ಬಾವಿಗೆ ಬಿದ್ದ ಕಾಡುಕೋಣ ಕೊನೆಗೂ ಬಚಾವ್!
Team Udayavani, Jun 4, 2018, 5:09 PM IST
ಸಾಗರ: ನೀರನ್ನು ಅರಸುತ್ತ ಕಾಡಿನಿಂದ ಬಂದ ಕಾಡುಕೋಣವೊಂದು ತೋಟದಲ್ಲಿದ್ದ ತೆರೆದ ಬಾವಿಯಲ್ಲಿ ಬಿದ್ದಿದ್ದು, ಗ್ರಾಮಸ್ಥರು ಇದನ್ನು ರಕ್ಷಿಸಿದ್ದಾರೆ. ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ತುಂಬೆಯ ಚಂದ್ರಶೇಖರ ಭಟ್ ಅವರ ಅಡಕೆ ತೋಟಕ್ಕೆ ಶುಕ್ರವಾರ ಸಂಜೆ ಬಂದ ಕಾಡುಕೋಣ ಬಾವಿಗೆ ಬಿದ್ದಿದ್ದು ಹೊರಬರಲಾರದೆ ಒದ್ದಾಡಿದ್ದು, ಕೊನೆಗೂ ಶನಿವಾರ ಗ್ರಾಮಸ್ಥರಿಂದ ರಕ್ಷಿಸಲ್ಪಟ್ಟು ಕಾಡಿಗೆ ತೆರಳಿದೆ.
ತೋಟಕ್ಕೆ ಬಂದ ಕೋಣ ನೆಲಮಟ್ಟದವರೆಗೆ ನೀರಿನಿಂದ ತುಂಬಿದ್ದ ಬಾವಿಗೆ ಬಗ್ಗಿದೆ. ಈ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದಿದೆ. ಮಳೆಯ ಕಾರಣ ಬಾವಿಯ ಸುತ್ತಲಿನ ಮಣ್ಣು ಸಂಪೂರ್ಣ ಜಾರುತ್ತಿದೆ. ಹೀಗಾಗಿ ಕೋಣ ಬಾವಿಯಿಂದ ಮೇಲೆ ಹತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಈ ಹಂತದಲ್ಲಿ ಕಕ್ಕಾಬಿಕ್ಕಿಯಾದ ಕೋಣ ನೀರಿನಲ್ಲಿ ಭುಸುಗುಡುತ್ತ ಅಲ್ಲಿಯೇ ಇದೆ.
ಬಾವಿಗೆ ಬಿದ್ದು 12 ತಾಸಿಗೂ ಹೆಚ್ಚು ಸಮಯ ನೀರಲ್ಲಿ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದ ಕಾಡುಕೋಣ ಶನಿವಾರ ತೋಟದ ಮಾಲೀಕರ ಕಣ್ಣಿಗೆ ಬಿದ್ದಿದೆ. ತಕ್ಷಣ ಊರವರು ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯ ಇಲಾಖೆಗೂ ಕರೆ ಹೋಗಿದೆ. ಈ ನಡುವೆ ಗ್ರಾಮದವರು ಕೋಣ ಮೇಲಕ್ಕೆ ಹತ್ತಿ ಬರಲು ಸಹಾಯ ಆಗುವಂತೆ ಬಾವಿಗೆ ಸಮನಾಗಿ ಪಕ್ಕದಲ್ಲೇ ಅಗೆದು ದಾರಿ ಮಾಡಿದ್ದಾರೆ. ಆನಂತರ ಕೋಣ ಅಲ್ಲಿಂದ ಕಾಲ್ಕಿತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಕೋಣವನ್ನು ರಕ್ಷಿಸುವ ಕೆಲಸದಲ್ಲಿ ತುಂಬೆಯ ನವನೀತ್ ಹೆಗಡೆ, ದಿನೇಶ್ ಚೌಡೀಮನೆ, ವೆಂಕಟೇಶ್, ಗಣಪತಿ, ಗೋಪಾಲ ಮತ್ತಿತರರು ಕೈ ಜೋಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.