ಬಾಲ್ಯದ ನೆನಪಿನ ಬುತ್ತಿ ಗಂಟು
Team Udayavani, Sep 9, 2017, 12:25 PM IST
ಧಾರವಾಡ: ಬಾಲ್ಯದ ತಮ್ಮ ನೆನಪಿನ ಅನುಭವಗಳಿಂದ ಮಕ್ಕಳಿಗೆ ಅರಣ್ಯದ ಬಗ್ಗೆ ಮಾಹಿತಿ ನೀಡುವ “ಸಹ್ಯಾದ್ರಿಯಲ್ಲಿ ಬಾಲ್ಯ’ ಎಂಬ ಕಾರ್ಯಕ್ರಮ ನಗರದ ಬಾಲಬಳಗ ಶಾಲೆಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಮೂಲಕ ಮಕ್ಕಳಿಗೆ ಅರಣ್ಯದ ಬಗ್ಗೆ ಮಾಹಿತಿ ನೀಡಿದರು.
ಸಿ.ಆರ್. ಪ್ರದೀಪ ಮಾತನಾಡಿ, ಮಕ್ಕಳಿಗೆ ಬೆಟ್ಟದಿಂದ ಏನೆನು ಸಿಗುತ್ತದೆ ಎಂಬುದು ಗೊತ್ತು. ಆದರೆ, ಅವರಿಗೆ ಅದನ್ನು ಉಳಿಸುವ ಬಗೆ ತಿಳಿಸಬೇಕು. ಬೆಟ್ಟದಲ್ಲಿ ವಾಸವಾಗಿರುವ ಪಕ್ಷಿಗಳು ಉಳಿಯಲು ನಿಮ್ಮ ಮನೆ ಮುಂದೆ ಅವುಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಪಾಂಡುರಂಗ ಹೆಗಡೆ ಮಾತನಾಡಿ, ಬಾಲ್ಯದಲ್ಲೇ ಗೆಳೆಯರೊಂದಿಗೆ ಓಡಾಡಿದ್ದರಿಂದಲೇ ನಮ್ಮ ಪ್ರದೇಶದ ಕಾಡುಗಳ ಸಂಪೂರ್ಣ ಪರಿಚಯವಾಗಿದೆ. ನಮ್ಮ ಊರಿನ ಸುತ್ತ ವಿವಿಧ ಬಗೆಯ ಮಾವಿನ ತಳಿಗಳಿವೆ. ಅವುಗಳನ್ನು ಕೀಳಲು ಬೆಳ್ಳಂಬೆಳಗ್ಗೆ ಚಿಮಣಿ ದೀಪ ಹಿಡಿದು ಹೊರಡುತ್ತಿದ್ದೆವು. ಅವುಗಳನ್ನು ತಂದ ನಂತರ ಗೆಳೆಯರೆಲ್ಲ ಜಿದ್ದು ಕಟ್ಟಿ ಹಣ್ಣುಗಳನ್ನು ತಿನ್ನುತ್ತಿದ್ದೆವು.
ಇದಲ್ಲದೇ ಬಿದಿರಿನ ಕಾಡಿನಲ್ಲಿ ಹೊಕ್ಕು ಅಲ್ಲಿನ ಎಳೆ ಬಿದಿರು ತರುತ್ತಿದ್ದೆವು. ಆದರೆ ಅದೆಲ್ಲ ಈಗ ನೆನಪು ಮಾತ್ರ. ಇದೀಗ ನೀವು ಸಹ ನಿಮ್ಮ ಬಾಲ್ಯ ವ್ಯರ್ಥ ಮಾಡದೆ ಈಗಿನಿಂದಲೇ ಕಾಡುಗಳನ್ನು ಉಳಿಸಿ, ಬೆಳೆಸುವ ಮೂಲಕ ಅವುಗಳ ಸಂಪೂರ್ಣ ಪರಿಚಯ ತಿಳಿಯಬೇಕು ಎಂದರು. ಜನಾರ್ಧನ ಜಿ.ಎಲ್., ರವೀಂದ್ರ ಪ್ರಕಾಶ, ಮುರುಳೀಧರ ಮಾತನಾಡಿದರು. ಡಾ| ಸಂಜೀವ ಕುಲಕರ್ಣಿ, ವಿನೋದ, ಶ್ಯಾಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.