ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ 


Team Udayavani, Dec 12, 2021, 12:47 PM IST

ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ 

ಧಾರವಾಡ: ಉತ್ತರ ಕರ್ನಾಟಕದ ಸಿಹಿ ತಿನಿಸುಗಳಾದ ಧಾರವಾಡ ಪೇಢಾ, ಬೆಳಗಾವಿ ಕುಂದಾ, ಗೋಕಾಕದ ಕರದಂಟುಗಳು ವಿಮಾನವೇರಿ ವಿದೇಶಗಳಿಗೆ ಹೋಗಿದ್ದು ಹಳೇ ಸುದ್ದಿ. ಇದೀಗ ಇದೇ ಭಾಗದ ಪ್ರಸಿದ್ಧ ಸಿಹಿ ಖಾದ್ಯ, ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳಲ್ಲಿ ಬಾಯಿ ಸಿಹಿಮಾಡುವ ಗೋಧಿ ಹುಗ್ಗಿ ಕೂಡ ವಿಶ್ವದಎಲ್ಲಾ ರಾಷ್ಟ್ರಗಳಲ್ಲಿರುವ ಸಿಹಿ ಪ್ರಿಯರು ಚಪ್ಪರಿಸಲು ಸಜ್ಜಾಗಿದೆ.

ಹೌದು, ಧಾರವಾಡದ ಸಾಂಪ್ರದಾಯಿಕ ಅಡುಗೆಗಳಿಗೆ ಪ್ರಸಿದ್ಧರಾದ ಹಿರಿಯ ಬಾಣಸಿಗ ವೀರಭದ್ರಪ್ಪ ಕಲ್ಲಪ್ಪ ಲಟ್ಟಿ ಎಂಬುವರು ಕಳೆದ ನಾಲ್ಕು ವರ್ಷಗಳಿಂದ ಸತತ ಪರಿಶ್ರಮ ಪಟ್ಟು ಕಡೆಗೂ ಗೋಧಿ ಹುಗ್ಗಿಯನ್ನು ಪ್ಯಾಕೇಟ್‌ನಲ್ಲಿ ಹಾಕಿ “ರೆಡಿ ಟು ಈಟ್‌’ ಮಾದರಿಯಲ್ಲಿ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿ ಸತತ ಸಂಶೋಧನೆ ಮತ್ತು ತಂತ್ರಜ್ಞರ ಸಲಹೆ, ಸಹಕಾರ ಪಡೆದು ಆರು ಗಂಟೆಗಳ ಕಾಲ ಮಾಡುವ ಗೋಧಿ ಹುಗ್ಗಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಸಜ್ಜುಗೊಳಿಸಿ ಊಟ ಮಾಡುವ ಹೊಸ ವಿಧಾನ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ.

ರೆಡಿ ಟೂ ಈಟ್‌ ಪ್ರಯೋಜನವೇನು?: ಗೋಧಿ ಹುಗ್ಗಿಯನ್ನು ಸರಳ, ಬೇಗವಾಗಿ ಮಾಡಲು ಆಗುವುದಿಲ್ಲ. ನಗರೀಕರಣದ ನಂತರವಂತೂ ಗೋಧಿ ಹುಗ್ಗಿ ನಗರವಾಸಿಗಳಿಗೆ ಗಗನ ಕುಸುಮವೇ ಆಗಿತ್ತು. ಇನ್ನು ಹಳ್ಳಿಗಳಲ್ಲಿ ಕೂಡ ಇದೀಗ ಎಲ್ಲೆಡೆ ಕಟ್ಟಿಗೆ ಒಲೆಗಳು ಮಾಯವಾಗಿದ್ದು, ಮಾಡಲು ಸಾಕಷ್ಟು ಶ್ರಮ ಹಾಕಬೇಕು. ಗೋಧಿ ಒಡೆಸಿ, ಅದನ್ನು ಕುಟ್ಟಿ, ತಾಸುಗಟ್ಟಲೆ ಕುದಿಸಿ, ಕೇರು ಗಿಡದ ಹುಟ್ಟಿನಿಂದಲೇಅದನ್ನು ಮಸೆದು ಹದ ಮಾಡಬೇಕು.ಇದೆಲ್ಲವನ್ನು ಮಾಡಲು ಇಂದಿನವರಿಗೆ ಸಾಧ್ಯವೇ ಇಲ್ಲವಾಗಿತ್ತು.

ಇದೀಗ ಧಾರವಾಡದ ಬಾಣಸಿಗ ವೀರಭದ್ರಪ್ಪ ಅವರು, ಸೆಂಟ್ರಲ್‌ ಫುಡ್‌ ರಿಸರ್ಚ್‌ ಟೆಕ್ನಾಲಜಿ ಮೈಸೂರು ಸಂಸ್ಥೆಯೊಂದಿಗೆ ಸತತ ಮೂರು ವರ್ಷ ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡಿ, ಅಂತಿಮವಾಗಿ ಸರಳವಾಗಿ ಮತ್ತು 6 ತಿಂಗಳ ಕಾಲ ಕಾಯ್ದಿಟ್ಟುಕೊಂಡು ಗೋಧಿ ಹುಗ್ಗಿ ಮಾಡುವಂತ ತಂತ್ರಜ್ಞಾನವನ್ನುಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಇದಕ್ಕೆ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ನವೋದ್ಯಮ ವಿಚಾರದಲ್ಲಿ ಬೆನ್ನಿಗೆ ನಿಂತು ಸಹಾಯ ಮಾಡಿದೆ. ಸದ್ಯಕ್ಕೆ 225 ಗ್ರಾಂನ ಪ್ಯಾಕೆಟ್‌ಗಳನ್ನು ಸಜ್ಜುಗೊಳಿಸಿದ್ದು, ಬೇಡಿಕೆಗೆತಕ್ಕಂತೆ ಪೂರೈಕೆಗೆ ಸಜ್ಜಾಗಿದೆ. ಇದೀಗ ಹಳ್ಳಿ, ನಗರ, ಹೊರ ರಾಜ್ಯ, ಹೊರ ದೇಶಗಳಲ್ಲಿರುವ ಗೋಧಿ ಹುಗ್ಗಿ ಪ್ರಿಯರು ಇದರ ರುಚಿಯನ್ನು ಸವಿಯಲುಅನುಕೂಲವಾಗಿದೆ.

ರಾಜಕೋಟ ಗೋಧಿ ಬಳಕೆ: ಧಾರವಾಡ ನೆಲದಲ್ಲಿ ಈಗಾಗಾಲೇ ಅಮೃತ ಸೇರಿದಂತೆ ಅನೇಕ ಗೋಧಿ ತಳಿಗಳನ್ನು ಹುಗ್ಗಿಗೆ ಬಳಕೆ ಮಾಡಲಾಗುತ್ತಿದೆ.ಆದರೆ ಇಲ್ಲಿ ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಬೆಳೆಯುವ ರಾಜಕೋಟ ಗೋಧಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕಾರಣ ಈ ಗೋಧಿ ವರ್ಷ ಪೂರ್ತಿ ಲಭ್ಯವಿರುತ್ತದೆ. ಬರುವ ದಿನಗಳಲ್ಲಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ವಿವಿಧ ತಳಿಯ ಗೋಧಿಯನ್ನು ಪರೀಕ್ಷೆಗೆ ಒಳಪಡಿಸಿ, ಮೌಲ್ಯವರ್ಧಿಸಿ ಗೋಧಿ ಹುಗ್ಗಿಗೆ ಬಳಕೆ ಮಾಡಿಕೊಳ್ಳಲು ವೀರಭದ್ರಪ್ಪ ಯೋಜಿಸಿದ್ದಾರೆ.

ಏನಿದು ಗೋಧಿ ಹುಗ್ಗಿ? :

ಅಖಂಡವಾಗಿರುವ ಗೋಧಿ ಕಾಳುಗಳನ್ನು ನೆನೆಸಿ ಒಳಕಲ್ಲಿನಲ್ಲಿ ಕುಟ್ಟಿ, 4-6 ಗಂಟೆಗಳ ಕಾಲ ಕುದಿಸಿ ಅದಕ್ಕೆ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ, ಕೇರು ಬೀಜ, ಖರ್ಜೂರ ಬೆರೆಸಿ ಮಿತ ದ್ರವ ಸ್ಥಿತಿಯಲ್ಲಿರುವಂತೆ ಮಾಡಿ ಸವಿಯುವುದೇ ಗೋಧಿಹುಗ್ಗಿ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಪಾರಂಪರಿಕ ಆಹಾರ. ಮದುವೆ, ಸೀಮಂತ, ದೊಡ್ಡ ಕಾರ್ಯಕ್ರಮಗಳು, ಸಮಾವೇಶಗಳು ಸೇರಿದಂತೆ ಶುಭ ಸಂದರ್ಭಗಳಲ್ಲಿ ಸಾಮೂಹಿಕ ಭೋಜನಕ್ಕೆ ಗೋಧಿ ಹುಗ್ಗಿಯೇ ಇಲ್ಲಿ ಪ್ರಧಾನ ಸಿಹಿ ಆಹಾರ ಪದಾರ್ಥ. ಗೋಧಿಯನ್ನು ಒಡೆದು ರವೆ ಮಾಡಿ ಬೆಲ್ಲದ ಜತೆ ಸೇರಿಸಿದ ಸಿಹಿ ಪದಾರ್ಥಕ್ಕೆ ಹುಗ್ಗಿ ಎನ್ನಲಾಗುತ್ತದೆ. ಆದರೆ ಇದಕ್ಕಿಂತಲೂ ಅಖಂಡವಾಗಿ ಕುದಿಸಿದ ಗೋಧಿ ಹುಗ್ಗಿ ರುಚಿಯಲ್ಲಿ ಒಂದು ಕೈ ಮೇಲು.

ಪೌಷ್ಟಿಕತೆ ಕಣಜ :

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಯಲು ಸೀಮೆ, ಬೆಳವಲದ ನಾಡಿನಲ್ಲಿ ಗೋಧಿ ಹುಗ್ಗಿ ಎಂದರೆ ಅದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕತೆಯ ಕಣಜ ಎನ್ನುವ ಪರಿಕಲ್ಪನೆ ಇದೆ. ಗೋಧಿ ಹುಗ್ಗಿಗೆ ತುಪ್ಪ, ಹಾಲು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣ ಕೊಬ್ಬರಿ, ಖರ್ಜೂರ ಸೇರಿದಂತೆ ಎಲ್ಲಾ ಪೋಷಕಾಂಶಗಳಿರುವ ಪದಾರ್ಥಗಳನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕ ಆಹಾರದ ಪಟ್ಟಿಯಲ್ಲಿದೆ. ಬೆಂಗಳೂರಿನ ವಿದ್ಯಾರ್ಥಿ ಭವನ ಮಸಾಲೆ ದೋಸೆ ವಿದೇಶಿ ವಿಮಾನವೇರಿದಾಗ ಹೊರ ದೇಶದಲ್ಲಿನ ಕನ್ನಡಿಗರು ಸಂಭ್ರಮಿಸಿದ್ದರು. ಇದೀಗ ಕನ್ನಡಿಗರ ಸಿಹಿ ಖಾದ್ಯವೊಂದು ವಿದೇಶಗಳಲ್ಲಿರುವವರ ಬಾಯಿ ಚಪ್ಪರಿಸಲು ಸಜ್ಜಾಗಿರುವುದು ವಿಶೇಷ

ಗೋಧಿ ಹುಗ್ಗಿ ತಂತ್ರಜ್ಞಾನದ ಕುರಿತು ಹೊರ ದೇಶಗಳಲ್ಲಿರುವ ಕನ್ನಡಿಗರು ಅದರಲ್ಲೂ ಉತ್ತರ ಕರ್ನಾಟಕದ ಕನ್ನಡಿಗರು ಹೆಚ್ಚು ಹರ್ಷ ವ್ಯಕ್ತಪಡಿಸಿದ್ದು, ಯುಎಸ್‌ಎ, ಹಾಂಗ್‌ಕಾಂಗ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ರಷ್ಯಾದಿಂದ ಬೇಡಿಕೆ ಬಂದಿದೆ. ದುಬೈ-2020 ಪ್ರದರ್ಶನದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಕನ್ನಡದ ಸಿಹಿ ಆಹಾರವೊಂದನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಸವಿಯುವಂತೆ ಮಾಡಬೇಕೆಂಬ ಕನಸು ನನಸಾಗಿದೆ. -ವೀರಭದ್ರಪ್ಪ ಲಟ್ಟಿ, ಗುರು ಬಸವಾ ಕೇಟರಿಂಗ್‌ ಮಾಲೀಕ

­-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.