Dharwad:ತೊಟ್ಟಿಲನಾಡಿನಲ್ಲಿ ದಸರೆ ಮೆರಗು; ಭಜನೆ ಭಕ್ತಿ ಭಾವ


Team Udayavani, Oct 17, 2023, 1:05 PM IST

Dharwad:ತೊಟ್ಟಿಲನಾಡಿನಲ್ಲಿ ದಸರೆ ಮೆರಗು; ಭಜನೆ ಭಕ್ತಿ ಭಾವ

ಮಿಶ್ರಿಕೋಟಿ: “ತೊಟ್ಟಿಲನಾಡು’ ಎಂದು ಪ್ರಸಿದ್ಧಿ ಪಡೆದಿರುವ ಕಲಘಟಗಿಯು ದಸರಾ ಹಬ್ಬಕ್ಕೆ ಸಜ್ಜುಗೊಂಡಿದೆ. ಪಟ್ಟಣದ ಪ್ರಮುಖ ದೇವಸ್ಥಾನಗಳಲ್ಲಿ ಘಟಸ್ಥಾಪನೆ, ಪುರಾಣ ಪ್ರವಚನ ಮತ್ತು ವಿಶೇಷ ಪೂಜೆಗಳ ಸೇವೆಯಿಂದ ದೇವಿಯನ್ನು ಒಲಿಸಿಕೊಳ್ಳುವ ಕೈಂಕರ್ಯಕ್ಕೆ ಭಕ್ತರು ಸಜ್ಜಾಗಿದ್ದಾರೆ.

ಪಟ್ಟಣದ ಅಧಿದೇವತೆಯರಾದ ದ್ಯಾಮವ್ವದೇವಿ ಮತ್ತು ದುರ್ಗಮ್ಮದೇವಿಯರ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಮತ್ತು ಅದರ “ಹೊರಬಿಡಿಕೆ’ಯಂತಹ ವಿಶೇಷ ವಿಧಿ-ವಿಧಾನಗಳು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಅಷ್ಟೇ ವಿಶೇಷವಾಗಿ ಗ್ರಾಮದೇವಿಯರ ದಸರಾ ಹಬ್ಬ ಕೂಡ ವಿಜೃಂಭಣೆಯಿಂದ ಜರುತ್ತದೆ. ಗ್ರಾಮದೇವಿ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡ ಬಂದ ಪರಂಪರೆಗಳನ್ನು ಈಗಲೂ ಪಾಲಿಸುತ್ತಿದ್ದಾರೆ.

ಭಜನೆಗಳ ನಾಡು: ಒಂದು ಕಾಲದಲ್ಲಿ ಹಿರಿಯ ಸಂಗೀತಕಾರರು, ನಾಟಕಕಾರರು, ದೊಡ್ಡಾಟಗಳ ಕಲಾವಿದರಿದ್ದ ಕಲಘಟಗಿಯಲ್ಲಿ ದೇವಿಯರ ಸಮ್ಮುಖದಲ್ಲಿ ಭಜನಾ ಸೇವೆ ನಿರಂತರವಾಗಿ ಶತಮಾನಗಳಿಂದ ನಡೆಯುತ್ತ ಬಂದಿದೆ. ದೇವಿಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ವಿವಿಧ ಭಕ್ತಿರಸದ ಭಜನೆಗಳನ್ನು ಭಜನಾ ತಂಡದವರು ಸಮರ್ಪಿಸುತ್ತಾರೆ. ಭಕ್ತಿಗೀತೆಗಳು, ತತ್ವಪದಗಳು, ವಚನಗಳು, ಶರೀಫರ ಪದಗಳು, ತ್ರಿಪದಿಗಳನ್ನು ವಿಧವಿಧವಾಗಿ ಸೇವೆಗೆ ಸಮರ್ಪಿಸುತ್ತಾರೆ. ಕೆಲವು ತಂಡದವರು ಸಂತ ಜ್ಞಾನದೇವ, ತುಕಾರಾಮ, ನಾಮದೇವರ ಅಭಂಗಗಳನ್ನು ಕೂಡ ಹಾಡುತ್ತಾರೆ.

ಗ್ರಾಮದೇವಿ ಗುಡಿ ಓಣಿ, ಕುಂಬಾರ ಓಣಿ, ಪಾಂಡುರಂಗ ಗುಡಿ ಓಣಿ, ಕಲಾಲ ಓಣಿ, ಅಂಬೇಡ್ಕರ್‌ ಓಣಿ ಸೇರಿದಂತೆ ಪಟ್ಟಣದ ವಿವಿಧ ಓಣಿಗಳ ಹಲವಾರು ಭಜನಾ ತಂಡಗಳು ತಮ್ಮ ತಮ್ಮ ಸದಸ್ಯರ ಜೊತೆಗೆ ಬೆಳಗ್ಗೆ 5 ಗಂಟೆಗೆ ಭಜನಾ ಪದಗಳನ್ನು ಹಾಡುತ್ತ ತಮ್ಮ ಓಣಿಯ ದೇವಸ್ಥಾನದಿಂದ ಗ್ರಾಮದೇವಿಯ ದೇವಸ್ಥಾನಕ್ಕೆ ಬಂದು ನಂತರ ತಮ್ಮ ತಮ್ಮ ಜಾಗಕ್ಕೆ ಮರಳುತ್ತಾರೆ.

ಪಟ್ಟಣದ ಪ್ರಮುಖ ದೇವಸ್ಥಾನಗಳಾದ ದೊಡ್ಡ ಹನುಮಂತ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಬಸವಣ್ಣ ದೇವರ ದೇವಸ್ಥಾನ, ಪಾಂಡುರಂಗ ದೇವಸ್ಥಾನ ಸೇರಿದಂತೆ ಎಲ್ಲ ದೇಗುಲಗಳಲ್ಲಿ ದಸರಾ ಹಬ್ಬದ ಆಚರಣೆ ವಿಶಿಷ್ಟವಾಗಿರುತ್ತದೆ.

ಅನಾದಿಕಾಲದಿಂದ ಭಜನಾ ಪರಂಪರೆಯು ಕಲಘಟಗಿಯಲ್ಲಿದ್ದು, ದೊಡ್ಡ ದೊಡ್ಡ ಕಲಾವಿದರು ಭಜನೆಯ ಮೂಲಕ ದೇವಿಯ ಸೇವೆಗೈದಿದ್ದಾರೆ. ವಿಜಯದಶಮಿಯ ದಿನದಂದು ದೇವಿಯ ಪಲ್ಲಕ್ಕಿಯ ಜೊತೆ ಭಜನಾ ತಂಡಗಳೂ ನಗರ ಪ್ರದಕ್ಷಿಣೆ ಹಾಕುತ್ತವೆ.
ಅಶೋಕಕುಮಾರ ಅರ್ಕಸಾಲಿ,
ಹಿರಿಯ ನಾಟಕ-ಸಂಗೀತ ಕಲಾವಿದರು

*ಗಿರೀಶ ಮುಕ್ಕಲ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.