ಮಳೆಗಾಲ ಬಳಿಕ ಜೇನು ಮೇಳ

|ಅಕ್ಟೋಬರ್‌ನಲ್ಲಿ ಮೂರು ದಿನ ಕಾಲ ಆಯೋಜನೆಗೆ ಚಿಂತನೆ |ಜೇನು ಸಾಕಾಣಿಕೆ ವಿಧಾನ-ಲಾಭ ಮಾಹಿತಿ ಲಭ್ಯ |

Team Udayavani, May 31, 2019, 9:55 AM IST

hubali-tdy-2..

ಧಾರವಾಡ: ಬೇಸಿಗೆಯಲ್ಲಿ ಮಾವು ಮೇಳದ ಮೂಲಕ ಮಾವಿನ ಹಣ್ಣಿನ ರುಚಿ ಸವಿದಿರುವ ಧಾರವಾಡಿಗರಿಗೆ ಮಳೆಗಾಲ ಅಂತ್ಯದ ಬಳಿಕ ಜೇನು ಮೇಳವೂ ಲಭ್ಯವಾಗಲಿದೆ.

ಹೌದು. ಇಂತಹ ಮೇಳ ಆಯೋಜನೆಗೆ ಧಾರವಾಡದ ತೋಟಗಾರಿಕೆ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಮಾವು ಮೇಳ ಹಾಗೂ ಅದರ ಜತೆ ಸಸ್ಯಸಂತೆ ಕೈಗೊಂಡು ಯಶಸ್ಸು ಪಡೆದ ತೋಟಗಾರಿಕೆ ಇಲಾಖೆ, ಈಗ ಇದೇ ಮೊದಲ ಬಾರಿಗೆ ಜೇನು ಮೇಳ ಆಯೋಜನೆಗೆ ಚಿಂತನೆ ಕೈಗೊಂಡಿದೆ. ಅದಕ್ಕಾಗಿ ಈಗಿನಿಂದಲೇ ಒಂದಿಷ್ಟು ತಯಾರಿ ಮಾಡಿಕೊಳ್ಳುತ್ತಲಿದೆ. ದೇಸಿಯ ಜೇನು ತಳಿಗಳಲ್ಲಿ ವೈವಿಧ್ಯತೆಯಿದ್ದು, ಹೆಜ್ಜೇನು, ಕೋಲು ಜೇನು, ತುಡುವಿ ಜೇನು, ಮುಜೆಂಟಿ ಜೇನು ತಳಿಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ವಿದೇಶಿ ತಳಿ ಎಪಿಸ್‌ ಮೆಲ್ಲಿಪೆರಾವನ್ನು ವ್ಯಾಪಕವಾಗಿ ಜೇನು ಸಾಕಾಣಿಕೆಯಲ್ಲಿ ಬಳಲಾಗುತ್ತಿದೆ. ಜೇನು ಸಾಕಾಣಿಕೆ ವಿಧಾನ, ಅದರ ಲಾಭಗಳು ಸೇರಿದಂತೆ ವಿವಿಧ ಮಾಹಿತಿಗಳು ಮೇಳದಲ್ಲಿ ಲಭ್ಯವಾಗಲಿದೆ.

ಏನಿದು ಜೇನು ಮೇಳ: ಜಿಲ್ಲೆಯಲ್ಲಿ ಜೇನು ಕೃಷಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತರು-ಸಾರ್ವಜನಿಕರಿಗೆ ಜಾಗೃತಿ ಮಾಡಿಸಲು ಮೇಳದ ಅವಶ್ಯಕತೆ ಅರಿತ ತೋಟಗಾರಿಕೆ ಇಲಾಖೆ ಇಂತಹದೊಂದು ಮೇಳ ಆಯೋಜನೆಯತ್ತ ಹೆಜ್ಜೆ ಹಾಕಿದೆ. ಜೇನು ತುಪ್ಪದ ಉತ್ಪಾದನೆಯ ಹೆಚ್ಚಳ ಜತೆ ಅದರ ಉಪ ಉತ್ಪನ್ನಗಳ ಉತ್ಪಾದನೆ, ಮಾರಾಟ ಬಗ್ಗೆ ಜಾಗೃತಿ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ಉದ್ದೇಶ ಈ ಮೇಳ ಹೊಂದಿದೆ. ಅದಕ್ಕಾಗಿ ಮೂರು ದಿನಗಳ ಕಾಲ ಮೇಳ ಆಯೋಜಿಸಲು ಚಿಂತಿಸಲಾಗಿದ್ದು, ಮಾವು ಮೇಳದಂತೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲೇ ಮಳಿಗೆಗಳನ್ನು ನಿರ್ಮಿಸಿ ಆ ಮೂಲಕ ಜೇನು ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ನೀಡಲು ಯೋಚಿಸಲಾಗಿದೆ.

ಜೇನು ಉಪ ಉತ್ಪನ್ನಗಳ ಪ್ರದರ್ಶನ: ಜೇನು ಕೃಷಿ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಮೀಸಲಿರುವ ಐದು ಕೋಟಿ ಅನುದಾನದಲ್ಲಿ ಧಾರವಾಡ ಜಿಲ್ಲೆಗಾಗಿ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಹೀಗಾಗಿ ಜೇನು ಕೃಷಿ ತರಬೇತಿ, ಜೇನು ಕುಟುಂಬ, ಪೆಟ್ಟಿಗೆ ಸಹಾಯಧನ ರೂಪದಲ್ಲಿ ಆಸಕ್ತ ರೈತರಿಗೆ ವಿತರಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ಮೇಳವನ್ನು ಬಳಸಿಕೊಳ್ಳಲು ಮುಂದಾಗಿದೆ. ಇಷ್ಟೆ ಅಲ್ಲ ಜೇನಿನ ಉಪ ಉತ್ಪನ್ನಗಳಾದ ಪರಾಗ, ರಾಜಶಾಯಿ ರಸ, ಜೇನು ಮೇಣ ಸೇರಿದಂತೆ ಇತರೆ ಉತ್ಪನ್ನಗಳ ಬಗ್ಗೆ ಪ್ರದರ್ಶನ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಜೇನು ಕೃಷಿ ರೈತರು ಹಾಗೂ ಜೇನು ತುಪ್ಪ ತಯಾರಿಕಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಒಟ್ಟಿನಲ್ಲಿ ಜೇನು ಕೃಷಿ ಜತೆಗೆ ರುಚಿಗಟ್ಟಾದ ಜೇನು ತುಪ್ಪ ಸೇರಿದಂತೆ ಅದರ ಇನ್ನಿತರ ಉಪಉತ್ಪನ್ನಗಳು ಸಹ ಮೇಳದಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲು ತಯಾರಿ ನಡೆದಿದೆ.

ಜಿಲ್ಲೆಯ ಅಳ್ನಾವರ, ನವಲೂರ, ಮಂಡಿಹಾಳ, ಕುಂದಗೋಳ ಸೇರಿದಂತೆ ಒಟ್ಟು 50 ಜನ ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ಅವರಿಂದ ವರ್ಷಕ್ಕೆ 2 ರಿಂದ 4 ಕೆ.ಜಿ. ಜೇನು ತುಪ್ಪ ಉತ್ಪಾದನೆ ಆಗುತ್ತಿದೆ. ಆ ಪೈಕಿ ಅದು ಅವರವರ ಮನೆಗಾಗಿ ಬಳಕೆ ಆಗುತ್ತಿದ್ದರೆ ಕೆಲವೊಂದಿಷ್ಟು ಮಾರಾಟ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜೇನು ಕೃಷಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮೇಳ ಸಹಕಾರಿ ಆಗಲಿದ್ದು, ಈ ಮೇಳ ಯಶಸ್ಸು ಕಂಡರೆ ಪ್ರತಿ ವರ್ಷವೂ ಮಾಡುವ ಚಿಂತನೆ ತೋಟಗಾರಿಕೆ ಇಲಾಖೆಗೆ ಇದೆ.

• ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.