ಜೀವಜಲ ಸಂರಕ್ಷಣೆಗೆ ಕೃವಿವಿ ಮಹತ್ವದ ಹೆಜ್ಜೆ


Team Udayavani, Sep 22, 2017, 1:01 PM IST

hub2.jpg

ಹುಬ್ಬಳ್ಳಿ: ಜಗತ್ತಿನ ಪ್ರತಿ ಜೀವಿಗೂ ನೀರು ಅನಿವಾರ್ಯ. ಆದರೆ ಜಲ ಕೊರತೆ ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ, ಸವಾಲಾಗಿ ಪರಿಣಮಿಸಿದೆ. ಜಲ ಸಂರಕ್ಷಣೆ, ಸದ್ಬಳಕೆ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಲವು ಮಾದರಿ ಯತ್ನಗಳೊಂದಿಗೆ ಜಾಗತಿಕ ಮಟ್ಟದಲ್ಲಿ ತನ್ನ ಹೆಸರು ನಮೂದಿಸಿದ್ದು, ಜಲ ಜಾಗೃತಿಗೆ ಮಹತ್ವದ ಕೊಡುಗೆ ನೀಡತೊಡಗಿದೆ. 

ಜಲ ಸಂರಕ್ಷಣೆ, ಜಲ ಜಾಗೃತಿ ವಿಚಾರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ದೇಶದ ಇತರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿಯಾಗುವ ಹಲವು ಪ್ರಯೋಗ, ಕಾರ್ಯಗಳನ್ನು ಕೈಗೊಂಡಿದೆ. ಜಾಗತಿಕ ಜಲ ತಜ್ಞರ ಸಮಾವೇಶ, ಜಾಗತಿಕ ಜಲ ವೇದಿಕೆ, ಬರ ಮುಕ್ತ ಭಾರತ, ಜಲ ಸಂರಕ್ಷಣೆ ಜಾಗೃತಿ ಹೀಗೆ ಹಲವು ಕಾರ್ಯಗಳಿಗೆ ಧಾರವಾಡ ಕೃವಿವಿ ವೇದಿಕೆಯಾಗಿದೆ. ಈ ಬಾರಿಯ ಕೃಷಿ ಮೇಳವನ್ನು “ಜಲ ವೃದ್ಧಿ-ಕೃಷಿ ಅಭಿವೃದ್ಧಿ’ ಧ್ಯೇಯ ವಾಕ್ಯದಡಿ ಕೈಗೊಳ್ಳುವ ಮೂಲಕ ಜಲಕ್ಕೆ ಮೊದಲಾದ್ಯತೆ ನೀಡಿದೆ.

ಸಂಕಷ್ಟ ಸ್ಥಿತಿ: ಜಲ ಸಮಸ್ಯೆ ಕೇವಲ ಉತ್ತರ ಕರ್ನಾಟಕ, ಕರ್ನಾಟಕ, ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಯಾಗಿದ್ದು, ಜಲ ಕೊರತೆ ಹಾಗೂ ಹವಾಮಾನ ಬದಲಾವಣೆ ಇಡೀ ಜಗತ್ತು ಚಿಂತಾಕ್ರಾಂತವಾಗುವಂತೆ ಮಾಡಿದೆ.

ದೇಶದಲ್ಲಿ ಸುಮಾರು 400 ನದಿಗಳು ಅಂದಾಜು 1,860 ಬಿಲಿಯನ್‌ ಕ್ಯುಬಿಕ್‌ ಮೀಟರ್‌ನಷ್ಟು ನೀರು ಹೊತ್ತು ಸಾಗುತ್ತಿದ್ದರೂ ಇಡೀ ದೇಶ ಇಂದು ನೀರಿಗಾಗಿ ಹಾಹಾಕಾರ ಪಡುವಂತಹ ಸ್ಥಿತಿ ಎದುರಾಗಿದೆ. ನೀರಿನ ಸಮರ್ಪಕ ನಿರ್ವಹಣೆ, ಸದ್ಬಳಕೆ ಕೊರತೆ, ಪರಿಸರ ನಾಶ ಇವೆಲ್ಲವೂ ನೀರಿನ ಕೊರತೆಗೆ ಮಹತ್ವದ ಕೊಡುಗೆ ನೀಡತೊಡಗಿವೆ.

1951ರಲ್ಲಿ ಒಬ್ಬ ವ್ಯಕ್ತಿಗೆ ವಾರ್ಷಿಕವಾಗಿ ಸುಮಾರು 5,200 ಕ್ಯುಬಿಕ್‌ ಮೀಟರ್‌ನಷ್ಟು ನೀರು ಬಳಕೆಗೆ ಲಭ್ಯವಿತ್ತು. ತಜ್ಞರ ಪ್ರಕಾರ 2050 ವೇಳೆಗೆ ಒಬ್ಬ ವ್ಯಕ್ತಿಗೆ ವಾರ್ಷಿಕವಾಗಿ ದೊರೆಯುವ ನೀರಿನ ಪ್ರಮಾಣ ಕೇವಲ 1,191ಕ್ಯುಬಿಕ್‌ ಮೀಟರ್‌ ಎಂದು ಅಂದಾಜಿಸಲಾಗಿದೆ. ಭೂ ಮಂಡಲದಲ್ಲಿ ಶೇ.97.2ರಷ್ಟು ನೀರು ಸಮುದ್ರದ ರೂಪದಲ್ಲಿದ್ದರೆ, ಶೇ.2.8ರಷ್ಟು ಬಳಕೆಗೆ ಲಭ್ಯವಿದೆ.

ಇದರಲ್ಲಿ ಶೇ.85.3ರಷ್ಟು ನೀರಾವರಿ ರೂಪದಲ್ಲಿ ಕೃಷಿಗೆ ಬಳಕೆಯಾದರೆ, ಶೇ.6.5ರಷ್ಟು ಗೃಹ ಬಳಕೆಗೆ, ಶೇ.1.3ರಷ್ಟು ಕೈಗಾರಿಕೆಗೆ, ಶೇ.03ರಷ್ಟು ವಿದ್ಯುತ್‌ ಉತ್ಪಾದನೆಗೆ ಬಳಕೆ ಆಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹಾಗೂ ಕೃಷಿ ಕ್ಷೇತ್ರದ ನೀರಾವರಿ ಪ್ರದೇಶದ ಹೆಚ್ಚಳ ಆಗುತ್ತಿದೆ. 2020ರ ವೇಳೆಗೆ ದೇಶದ ಒಟ್ಟು ಜನಸಂಖ್ಯೆ 1,439 ಮಿಲಿಯನ್‌ ಆಗಲಿದ್ದು, ಆ ವೇಳೆಗೆ ಅಂದಾಜು 276 ಮಿಲಿಯನ್‌ ಟನ್‌ನಷ್ಟು ಆಹಾರ ಧಾನ್ಯಗಳು ಬೇಕಾಗುತ್ತದೆ. 

ಆದರೆ 2020ರ ವೇಳೆಗೆ ಆಹಾರ ಧಾನ್ಯಗಳ ಉತ್ಪಾದನೆಯ ಗುರಿ 313.18 ಮಿಲಿಯನ್‌ ಟನ್‌ ಆಗಿರಬೇಕಾಗುತ್ತದೆ. 1951ರಲ್ಲಿ 23 ಮಿಲಿಯನ್‌ ಹೆಕ್ಟೇರ್‌ ಇದ್ದ ಕೃಷಿ ನೀರಾವರಿ ಪ್ರದೇಶ ಇದೀಗ 88-90 ಮಿಲಿಯನ್‌ ಹೆಕ್ಟೇರ್‌ನಷ್ಟು ಹೆಚ್ಚಳವಾಗಿದೆ. ಇವೆಲ್ಲವುದಕ್ಕೂ ನೀರು ಪೂರೈಕೆ ಅತ್ಯವಶ್ಯವಾಗಿದೆ.

ಜಲ ಕಂಟಕ ಪರಿಹಾರಕ್ಕೆ ಅಳಿಲು ಸೇವೆ: ಜಲ ಕಂಟಕ ಇಡೀ ಜಗತ್ತನ್ನೇ ಕಾಡುತ್ತಿರುವ ಇಂದಿನ ಸ್ಥಿತಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇದಕ್ಕೆ ಪರಿಹಾರ ರೂಪದಲ್ಲಿ ತನ್ನ ಅಳಿಲು ಸೇವೆಗೆ ಮುಂದಾಗಿದೆ. ಇದರ ಭಾಗವಾಗಿಯೇ ಕಳೆದ ವರ್ಷದ ಅಕ್ಟೋಬರ್‌ 24-26ರವರೆಗೆ ಧಾರವಾಡ ಕೃವಿವಿಯಲ್ಲಿ ನಡೆದ ಜಾಗತಿಕ ಜಲತಜ್ಞರ ಸಮಾವೇಶದಲ್ಲಿ 20 ದೇಶಗಳ ಸುಮಾರು 150ಕ್ಕೂ ಅಧಿಕ ವಿವಿಧ ತಜ್ಞರು ಹಾಗೂ ಜಲ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದರು.

ಇಲ್ಲಿ ಕೈಗೊಂಡ “ಧಾರವಾಡ ಡಿಕ್ಲರೇಶನ್‌’ ಮೊರ್ಯಾಕ್ಕೊ ದೇಶದ ಮರಾಕೇಶದಲ್ಲಿ ವಿಶ್ವ ಸಂಸ್ಥೆ ಪ್ರಾಯೋಜಿತ ಕಾಪ್‌-22 ಶೃಂಗಸಭೆಯಲ್ಲಿ ಧಾರವಾಡ ಡಿಕ್ಲರೇಶನ್‌ ಪ್ರಸ್ತುತ ಪಡಿಸುವ ಮೂಲಕ ಧಾರವಾಡ ಕೃವಿವಿ ವಿಶ್ವದ ಗಮನ ಸೆಳೆದಿತ್ತು. ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮ್ಮೇಳನ ಇದೇ ವರ್ಷದ ಆಗಸ್ಟ್‌ 15-18ರವರೆಗೆ ಐತಿಹಾಸಿಕ ನಗರ ವಿಜಯಪುರದಲ್ಲಿ ನಡೆದಿತ್ತು. ಇದರಲ್ಲಿಯೂ ಧಾರವಾಡ ಕೃವಿವಿ ಸಕ್ರಿಯ ಪಾತ್ರ ನಿರ್ವಹಿಸಿತ್ತು. 

ಕೃಷಿ ಭಾಗ್ಯಕ್ಕೆ ಬುನಾದಿ: 1987ರಲ್ಲಿಯೇ ಧಾರವಾಡ ಕೃವಿವಿ ವಿಜಯಪುರ ಜಿಲ್ಲೆಯ ಯರನಾಳ ಜಲಾನಯನ ಯೋಜನೆಗೆ ರಾಷ್ಟ್ರೀಯ ಉತ್ಪಾದಕಾ ಪ್ರಶಸ್ತಿ ಪಡೆದಿತ್ತಲ್ಲದೆ, ಸವಳು-ಜವಳು ನಿವಾರಣೆಗೆ ಮಹತ್ವದ ಕೊಡುಗೆ ನೀಡಿತ್ತು. ಕೃವಿವಿಯ ಅಂದಿನ ತಂತ್ರಜ್ಞಾನವೇ ಪ್ರಸ್ತುತ ರಾಜ್ಯ ಸರಕಾರದ ಕೃಷಿಹೊಂಡ ನಿರ್ಮಾಣದ ಕೃಷಿಭಾಗ್ಯ ಯೋಜನೆಗೆ ಬುನಾದಿಯಾಗಿದೆ. ಕೃವಿವಿ ಅಗ್ರಿಕ್ಲೈಮೆಟ್‌ ವಿಭಾಗವನ್ನು ಸಹ ಇತ್ತೀಚೆಗೆ ಆರಂಭಿಸಿದೆ. 

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.