸ್ಲಮ್ನ ಕುಬೇಂದ್ರ ಎ. ಚವ್ಹಾಣ ಬಂಧಿನಾದವ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.