ಜನಸಾಮಾನ್ಯರಿಗೆ ರಾಜ್ಯ ಇಬ್ಭಾಗ ಬೇಕಿಲ್ಲ : ಪ್ರೊ| ಭಾವಿಕಟಿ


Team Udayavani, Aug 1, 2018, 5:11 PM IST

1-agust-20.jpg

ಗಂಗಾವತಿ (ಗಂಡುಗಲಿ ಕುಮಾರರಾಮ): ರಾಜಕಾರಣಿಗಳಿಗೆ ಬೇಕಾಗಿರುವ ರಾಜ್ಯದ ಇಬ್ಭಾಗ ಸಾಮಾನ್ಯರಿಗೆ ಬೇಕಿಲ್ಲ ಎಂದು ಪ್ರೊ| ಲಲಿತಾ ಭಾವಿಕಟ್ಟಿ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಪ್ರಥಮ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿ ಮಾತನಾಡಿದರು. ಅರಳಿ ನಾಗಭೂಷಣ ತಮ್ಮ ಕವಿತೆಯ ಮೂಲಕ ಪ್ರತಿಯೊಬ್ಬ ಭೂಮಿ, ಗಾಳಿ, ನೀರು ಸೇರಿ ಪ್ರಕೃತಿಯಂತೆ ಕ್ಷಮೆ ಗುಣವನ್ನು ಮನುಷ್ಯ ಅಳವಡಿಸಿಕೊಳ್ಳಲು ಮನವಿ ಮಾಡಿದರು.

ಹೆಬ್ಟಾಳ ನಾಗಭೂಷಣ ಶಿವಾಚಾರ್ಯರು ಚಂದ್ರ-ಸೂರ್ಯಗ್ರಹಣದ ಸಂದರ್ಭದಲ್ಲಿ ಜ್ಯೋತಿಷಿಗಳು ಸೇರಿ ಕೆಲವರು ಜನರ ಅಮಾಯಕತೆಯನ್ನು ದುರುಪಯೋಗ ಮಾಡಿಕೊಂಡು ಮೌಡ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿ ಈಗ ವಿಳಂಬ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರನ್ನು ಎಚ್ಚರಿಸುವ ಕವಿತೆ ಓದುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಪ್ರಗತಿಪರ ಚಿಂತಕ ರಮೇಶ ಗಬ್ಬೂರು ತಮ್ಮ ಕವಿತೆಯಲ್ಲಿ ಅಗ್ರಹಾರದಲ್ಲಿ ಅಕ್ಷರ ಕಲಿಸುತ್ತಾರೆ. ಬಹುಸಂಖ್ಯಾತರು ಅನ್ನಕ್ಕಾಗಿ ಹೋರಾಟ ನಡೆಸುತ್ತಾರೆ ಎಂಬ ಕವನ ವಾಚನ ಮಾಡಿ ಶತಮಾನಗಳಿಂದ ದೇಶದಲ್ಲಿ ನಡೆಯುತ್ತಿರುವ ಜಾತಿ ಬೇಧಭಾವ ಮತ್ತು ಮೇಲು ಕೀಳು ಎಣಿಸುತ್ತ ಶೋಷಿತ ಕೆಳ ವರ್ಗದವರಿಗೆ ಶಿಕ್ಷಣದಿಂದ ಹೇಗೆ ವಂಚಿತರನ್ನಾಗಿ ಮಾಡಿದ್ದಾರೆ ಎಂಬ ಮಾಹಿತಿ ನೀಡಿ ಶೋಷಿತರ ಧ್ವನಿಯಾದರು.

ಶಿಕ್ಷಕ ವಿಜಯ ವೈದ್ಯ ಬುದ್ಧ ಸ್ಟೈಲ್‌ ಕವಿತೆಯಲ್ಲಿ ಯುದ್ಧ ಸನ್ನಿವೇಶ ಹಾಗೂ ಅಣು ಬಾಂಬುಗಳ ಕುರಿತು ಮಾನವ ರಕ್ತಪಾತದ ಬಗ್ಗೆ ಹೇಳಿದರು. ಕವಯಿತ್ರಿ ಸಲಿಮಾಮಂಗಳೂರು ಗಂಗಾವತಿಯಲ್ಲಿ ಕದಡಿರುವ ಕೋಮು ಸೌಹಾರ್ದ ಮತ್ತು ಪರಿಹಾರ ಸೂಚಿಸುವವರು ನಾವೇ ಎಂಬ ಕುರಿತು ಕವಿತೆ ರಚನೆ ಮಾಡಿ ಗಂಗಾವತಿ ಜನರ ಬಗ್ಗೆ ಕಳಕಳಿ ವ್ಯಕ್ತಪಡಿದರು.

ಸುಮಾರು 45ಕ್ಕೂ ಹೆಚ್ಚು ಕವಿ, ಕವಯಿತ್ರಿಗಳು ಪ್ರೇಮ-ಪ್ರಣಯ, ಪ್ರತೇಕ ರಾಜ್ಯ, ತುಂಗಭದ್ರಾ ಸೇರಿ ಹಲವು ವಿಷಯಗಳ ಕುರಿತು ಕವಿತೆಗಳ ವಾಚನ ಮಾಡಿದರು. ಸಾಹಿತಿ ನಿಜಲಿಂಗಪ್ಪ ಮೆಣಸಗಿ, ಡಾ|ನಾರಾಯಣ ಕಂದಗಲ್‌, ಮುಖಂಡರಾದ ದೇವಪ್ಪ ಕಾಮದೊಡ್ಡಿ, ಅಮರೇಗೌಡ್ರು, ಜೋಗದ ಹನುಮಂತಪ್ಪ, ದರೋಜಿ ಶ್ರೀರಂಗ, ಜಗದೀಶಪ್ಪ ಸಿಂಗನಾಳ, ಜಗನ್ನಾಥ ಆಲಂಪಲ್ಲಿ, ಜಿ. ಶ್ರೀಧರ ಕವಿಗೋಷ್ಠಿಯಲ್ಲಿದ್ದರು.

ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆ: ಪ್ರಾಣೇಶ
ಗಂಗಾವತಿ: ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆಯಾಗಿದೆ. ಪ್ರತ್ಯೇಕ ರಾಜ್ಯ ರಚನೆಯಾಗಬಾರದು ಎಂದು ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಕ್‌ ಕತ್ತರಿಸಿದರೆ ಎಲ್ಲರೂ ತಿನ್ನುತ್ತಾರೆ. ಹಾಗೇ ಇದ್ದರೆ ತಿನ್ನುವುದು ಕಷ್ಟ. ಕರ್ನಾಟಕ ಕೇಕ್‌ ಇದ್ದಂತೆ. ಇದನ್ನು ಕತ್ತರಿಸುವವರು ಜನರಿಂದ ತಿರಸ್ಕಾರಗೊಳ್ಳಲಿದ್ದಾರೆ. ಅಖಂಡತೆಯಲ್ಲಿ ಎಲ್ಲರ ಸುಖ ಅಡಗಿದೆ. ಪ್ರತ್ಯೇಕತೆಯಲ್ಲಿ ಕೆಲವರ ಹಿತ ಅಡಗಿದೆ. ಸಂಘಟನೆಗಳು ಪ್ರತ್ಯೇಕತೆ ಕೂಗನ್ನು ಕೈಬಿಡಬೇಕು. ಅಭಿವೃದ್ಧಿಗಾಗಿ ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳು ಕೇಳಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯ ಬೇಡ ಎಂದರು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.