Alnavar: ಹಳ್ಳದಲ್ಲಿ ತೇಲಿ ಹೋಗಿ ಮೃತಪಟ್ಟ ಎಮ್ಮೆಗಳು
Team Udayavani, Oct 23, 2024, 11:50 AM IST
ಅಳ್ನಾವರ: ಹಳ್ಳ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಜಾನುವಾರುಗಳು ತೇಲಿ ಹೋದ ಘಟನೆ ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ಅ.21ರ ಸೋಮವಾರ ರಾತ್ರಿ ನಡೆದಿದೆ.
ಸಂಜೆ ಸುರಿದ ಅತಿಯಾದ ಮಳೆಗೆ ಹಳ್ಳದಲ್ಲಿ ಒಮ್ಮಿಂದೊಮ್ಮೆಲೆ ನೀರು ಏರಿಕೆಯಾದ ಪರಿಣಾಮ ಮೇಯಲು ಹೋಗಿದ್ದ ಎಮ್ಮೆಗಳು ಮರಳಿ ಮನೆಗೆ ಬರುವಾಗ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ದಾಟುತ್ತಿದ್ದ ವೇಳೆ 7 ಎಮ್ಮೆಗಳು ತೇಲಿ ಹೋಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಹೊನ್ನಾಪೂರದಲ್ಲಿ ಕೆರೆ ತುಂಬಿ ಹೆಚ್ಚುವರಿ ನೀರು ಹೊರಗೆ ಹರಿದು ಹಳ್ಳ ಸೇರಿದ್ದರಿಂದ ನೀರು ದಿಢೀರ್ ಏರಿಕೆಯಾಗಿದೆ. ದಿನನಿತ್ಯ ತಮ್ಮ ಪಾಡಿಗೆ ತಾವು ಸಾಮಾನ್ಯವಾಗಿ ಹಳ್ಳ ದಾಟುತ್ತಿದ್ದ ಜಾನುವಾರುಗಳು ಅಂದು ನೀರು ಹೆಚ್ಚಾಗಿದ್ದ ಕಾರಣ ತೇಲಿ ಹೋಗಿದ್ದವು.
ಈ ಪರಿಣಾಮ ಅ.22ರ ಮಂಗಳವಾರ ಬೆಳಿಗ್ಗೆ 7 ಎಮ್ಮೆಗಳ ಪೈಕಿ 5 ಮೃತ ಜಾನುವಾರುಗಳನ್ನು ಪತ್ತೆ ಹಚ್ಚಲಾಗಿದೆ.
ಇವು ಸಿದ್ದು ಯಮಕರ, ಜಾನು ಶಿಂಧೆ, ಬಮ್ಮು ಯಮಕರ ಅವರಿಗೆ ಸೇರಿದ ಜಾನುವಾರುಗಳಾಗಿದ್ದು, ಅಳ್ನಾವರ ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯೋಗೀಶ್ ಗೌಡ ಕೊಲೆ ಆರೋಪಿ ಮುತ್ತಗಿಗೆ ಜೀವ ಬೆದರಿಕೆ:ಮುತ್ತಗಿ ಮನೆಗೆ ಸಿಬಿಐ ಅಧಿಕಾರಿಗಳ ಭೇಟಿ
By Poll: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ: ಸಂತೋಷ್ ಲಾಡ್
ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!
ಧಾರವಾಡ: ಕೃಷಿ ಚಟುವಟಿಕೆ ಸ್ಥಗಿತ-ಕೈಕಟ್ಟಿ ಕುಳಿತ ಅನ್ನದಾತ
ByPolls; ಕಾಂಗ್ರೆಸ್ಸಿಗರು ನನ್ನನ್ನು ಸಂಪರ್ಕಿಸಿಲ್ಲ. ನಾಳೆ ಏನೋ ಗೊತ್ತಿಲ್ಲ..: ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು
Farangipete: ಪೂರ್ವದ್ವೇಷದ ಹಿನ್ನೆಲೆ ತಲಾವಾರು ದಾಳಿ; ಇಬ್ಬರಿಗೆ ಗಾಯ
Actor Yash: ‘ಕೆಜಿಎಫ್-3ʼ ಬಗ್ಗೆ ಯಶ್ ಕೊಟ್ರು ಬಿಗ್ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?
ಯೋಗೀಶ್ ಗೌಡ ಕೊಲೆ ಆರೋಪಿ ಮುತ್ತಗಿಗೆ ಜೀವ ಬೆದರಿಕೆ:ಮುತ್ತಗಿ ಮನೆಗೆ ಸಿಬಿಐ ಅಧಿಕಾರಿಗಳ ಭೇಟಿ
Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.