ಕೆರೆ ಕುಂಟೆ ಸೇರಿದ ಹೊಲದ ರಾಸಾಯನಿಕ


Team Udayavani, Aug 28, 2019, 9:22 AM IST

huballi-tdy-1

ಧಾರವಾಡ: ಮಳೆ ನಿಂತರೂ ಅದರ ಹನಿಗಳು ನಿಲ್ಲಲಿಲ್ಲ ಎನ್ನುವ ಗಾದೆ ಮಾತಿನಂತೆ, ನೆರೆ ನಿಂತರು ಅದರಿಂದಾದ ಹಾನಿಯ ದುಷ್ಪರಿಣಾಮಗಳು ಒಂದೊಂದಾಗಿ ಗೋಚರಿಸುತ್ತಲೇ ಇವೆ.

ನೆರೆಹಾವಳಿಯಿಂದ ಹಳ್ಳಗಳು ಎಬ್ಬಿಸಿದ ಹಾವಳಿಗೆ ಜನ, ಜಾನುವಾರು ಕೊಚ್ಚಿ ಹೋಗಿದ್ದವು. ಬೆಳೆಹಾನಿ, ಮನೆಹಾನಿ ಕೂಡ ಆಗಿದೆ. ಕೆಲವು ಕಡೆಗಳಲ್ಲಿ ಹೊಲಕ್ಕೆ ಹೊಲವೇ ಕೊಚ್ಚಿಹೋಗಿದೆ. ಇದರ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಜೋರಾದ ಮಳೆ ಹೊಡೆತಕ್ಕೆ ಹೊಲದಲ್ಲಿ ಅನೇಕ ವರ್ಷಗಳಿಂದ ಸಿಂಪರಣೆ ಮಾಡಿದ್ದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳು, ಕಳೆನಾಶಕದ ಅಂಶವೆಲ್ಲ ಕೊಚ್ಚಿಕೊಂಡು ಬಂದು ಕೆರೆ, ಕುಂಟೆ ಮತ್ತು ಹಳ್ಳದ ನೀರನ್ನು ಸೇರುತ್ತಿದೆ.

ಹೊಲಗಳ ಬದುಗಳಲ್ಲಿ ಹರಿಯುತ್ತಿರುವ ನೀರಿನ ತೇಲು (ಹರಿವು)ಗಳಲ್ಲಿ ರಾಸಾಯನಿಕಗಳನ್ನೊಳಗೊಂಡ ಹೊಲಸು ಜಮಾವಣೆಯಾಗಿದೆ. ಅಷ್ಟೇಯಲ್ಲ, ಇದು ಕಿರು ತೊರೆಗಳ ಮೂಲಕ ಕೆರೆ ಅಥವಾ ಹಳ್ಳಗಳನ್ನು ಸೇರಿ ಸಾಗುತ್ತಿದೆ. ಮೇಲ್ನೋಟಕ್ಕೆ ಇದೇನು ಹಾನಿ ಮಾಡುವ ಅಥವಾ ತೊಂದರೆ ಕೊಡುವ ವಿಚಾರವಲ್ಲ ಎನಿಸಿದರೂ, ರಾಸಾಯನಿಕ ಯುಕ್ತ ನೀರು ಮತ್ತೆ ಅಂತರ್ಜಲ ಮೂಲಗಳಲ್ಲಿ ಬೆರೆಯುತ್ತಿದೆ. ಇನ್ನೊಂದೆಡೆ ಹತ್ತಾರು ವರ್ಷಗಳಿಂದ ರೈತರ ಹೊಲದ ಮಣ್ಣು ಸೇರಿದ್ದ ರಾಸಾಯನಿಕಗಳು ಕೊಚ್ಚಿ ಹೋಗಿದ್ದರಿಂದ ಹೊಲ ಹಸನಾಗಿದೆ ಎನ್ನಬಹುದು. ಇನ್ನು ಗ್ರಾಮ ಮತ್ತು ನಗರ ವಾಸಿಗಳು ಎಲ್ಲೆಂದರಲ್ಲಿ ಬಿಸಾಡಿದ್ದ ಟನ್‌ಗಟ್ಟಲೇ ಮನೆ ಬಳಕೆ ತಾಜ್ಯ, ಪ್ಲಾಸ್ಟಿಕ್‌ ವಸ್ತುಗಳು, ಖಾಲಿ ಬಾಟಲಿಗಳು, ನಿರುಪಯುಕ್ತ ವಸ್ತುಗಳೆಲ್ಲವೂ ತೇಲಿ ಕೆರೆಕುಂಟೆ ಸೇರಿಕೊಂಡಿವೆ.

ಕೆರೆಯಲ್ಲಿ ತೇಲಿದ ಹೊಲಸು:

ಜಿಲ್ಲೆಯಲ್ಲಿನ 1200ಕ್ಕೂ ಅಧಿಕ ಕೆರೆಗಳು ಕೋಡಿ ತುಂಬಿ ಹರಿದಿವೆ. ಉತ್ತಮ ಮಳೆಯಾಗಿ ಕೆರೆಯಂಗಳದಲ್ಲಿ ಶುದ್ಧವಾದ ನೀರು ಅಲ್ಲಲ್ಲಿ ನಿಂತಿದೆ. ಆದರೆ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಜಲಸಂಪರ್ಕ ಹೊಂದಿರುವ ಈ ಕೆರೆಗಳಿಗೆ ಕಲ್ಮಶವೂ ಅಷ್ಟೇ ಪ್ರಮಾಣದಲ್ಲಿ ಬಂದು ಸೇರಿದೆ. ಪ್ಲಾಸ್ಟಿಕ್‌ ಚಪ್ಪಲಿಗಳು, ಮುರಿದ ಟಿವಿ, ಹಾನಿಯಾದ ಎಲೆಕ್ಟ್ರಾನಿಕ್‌ ವಸ್ತುಗಳು, ಧಾರ್ಮಿಕ ವಿಧಿ ವಿಧಾನಗಳಿಗೆ ಬಳಕೆಯಾದ ಉಳಿಕೆ ವಸ್ತುಗಳು, ಪ್ಲಾಸ್ಟಿಕ್‌ ಚೀಲಗಳು, ಮುರಿದ ಫೈಬರ್‌ ವಸ್ತುಗಳು, ವೈರ್‌, ಬೆಂಡು, ರಟ್ಟು , ಅರ್ಧಸುಟ್ಟ ಟೈರ್‌ಗಳು ಹೀಗೆ ಪರಿಸರಕ್ಕೆ ಸಾಕಷ್ಟು ತೊಂದರೆಯಾಗುವ ಕಲ್ಮಶ ವಸ್ತುಗಳು ಕೆರೆಯಂಗಳದಲ್ಲಿ ತೇಲುತ್ತ ನಿಂತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನದಂತೆ ಇದೀಗ ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರ ಸಂಕಲ್ಪಕ್ಕೆ ವಿಶ್ವ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲೆಯ 1200 ಕೆರೆಗಳ ಪೈಕಿ 180 ಕೆರೆಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿದ್ದು, ಇವುಗಳಿಗೆ ಕುಡಿಯುವ ನೀರಿನ ಕೆರೆ ಎಂದೇ ಹೆಸರು ಇದೆ. ಅಷ್ಟೇಯಲ್ಲ ಸಾರ್ವಜನಿಕವಾಗಿ ನಡೆಯುವ ಕಾರ್ಯಕ್ರಮಗಳು, ಜಾತ್ರೆ, ಹಬ್ಬಗಳಲ್ಲಿ ಈ ಕೆರೆಯ ನೀರನ್ನೆ ಬಳಕೆ ಮಾಡಿಕೊಂಡಿಕೊಂಡು ಅಡುಗೆ ಮಾಡಲಾಗುತ್ತಿತ್ತು. ಆದರೆ 20 ವರ್ಷಗಳಿಂದ ಕೊಳವೆಬಾವಿ ಎಲ್ಲೆಂದರಲ್ಲಿ ಬಂದಿದ್ದರಿಂದ ಈ ಕೆರೆಗಳು ಅನಾಥವಾಗಿವೆ. ಇದೀಗ ಈ ವರ್ಷ ಕೆರೆಯಂಗಳದಲ್ಲಿ ಉತ್ತಮ ನೀರು ಬಂದಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳುವ ಕುರಿತು ಗ್ರಾಮಸ್ಥರು ಚಿಂತಿಸಬೇಕಿದೆ.
ಸಾಂಪ್ರದಾಯಿಕ ಜಲಮೂಲಗಳಾದ ಕುಡಿಯುವ ನೀರಿನ ಬಾವಿಗಳಲ್ಲೂ ಈ ವರ್ಷ ಉತ್ತಮವಾಗಿ ನೀರು ಶೇಖರಣೆಯಾಗಿದೆ. ಆದರೆ ಆ ನೀರನ್ನು ಬಳಸಿಕೊಳ್ಳುವಂತಿಲ್ಲ. ಇಂತಹ ಬಾವಿಗಳಲ್ಲಿ ಈಗಾಗಲೇ ಜನರು ನಿರುಪಯುಕ್ತ ತಾಜ್ಯ ವಸ್ತುಗಳನ್ನು ತುಂಬಿಯಾಗಿದೆ. ಜಿಲ್ಲೆಯಲ್ಲಿ ಇಂತಹ 450ಕ್ಕೂ ಅಧಿಕ ಬಾವಿಗಳಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸಿದ್ದರೆ ಈ ವರ್ಷಕ್ಕೆ ಉತ್ತಮ ನೀರು ಪಡೆಯಲು ಸಾಧ್ಯವಿತ್ತು. ಸದ್ಯಕ್ಕೆ ಜಿಲ್ಲಾಡಳಿತದ ಬಳಿ 14 ಕೋಟಿ ಹಣವಿದ್ದರೂ, ಅದನ್ನು ಕೆರೆ ಸ್ವಚ್ಛತೆಗೆ ಬಳಸುವಂತಿಲ್ಲ. ಅದು ಹಸರೀಕರಣ, ಕೆರೆ ದಡದಲ್ಲಿ ಪುಟ್ಪಾತ್‌ ನಿರ್ಮಿಸಲು ಮೀಸಲಾಗಿದೆ.
•ಬಸವರಾಜ ಹೊಂಗಲ್

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

ShreeKanth

Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.