ಇಂಡಿಗೋ ಏರ್‌ಬಸ್‌ ಸ್ಥಗಿತ?


Team Udayavani, Oct 27, 2019, 10:33 AM IST

huballi-tdy-1

ಹುಬ್ಬಳ್ಳಿ: ನಗರದಿಂದ ಬೆಂಗಳೂರು ಹಾಗೂ ಚೆನ್ನೈಗೆ ವಿಮಾನಯಾನಿಗಳ ಸಂಖ್ಯೆ ಕ್ಷೀಣಿಸಿದ ಕಾರಣ ಇಂಡಿಗೋ ಕಂಪೆನಿ ತನ್ನ ಏರ್‌ಬಸ್‌ ವಿಮಾನ ಬದಲಾಗಿ ಎಟಿಆರ್‌ ವಿಮಾನ ಹಾರಾಟಕ್ಕೆ ಮುಂದಾಗಿದೆ.

ಇಂಡಿಗೋ ಕಂಪೆನಿ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಚೆನ್ನೈಗೆ 180 ಆಸನಗಳ ಸಾಮರ್ಥ್ಯದ ಎ 320 ಏರ್‌ಬಸ್‌ ವಿಮಾನ ಹಾರಾಟ ನಡೆಸುತ್ತಿತ್ತು. ಆದರೆ ಈ ಎರಡು ನಗರಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದರಿಂದ ನಷ್ಟ ಆಗುತ್ತಿದೆ. ಇದನ್ನು ಸರಿದೂಗಿಸುವ ಸಲುವಾಗಿ ಅ.27ರಿಂದ ಈ ಎರಡು ನಗರಗಳಿಗೆ 74 ಆಸನಗಳ ಸಾಮರ್ಥ್ಯದ ಎಟಿಆರ್‌ ವಿಮಾನಗಳನ್ನು ಸಮಯ ಬದಲಾವಣೆಯೊಂದಿಗೆ ಹಾರಾಟ ನಡೆಸಲು ಮುಂದಾಗಿದೆ. ಆದರೆ ಅಹ್ಮದಾಬಾದ್‌ಗೆ ಎ320 ಏರ್‌ಬಸ್‌ ವಿಮಾನಯಾನ ಮುಂದುವರಿಸಿದೆ.

ಜೊತೆಗೆ ಗೋವಾ ಹೊರತುಪಡಿಸಿ ಕೊಚ್ಚಿನ್‌, ಕಣ್ಣೂರ ವಿಮಾನಗಳ ಹಾರಾಟದ ಸಮಯ ಬದಲಾವಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಇಂಡಿಗೋ ಎಟಿಆರ್‌ ವಿಮಾನ ಪ್ರತಿದಿನ ಕೊಚ್ಚಿನ್‌-ಹುಬ್ಬಳ್ಳಿ (6ಇ 7965) ನಡುವೆ ಕೊಚ್ಚಿನ್‌ದಿಂದ ಬೆಳಗ್ಗೆ 7:00ಗಂಟೆಗೆ ಹೊರಟು 8:50ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (6ಇ 7161) ವಿಮಾನ ಬೆಳಗ್ಗೆ 9:20ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10:40ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ (6ಇ 7162) ವಿಮಾನ ಬೆಳಗ್ಗೆ 11:30ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12:55 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಚೆನ್ನೈ (6ಇ 7964) ವಿಮಾನ ಮಧ್ಯಾಹ್ನ 1:15ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:10ಗಂಟೆಗೆ ಚೆನ್ನೈ ತಲುಪಲಿದೆ.

ಚೆನ್ನೈ-ಹುಬ್ಬಳ್ಳಿ (6ಇ 7995) ವಿಮಾನ ಮಧ್ಯಾಹ್ನ 3:30 ಗಂಟೆಗೆ ಚೆನ್ನೆçನಿಂದ ಹೊರಟು ಸಂಜೆ 5:25ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7995) ವಿಮಾನವು ಸಂಜೆ 5:45 ಗಂಟೆಗೆ ಹುಬ್ಬಳ್ಳಿಯಿಂ ಹೊರಟು 6:30 ಗಂಟೆಗೆ ಗೋವಾ ತಲುಪಲಿದೆ. ಗೋವಾ-ಹುಬ್ಬಳ್ಳಿ (6ಇ 7996) ವಿಮಾನ ಸಂಜೆ 6:55 ಗಂಟೆಗೆ ಗೋವಾದಿಂದ ಹೊರಟು 7:50 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕೊಚ್ಚಿನ್‌ (6ಇ 7996) ವಿಮಾನ ರಾತ್ರಿ 8:10 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:55 ಗಂಟೆಗೆ ಕೊಚ್ಚಿನ್‌ ತಲುಪಲಿದೆ. ಕಣ್ಣೂರ-ಹುಬ್ಬಳ್ಳಿ (6ಇ 7979) ವಿಮಾನವು ಸಂಜೆ 6:10ಗಂಟೆಗೆ ಕಣ್ಣೂರನಿಂದ ಹೊರಟು 7:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕಣ್ಣೂರ (6ಇ 7981) ವಿಮಾನವು ಸಂಜೆ 7:50 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9:05 ಗಂಟೆಗೆ ಕಣ್ಣೂರ ತಲುಪಲಿದೆ.

ಅದೇರೀತಿ ರವಿವಾರ ಹೊರತು ಪಡಿಸಿ ಅಹ್ಮದಾಬಾದ್‌-ಹುಬ್ಬಳ್ಳಿ (6ಇ 5993) ಎ320 ಏರ್‌ಬಸ್‌ ವಿಮಾನ ಮಧ್ಯಾಹ್ನ 12:55 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು 2:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಅಹ್ಮದಾಬಾದ್‌ (6ಇ 5994) ವಿಮಾನ ಮಧ್ಯಾಹ್ನ 3:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಸಂಜೆ 4:35 ಗಂಟೆಗೆ

ಅಹ್ಮದಾಬಾದ್‌ ತಲುಪಲಿದೆ. ಪ್ರತಿ ರವಿವಾರ ಅಹ್ಮದಾಬಾದ್‌-ಹುಬ್ಬಳ್ಳಿ (6ಇ 5993) ಎ320 ಏರ್‌ಬಸ್‌ ವಿಮಾನ ಸಂಜೆ 5:05 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು 6:45 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

ಹುಬ್ಬಳ್ಳಿ-ಅಹ್ಮದಾಬಾದ್‌ (6ಇ 5994) ವಿಮಾನ ಸಂಜೆ 7:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8:50ಗಂಟೆಗೆ ಅಹ್ಮದಾಬಾದ್‌ ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಎ320 ಏರ್‌ ಬಸ್‌ (6ಇ 661) ವಿಮಾನ ಬೆಳಗ್ಗೆ 8:15ಗಂಟೆಗೆ ಬೆಂಗಳೂರಿನಿಂದ ಹೊರಟು 9:15ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತಿತ್ತು. ಇನ್ಮುಂದೆ ಅ.27ರಿಂದ ಎಟಿಆರ್‌ ವಿಮಾನ ಬೆಂಗಳೂರಿನಿಂದ ಬೆಳಗ್ಗೆ 11:30ಗಂಟೆಗೆ ಹೊರಟು ಮಧ್ಯಾಹ್ನ 12:55ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಜೊತೆಗೆ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ ಗೆ ವಿಮಾನಯಾನಿಗಳು ಬೆಳಗ್ಗೆ 9:45ಗಂಟೆಗೆ ಹೋಗಬಹುದಿತ್ತು. ಇನ್ಮೆಲೆ ಮಧ್ಯಾಹ್ನ 3:00ಗಂಟೆಗೆ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ತೆರಳಬೇಕು.

 

-ಶಿವಶಂಕರ ಕಂಠಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.