![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 8, 2021, 8:16 PM IST
ಧಾರವಾಡ : ಮುಖ್ಯಮಂತ್ರಿಗಳ ದೆಹಲಿಯ ಭೇಟಿ ವಿಚಾರ ತಪ್ಪಾಗಿ ಭಾವಿಸುವುದಾಗಲಿ, ಬಣ್ಣ ಹೆಚ್ಚುವುದಾಗಲಿ ಸರಿಯಾದ ಬೆಳವಣಿಗೆಯಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ರಾಜ್ಯದಲ್ಲಿ ಜಟಿಲ ಸಮಸ್ಯೆಗಳಿವೆ. ಆಗಬೇಕಾದ ಸಾಕಷ್ಟು ಶಾಸ್ವತ ಅಭಿವೃದ್ಧಿ ಕೆಲಸ ಇವೆ. ಹೀಗಾಗಿ ಅವುಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಆಗಾಗ ದೆಹಲಿಗೆ ಹೋಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಮುಖ್ಯಮಂತ್ರಿಗಳು ದೆಹಲಿಗೆ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ. ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಫೋಟೋಗಳು ಬಂದಿವೆ. ಹೀಗಾಗಿ ಇದನ್ನೇ ತಪ್ಪಾಗಿ ಭಾವಿಸುವುದು ಸರಿಯಲ್ಲ ಎಂದರು.
ನಮ್ಮ ಇಲಾಖೆಗಳ ಫೈಲ್ಗಳನ್ನು ಮೂವ್ ಮಾಡಿಸಲು ಹೋಗಬೇಕು. ಇದನ್ನೇ ದೆಹಲಿ ಹೈಕಮಾಂಡ್ ಭೇಟಿ ಎಂದರೆ ಹೇಗೆ ? ಬಿಜೆಪಿಯಲ್ಲಿ ಯಾವುದೇ ವೈಮನಸ್ಸುಗಳಿಲ್ಲ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ವೈಮನಸ್ಸುಗಳಿವೆ ಎಂಬುದು ಕೇವಲ ಊಹಾಪೋಹ. ಅದರಲ್ಲೂ ಬಿಜೆಪಿ ಪಕ್ಷದ ನಾಯಕ ಅಮಿತ್ ಶಾ ಅವರೇ ಮುಕ್ತವಾಗಿ ಸಿಎಂ ಅವರ ಕಾರ್ಯ ಶ್ಲಾಘಿಸಿದ್ದಾರೆ. ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಒಗ್ಗಾಟ್ಟಾಗಿಯೇ ಇದ್ದೇವೆ ಎಂದು ಎಂದು ಸ್ಪಷ್ಟಪಡಿಸಿದರು.
ಡ್ರಗ್ಸ್ ಪ್ರಕರಣ ಕುರಿತು ಈಗಲೇ ಪ್ರತಿಕ್ರಿಯೆ ನೀಡಲಾರೆ :
ಡ್ರಗ್ಸ ಪ್ರಕರಣದ ವಿಚಾರಣೆ ಆಗಿದ್ದು, ಈಗಾಗಲೇ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಇದರಲ್ಲಿ ಏನಾದರೂ ಇದ್ದರೆ ಮತ್ತೆ ವಿಚಾರಣೆ ಆಗುತ್ತದೆ. ಕಿಶೋರ ಶೆಟ್ಟಿ ನಾನು ಅನುಶ್ರೀ ಹೆಸರು ಹೇಳಿಲ್ಲ ಎನ್ನುತ್ತಾರೆ. ಈಗ ಹೆಸರು ಹೊರಗೆ ತಂದಿದ್ದು ಯಾರು? ಪ್ರಸ್ತಾಪ ಮಾಡಿದ್ಯಾರು? ಅದನ್ನು ತೆಗೆದುಕೊಂಡು ನಾವೇನು ಮಾಡಬೇಕು. ಈ ಬಗ್ಗೆ ನಾನೇನೂ ವಿವರವಾದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಅಗರ ಜ್ಞಾನೇಂದ್ರ ಹೇಳಿದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.