ಹೋಮ್‌ ಗಾರ್ಡ್ಸ್‌ ಸೇವೆ ಸ್ಮರಣೀಯ: ಎಸ್ಪಿ

ಗೃಹರಕ್ಷಕರ ಕೊಡುಗೆಯೂ ಅತ್ಯಂತ ಪ್ರಮುಖ ಅಂಶವಾಗಿದೆ.

Team Udayavani, Dec 10, 2021, 5:49 PM IST

ಹೋಮ್‌ ಗಾರ್ಡ್ಸ್‌ ಸೇವೆ ಸ್ಮರಣೀಯ: ಎಸ್ಪಿ

ಧಾರವಾಡ: ಪೊಲೀಸ್‌ ಇಲಾಖೆಯೊಂದಿಗೆ ಹೋಮ್‌ ಗಾರ್ಡ್‌ಗಳ ಬದ್ಧತೆಯ ಸೇವೆ ಸ್ಮರಣೀಯವಾಗಿದ್ದು, ಅವರಿಗೆ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಪಿ.ಕೃಷ್ಣಕಾಂತ ಹೇಳಿದರು.

ನಗರದಲ್ಲಿ ಗೃಹರಕ್ಷಕ ದಳದ ವತಿಯಿಂದ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 59ನೇ ಅಖೀಲ ಭಾರತ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೃಹರಕ್ಷಕದಳದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡುತ್ತಾರೆ.

ಪೊಲೀಸ್‌ ಸಿಬ್ಬಂದಿ ಕಡಿಮೆ ಇದ್ದಾಗ ಇಲಾಖೆಗೆ ಗೃಹರಕ್ಷಕದಳದ ಸಿಬ್ಬಂದಿ ಹಾಜರಾತಿಯಿಂದ ಧೈರ್ಯ ಬರುತ್ತದೆ. ಗೃಹರಕ್ಷಕ ಸಿಬ್ಬಂದಿ ಸಮವಸ್ತ್ರ ಹಾಕಿಕೊಂಡು ಸಮಾಜದ ರಕ್ಷಣೆಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು. ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಕರ್ತವ್ಯಗೈದ ಸೇವೆ ಶ್ಲಾಘನೀಯವಾಗಿದೆ. ವೈಯಕ್ತಿಕವಾಗಿ ಸಮಸ್ಯೆಗಳಿದ್ದರೆ ನೇರವಾಗಿ ಬಂದು ಭೇಟಿಯಾಗಬಹುದು.  ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಗೃಹರಕ್ಷಕ ಸಿಬ್ಬಂದಿಗೆ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಹಾಗೂ ಗೃಹರಕ್ಷಕದಳದ ಶಿವಾನಂದ ಚನ್ನಬಸಪ್ಪನವರ ಮಾತನಾಡಿ, 59 ವರ್ಷಗಳ ಇತಿಹಾಸ ಹಿಂದಿರುಗಿ ನೋಡಿದರೆ ಬಡ ರಾಷ್ಟ್ರವಾಗಿದ್ದ ನಮ್ಮ ದೇಶ ಅಭಿವೃದ್ಧಿ ಹೊಂದಲು ಅನೇಕರು ಅನೇಕ ರೀತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲಿ ಗೃಹರಕ್ಷಕರ ಕೊಡುಗೆಯೂ ಅತ್ಯಂತ ಪ್ರಮುಖ ಅಂಶವಾಗಿದೆ. ಮುಂಬರುವ ದಿನಗಳಲ್ಲಿ ಗೃಹರಕ್ಷಕರು ಸರ್ಕಾರದ ಭಾಗವಾಗುವ ಸಾಧ್ಯತೆಗಳಿವೆ
ಎಂದರು.

ಜಿಲ್ಲಾ ಗೃಹರಕ್ಷಕದಳ ನಿವೃತ್ತ ಡೆಪ್ಯುಟಿ ಕಮಾಂಡರ್‌ ಬಿ.ಆರ್‌. ಕಂದಗಲ್‌ ಪ್ರಾಸ್ತಾವಿಕ ಮಾತನಾಡಿದರು. ಸ್ಟಾಫ್‌ ಆಫೀಸರ್‌ ಡಾ| ಎಂ.ಎ. ಮುಮ್ಮಿಗಟ್ಟಿ ವರದಿ ವಾಚನ ಮಾಡಿದರು. ಜಿಲ್ಲಾ ಗೃಹರಕ್ಷಕ ದಳದ ಮಾಜಿ ಕಮಾಂಡೆಂಟ್‌ ಸತೀಶ್‌ ಕುಮಾರ ಪಾಟೀಲ, ಗೃಹರಕ್ಷಕದಳದ ಸಹಾಯಕ ಬೋಧಕರಾದ ಟಿ.ಎ. ಬಾದಾಮಿ, ಆರ್‌.ಎಚ್‌. ಶಾಂತಗೇರಿ, ಜಿಲ್ಲಾ ಗೃಹರಕ್ಷಕದಳದ ಘಟಕಾ ಧಿಕಾರಿಗಳಾದ ಅಶೋಕ ಬಿ.ಗೌಡರ್‌, ಪ್ಲಟೂನ್‌ ಕಮಾಂಡರ್‌ ವಾದಿರಾಜ
ದೇಶಪಾಂಡೆ, ಸ್ಟಾಫ್‌ ಆಫೀಸರ್‌ ಹಾಗೂ ಜಿಲ್ಲೆಯ ಪೌರರಕ್ಷಣಾ ಚೀಫ್‌ ವಾರ್ಡನ್‌ ಸತೀಶ ಇರಕಲ್‌, ಜಿಲ್ಲಾ ಗೃಹರಕ್ಷಕದಳದ ಸಹಾಯಕ ಆಡಳಿತಾಧಿಕಾರಿ ಸತೀಶ್‌ ನಾಯಕ, ಸೆಕ್ಷನ್‌ ಲೀಡರ್‌ ಪ್ರಶಾಂತ ಲೋಕಾಪುರ, ಗೃಹರಕ್ಷಕ ಮತ್ತು ಗೃಹರಕ್ಷಕಿ ಸಿಬ್ಬಂದಿ ಇದ್ದರು. ಮುಖ್ಯಮಂತ್ರಿ ಪದಕ ಪಡೆದ 6 ಗೃಹರಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ನೆನಪಿನ ಕಾಣಿಗೆ ನೀಡಿ ಸನ್ಮಾನಿಸಲಾಯಿತು. ಡಾ| ಪ್ರಕಾಶ ಪವಾಡಶೆಟ್ಟಿ ನಿರೂಪಿಸಿದರು.

ಟಾಪ್ ನ್ಯೂಸ್

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

ISRO ಅಧ್ಯಕ್ಷರಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್

ISRO ಅಧ್ಯಕ್ಷರಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್

ಹುಬ್ಬಳ್ಳಿ: ರೋಟರಿ ಆರೋಗ್ಯ ವಾಹಿನಿಗೆ ಚಾಲನೆ

ಹುಬ್ಬಳ್ಳಿ: ರೋಟರಿ ಆರೋಗ್ಯ ವಾಹಿನಿಗೆ ಚಾಲನೆ

1-qwwewewq

Hubballi; ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.