13 ಗ್ರಾಮಗಳ ಜನರಿಂದ ಪ್ರತಿಭಟನೆ
Team Udayavani, Apr 7, 2017, 1:22 PM IST
ಧಾರವಾಡ: ನಿಗದಿ ಹಾಗೂ ಮುಗದ ಸುತ್ತಮುತ್ತಲಿನ ಗ್ರಾಮಗಳನ್ನು ಧಾರವಾಡ ತಾಲೂಕಿನಲ್ಲೇ ಮುಂದುವರಿಸುವಂತೆ ಆಗ್ರಹಿಸಿ ಧಾರವಾಡ ತಾಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಿಗದಿ ಹಾಗೂ ಮುಗದ ಸುತ್ತಮುತ್ತಲಿನ 13 ಗ್ರಾಮಗಳ ಜನರು ಡಿಸಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಸರಕಾರ ಧಾರವಾಡ ಜಿಲ್ಲೆಯಲ್ಲಿ 2017-18ರ ಬಜೆಟ್ನಲ್ಲಿ ಅಳ್ನಾವರ ಹೊಸ ತಾಲೂಕು ಘೋಷಿಸಿದೆ. ಅದರ ಅಂಗವಾಗಿ ಧಾರವಾಡ ತಾಲೂಕು ವಿಭಜಿಸಿ ಹೊಸ ಅಳ್ನಾವರ ತಾಲೂಕಿಗೆ ನಿಗದಿ ಹಾಗೂ ಸುತ್ತಲಿನ 13 ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸುವ ಪ್ರಯತ್ನ ನಡೆದಿದೆ.
ಇದು ನಮ್ಮ ಗ್ರಾಮಗಳ ಜನರಿಗೆ ತುಂಬಾ ಅನಾನುಕೂಲ ಮತ್ತು ತೊಂದರೆ ಉಂಟು ಮಾಡಲಿದೆ. ಈ ಹಿಂದೆಯೇ ತರಕಾರು ಮನವಿಯನ್ನು ಸಂಬಂಧಪಟ್ಟವರಿಗೆ ಗ್ರಾಮಗಳಿಂದ ಸಲ್ಲಿಸಲಾಗಿತ್ತು. ಆದರೆ ಈಗ ಗ್ರಾಮಗಳ ಜನರ ಮನವಿಗೆ ಸ್ಪಂದಿಸದೇ ಆ ಭಾಗಗಳನ್ನು ಅಳ್ನಾವರ ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ದೂರಿದರು.
ಅಳ್ನಾವರ ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ಹೊರಟಿರುವ 13 ಗ್ರಾಮಗಳು ಧಾರವಾಡ ತಾಲೂಕಿನಿಂದ ಕೇವಲ 10-15 ಕಿ.ಮೀ ಅಂತರದಲ್ಲಿವೆ. ಆದರೆ ಹೊಸ ಅಳ್ನಾವರ ತಾಲೂಕು ಈ ಗ್ರಾಮಗಳಿಂದ 40ರಿಂದ 55ಕಿ.ಮೀ ದೂರದಲ್ಲಿವೆ. ಇದರಿಂದ ಜನರಿಗೆ ಸಾಕಷ್ಟು ಅನಾನುಕೂಲ ಆಗಲಿದ್ದು, ಸಮಯವೂ ನಷ್ಟ ಆಗಲಿದೆ.
ಇದಲ್ಲದೇ ಜನರಿಗೆ ಸರಕಾರಿ ಕೆಲಸಗಳು ದುರ್ಬಲ ಆಗಲಿದ್ದು, ಒಂದು ವೇಳೆ ಅಭಿವೃದ್ಧಿ ದೃಷ್ಟಿಯಿಂದ ತಾಲೂಕು ರಚನೆ ಅನಿವಾರ್ಯವಾದಲ್ಲಿ ಧಾರವಾಡ ಶಹರ ತಾಲೂಕು ಹಾಗೂ ಧಾರವಾಡ ಗ್ರಾಮೀಣ ತಾಲೂಕು ಎಂದು ಮಾಡಬೇಕು ಎಂದು ಡಿಸಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಮಹಾದೇವಪ್ಪ ನೀರಲಗಿ, ದೇವೇಂದ್ರ ಕಾಳೆ, ಭಾವನಾ ಬೇಲೂರ, ಶ್ರೀಕಾಂತ ಕ್ಯಾತಪ್ಪನವರ, ಸೇರಿದಂತೆ ನಿಗದಿ, ಮುಗದ, ದೇವರಹುಬ್ಬಳ್ಳಿ, ಮನಸೂರ ಒಳಗೊಂಡಂತೆ ವಿವಿಧ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು
Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ
Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.