ಧಾರವಾಡ: ಅನ್ನದ ಬಟ್ಟಲಿಗೆ ನಶೆ ಪೀಡೆಯ ಹುಣ್ಣು| ಗಾಂಜಾ ಬೆಳೆ ಅವ್ಯಾಹತ

ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಬೆಳೆ ಅವ್ಯಾಹತ

Team Udayavani, Sep 19, 2021, 1:46 PM IST

fgtyht

ವರದಿ : ಬಸವರಾಜ ಹೊಂಗಲ್‌

ಧಾರವಾಡ: ಹೊಲಗಳಲ್ಲಿ ನಳನಳಿಸುವ ಹತ್ತಿ ಬೆಳೆ, ಮಧ್ಯದಲ್ಲಿ ಕೇವಲ ಎರಡೇ ಸಾಲು ತಪ್ಪಲು (ಗಾಂಜಾ), ಒಳಗಡೆ ಹೋಗಲು ಆಗದಂತೆ ದಟ್ಟವಾಗಿ ಬೆಳೆದ ಕಬ್ಬು, ಬೆಳೆದವರಿಗೆ ಮಾತ್ರ ಸಿಕ್ಕುತ್ತಿದೆ ನಶೆಗಿಡ. ಗುಡ್ಡದ ವಾರಿಯ ಕಡ್ಡದಲ್ಲೂ ಗಡ್ಡಧಾರಿಗಳ ಕೃತ್ಯ. ಉಡತಾ ಪಂಜಾಬ್‌ ಆಗಿತ್ತು. ಈಗ ಉಡತಾ ಗೋವಾ, ಈ ಗೋವಾ ಲಿಂಕ್‌ಗೆ ಧಾರವಾಡ ಜಿಲ್ಲೆಯೇ ಹೆಡ್‌ ಕ್ವಾಟರ್‌!

ಹೌದು, ಉತ್ತಮ ಗುಣಮಟ್ಟದ ಹಾಗೂ ದೇಶ-ವಿದೇಶಗಳಿಗೆ ರಫ್ತಾಗುವಂತಹ ಆಲ್ಫೋನ್ಸೋ ಮಾವಿನ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲು ಹೆಸರುವಾಸಿಯಾದ ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ “ಕಳ್ಳ ತಪ್ಪಲು ಕೃಷಿ’ ಸದ್ದು ಗದ್ದಲವಿಲ್ಲದೆ ಸಾಗಿದೆ. ಕಹಿಯಾದರೂ ಧಾರವಾಡಿಗರು ಈ ಸತ್ಯವನ್ನು ಅರಗಿಸಿಕೊಳ್ಳಲೇಬೇಕಾಗಿದ್ದು, ಯಾವ ಭೂಮಿಯಲ್ಲಿ ಹೂವು, ಹಣ್ಣು, ಅನ್ನ, ರೊಟ್ಟಿ ಬೆಳೆಯುತ್ತಿತ್ತೋ ಅದೇ ಮಣ್ಣಿನಲ್ಲಿ ನಕಲಿ ಮಣ್ಣಿನ ಮಕ್ಕಳು ನಶೆ ತಪ್ಪಲು ಬೆಳೆಯುವ ಕೈ ಚಳಕ ಆರಂಭಿಸಿದ್ದಾರೆ.

ಲಾವಣಿ ಹೊಲಗಳಲ್ಲಿ ಲಗಾಮಿಲ್ಲದ ಬೆಳೆ: ಇನ್ನು ಧಾರವಾಡ ಜಿಲ್ಲೆಯಲ್ಲಿ ಈಗಲೂ ಹೊಲಗಳಲ್ಲಿ ಕೃಷಿ ಮಾಡಲಾಗದ ನೌಕರರು, ಕಡು ಬಡವರು ಅನಿವಾರ್ಯವಾಗಿ ತಮ್ಮ ಹೊಲಗಳನ್ನು ಲಾವಣಿ ಅಂದರೆ ಭೂ ಬಾಡಿಗೆಯ ಆಧಾರದ ಮೇಲೆ ಇತರ ರೈತರಿಗೆ ಕೊಡುತ್ತಾರೆ. ಇಂತಹ ಹೊಲಗಳನ್ನು ಕೊಟ್ಟ ಮಾಲೀಕರು ಹೆಚ್ಚಾಗಿ ಅವರ ಹೊಲದಲ್ಲಿ ಏನು ಬೆಳೆಯುತ್ತಾರೆ ಎಂಬುದನ್ನು ಗಮನಿಸುವುದಿಲ್ಲ. ಯುಗಾದಿಯಿಂದ ಯುಗಾದಿವರೆಗಿನ ಈ ಲಾವಣಿ ಪದ್ಧತಿಯೇ ನಶೆ ಬೆಳೆಸುವ ಮಾಫಿಯಾಗೆ ದೊಡ್ಡ ಆಸರೆಯಾಗಿ ನಿಂತಿದೆ.

ಹುಬ್ಬಳ್ಳಿ, ಬೆಳಗಾವಿಯಲ್ಲಿನ ನಶೆ ನಂಟಿರುವ ಪೆಡ್ಲರ್‌ಗಳು ಲಾವಣಿ ರೂಪದಲ್ಲಿ ಪರಿಚಯಸ್ಥ ಕಳ್ಳ ರೈತರನ್ನು ಹಣ ಕೊಟ್ಟು ಬುಟ್ಟಿಗೆ ಹಾಕಿಕೊಂಡು ಅವರಿಂದ ನಶೆಪೀಡೆಯಾದ ಗಾಂಜಾ ಬೆಳೆ ಬೆಳೆಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಕ್ಕ, ಹಣದ ಅಡಚಣೆ ಇರುವ ರೈತರೇ ಇದಕ್ಕೆ ಬಲಿಯಾಗುತ್ತಿದ್ದಾರೆ.

ಗುಡ್ಡದ ಮೇಲೆಕಡ್ಡದ ಮಧ್ಯೆ: ಇನ್ನು ಗಾಂಜಾ ಕೇವಲ ಹೊಲಗಳಲ್ಲಿ ಬೆಳೆಯಲಾಗುತ್ತಿಲ್ಲ. ಬದಲಿಗೆ ಹೊಲಗಳ ಬದುಗಳಿಗೆ ಅಂಟಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ಕೂಡ ಅಲ್ಲಲ್ಲಿ ಗಾಂಜಾ ಬೆಳೆ ತಲೆ ಎತ್ತುತ್ತಿದೆ . ಕಾರಣ ಅರಣ್ಯದ ಪಕ್ಕದ ಹೊಲಗಳಲ್ಲಿ ಜನರ ಒಡನಾಟವೇ ಇರುವುದಿಲ್ಲ. ತಮ್ಮ ಹೊಲಗಳಲ್ಲಿಯೇ ಕೆಲಸ ಮಾಡುತ್ತಲೇ ಪಕ್ಕದ ಅರಣ್ಯದ ಮಧ್ಯದಲ್ಲಿ ಅಜ್ಞಾತ ಸ್ಥಳಗಳನ್ನು ಗುರುತು ಹಾಕಿ ಅಲ್ಲಲ್ಲಿ ಗಾಂಜಾ ಬೀಜಗಳನ್ನು ಬೀಸಾಡಿ ಬರುವ ಕಳ್ಳರು, ಆಗಾಗ ಅವುಗಳ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಅವು ಬೆಳೆದು ದೊಡ್ಡವಾಗುತ್ತಿದ್ದಂತೆಯೇ ಅವುಗಳನ್ನು ಕಳ್ಳದಾರಿ ಮೂಲಕ ಸಾಗಾಟ ಮಾಡುತ್ತಾರೆ. ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹೊಲಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಗೋವಾದ ನಂಟು: ಗಾಂಜಾಕ್ಕೆ ಅತ್ಯಂತ ದೊಡ್ಡ ಮಾರುಕಟ್ಟೆ ಕರ್ನಾಟಕದ ಪಕ್ಕದ ರಾಜ್ಯ ಗೋವಾ. ಹೀಗಾಗಿಯೇ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಂಜಾ ನಂಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ರೈತರಿಗಿಂತಲೂ ಹೆಚ್ಚಾಗಿ ಇದರ ಸಾಗಾಟ ಮಾಡುವ ರೌಡಿಶೀಟರ್‌ಗಳು, ಡ್ರಗ್ಸ್‌ ಪೆಡ್ಲರ್‌ ಗಳ ಪಾತ್ರ ದೊಡ್ಡದಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆಯಾದ ಗಾಂಜಾ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿಗೆ ತೀವ್ರ ನಶೆ ನೀಡುವ ಟಾಪ್‌-1 ಮಾದಕ ವಸ್ತುವಾಗಿ ಬೆಳೆದು ನಿಲ್ಲುತ್ತದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.