ಧಾರವಾಡ: ಕೃಷಿ ವಿವಿಯಿಂದ 2 ಹೊಸ ಜೋಳದ ತಳಿ ಶೋಧನೆ


Team Udayavani, Aug 23, 2024, 2:20 PM IST

ಧಾರವಾಡ: ಕೃಷಿ ವಿವಿಯಿಂದ 2 ಹೊಸ ಜೋಳದ ತಳಿ ಶೋಧನೆ

■ ಉದಯವಾಣಿ ಸಮಾಚಾರ
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಆ.11ರಂದು 109 ನೂತನ ತಳಿಗಳನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಇಲ್ಲಿನ ಕೃಷಿ ವಿವಿಯ ಎರಡು ಹೊಸ ತಳಿ ಎಂಬುದು ವಿಶೇಷ. ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳಲ್ಲಿ ಕೃಷಿ ವಿವಿ ವಿಜ್ಞಾನಿಗಳಿಂದ ಅಭಿವೃದ್ಧಿ ಪಡಿಸಿದ ತಳಿಗಳಾದ ಮುಂಗಾರು ಜೋಳದ ತಳಿ ಡಿಎಸ್‌ ಎಚ್‌-6 (ಸಿಎಸ್‌ಎಚ್‌-49) ಮತ್ತು ಬರಗು ತಳಿಗಳು ಸಿಪಿಆರ್‌ಎಂವಿ-1 (ಡಿಎಚ್‌ಪಿಎಂ 60-4) ಸೇರಿವೆ. ಈ ತಳಿಗಳನ್ನು ಅಭಿವೃದ್ಧಿಪಡಿಸಿದ ನಂತರ ಕೇಂದ್ರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ 5 ವರ್ಷಗಳ ಸತತ ಪ್ರಯೋಗಗಳ ಫಲಿತಾಂಶವನ್ನು ಕೂಲಂಕುಶವಾಗಿ ವಿಶ್ಲೇಷಿಸಿ, ವಿವಿಧ ಸಭೆಗಳಲ್ಲಿ ಚರ್ಚಿಸಿ ರಾಷ್ಟ್ರಮಟ್ಟದ ತಳಿ ಬಿಡುಗಡೆ ಸಮಿತಿಗೆ (ಸಿವಿಆರ್‌ಸಿ) ಸಲ್ಲಿಸಲಾಗಿತ್ತು.

ಆ.2ರಂದು ನಡೆದ 92ನೇ ರಾಷ್ಟ್ರದ ಕೇಂದ್ರೀಯ ತಳಿ ಬಿಡುಗಡೆ ಸಮಿತಿಯಲ್ಲಿ ಈ ಎರಡು ತಳಿಗಳು ಬಿಡುಗಡೆಯಾಗಿವೆ. ಬಳಿಕ ಈ
ತಳಿಗಳನ್ನು ನರೇಂದ್ರ ಮೋದಿ ಅವರು ಆ.11ರಂದು ಲೋಕಾರ್ಪಣೆ ಮಾಡಿದ್ದಾರೆ. ದೇಶದ ಕೃಷಿ ಪ್ರಗತಿಗೆ ಪೂರಕ ಹಾಗೂ ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಂಡು ಬೆಳೆಯುವ ಅಧಿಕ ಪೌಷ್ಟಿಕ ಮೌಲ್ಯ ಹೊಂದಿರುವ ಇಂತಹ ತಳಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ಕೃಷಿ ವಿವಿ ಕುಲಪತಿ ಡಾ| ಪಿ.ಎಲ್‌.ಪಾಟೀಲ ಆಶಿಸಿದ್ದಾರೆ.

ಮುಂಗಾರು ಜೋಳದ ತಳಿ: ಡಿಎಸ್‌ಎಚ್‌-6
ರಾಷ್ಟ್ರಮಟ್ಟದಲ್ಲಿ ಈ ಸಂಕರಣ ತಳಿಯನ್ನು ಐದು ರಾಜ್ಯಗಳ (ಕರ್ನಾಟಕ, ತಮಿಳುನಾಡು, ರಾಜಸ್ಥಾನ, ತೆಲಂಗಾಣ ಹಾಗೂ ಗುಜರಾತ) ಮುಂಗಾರು ಜೋಳ ಬೆಳೆಯುವ ಪ್ರದೇಶಕ್ಕೆ ಶಿಫಾರಸು ಮಾಡಲಾಗಿದೆ. ಸರಾಸರಿ ಪ್ರತಿ ಹೆಕ್ಟೆರ್‌ಗೆ 38ರಿಂದ 42 ಕ್ವಿಂಟಲ್‌ ಕಾಳಿನ ಹಾಗೂ 110ರಿಂದ 120 ಕ್ವಿಂಟಲ್‌ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ಮೊದಲಿನ ಉತ್ತಮ ಸಂಕರಣ ತಳಿ ಸಿಎಸ್‌ಎಚ್‌-30ಕ್ಕಿಂತ ಶೇ.13.5 ಹೆಚ್ಚು ಕಾಳಿನ ಹಾಗೂ ಶೇ.7.4 ಹೆಚ್ಚು ಮೇವಿನ ಇಳುವರಿ ನೀಡುತ್ತದೆ. ಇದು
ಅಲ್ಪಾವಧಿ ತಳಿಯಾಗಿದ್ದು ತಕ್ಕಮಟ್ಟಿಗೆ ಕಾಳಿನ ಬೂಳಸು(ಕಾಳು ಕಪ್ಪಾಗುವುದು)ರೋಗವನ್ನು ತಡೆದುಕೊಳ್ಳುತ್ತದೆ.

ಸಿರಿಧಾನ್ಯದ ಬರಗು:ಡಿಎಚ್‌ಪಿಎಂ 60-4 (ಸಿಪಿಆರ್‌ಎಂವ್ಹಿ-1)
ರಾಷ್ಟ್ರಮಟ್ಟದಲ್ಲಿ ಈ ತಳಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನ ಮಳೆಯಾಶ್ರಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಪ್ರತಿ ಹೆಕ್ಟೆರ್‌ಗೆ 24-26 ಕ್ವಿಂಟಲ್‌ ಕಾಳಿನ ಹಾಗೂ 43ರಿಂದ 45 ಕ್ವಿಂಟಲ್‌ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ
ಉತ್ತಮ ತಳಿಯಾದ ಟಿಎನ್‌ ಎಯು-164ಕ್ಕಿಂತ ಶೇ.20.8ಕಾಳಿನ ಮತ್ತು ಶೇ.3.7 ಅಧಿಕ ಮೇವಿನ ಇಳುವರಿ ನೀಡುತ್ತದೆ. ತಕ್ಕಮಟ್ಟಿಗೆ ಈ ತಳಿಯು ಸುಳಿ ಬಾಧೆಯನ್ನು ತಡೆದುಕೊಳ್ಳುತ್ತದೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.