ಪಡಿತರ ಬದಲಿಗೆ ಹಣ ವಿತರಣೆ ನಿರ್ಧಾರವಾಗಿಲ್ಲ: ಖಾದರ್
Team Udayavani, Jan 28, 2017, 3:45 AM IST
ಹುಬ್ಬಳ್ಳಿ: ಪಡಿತರ ಬದಲಿಗೆ ಹಣ ವಿತರಣೆ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಇದರ ಸಾಧಕ-ಬಾಧಕ ಚರ್ಚಿಸಿ, ಅಂತಿಮ ಅನುಮತಿ ಪಡೆದ ನಂತರವೇ ಅನುಷ್ಠಾನಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿಯಿಂದ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೆ ತೊಗರಿ, ಹೆಸರು ಬೇಳೆ ಸೇರಿದಂತೆ ಮಾಸಿಕ ಒಂದು ಕೆಜಿ ಪ್ರೋಟಿನ್ಯುಕ್ತ ಆಹಾರ ವಿತರಿಸಲಾಗುವುದು ಎಂದರು.
ಪಾಸ್ಪೋರ್ಟ್ಗಿಂತಲೂ ವೇಗವಾಗಿ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಅತ್ಯಾಧುನಿಕ ಸಾಫ್ಟ್ವೇರ್ ಸಿದ್ಧವಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಗ್ರಾಹಕರಿಗೆ ಪಡಿತರ ಚೀಟಿ ತಲುಪಲಿದೆ. ಎಪಿಎಲ್ ಕಾರ್ಡ್ ವಿತರಣೆ ಆರಂಭವಾಗಿ, 42 ಸಾವಿರ ಕಾರ್ಡ್ ಹಂಚಿಕೆಯಾಗಿದೆ. ಶೀಘ್ರವೇ ಬಿಪಿಎಲ್ ಕಾರ್ಡ್ ಹಂಚಿಕೆ ಆರಂಭವಾಲಿದೆ ಎಂದರು.
ಪಡಿತರ ವಿತರಣೆಗೆ ಯಾವುದೇ ಕೊರತೆ ಇಲ್ಲ. ಶೇ. 90ರಷ್ಟು ಪಡಿತರ ಅಂಗಡಿಗಳಿಂದ ಸಂಗ್ರಹದ (ಕ್ಲೋಸಿಂಗ್ ಸ್ಟಾಕ್) ಲೆಕ್ಕ ಸಿಕ್ಕಿದೆ. ಇನ್ನುಳಿದಂತೆ ಜನವರಿ ವರೆಗೆ ಶೇ. 10ರಷ್ಟು ಸಿಕ್ಕಿಲ್ಲ. ಜ. 29ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
ಇದನ್ನು ಸರಿಪಡಿಸಲು ಡಿಜಿಟಲ್ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಫೆಬ್ರವರಿ 10ರೊಳಗೆ ಎಲ್ಲ ಪಡಿತರ ಆಹಾರಧಾನ್ಯ ಅಂಗಡಿಗಳಿಗೆ ಆಹಾರ ಸರಬರಾಜು ಮಾಡಲಾಗುವುದು. ಪ್ರತಿ ತಿಂಗಳು 1ನೇ ತಾರೀಖೀಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮಾರ್ಚ್ 1ರಿಂದಲೇ ಇದು ಅನ್ವಯವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದ ಈ ಏಳು ಜಿಲ್ಲೆಗಳಲ್ಲಿ ಅ.21ರವರೆಗೆ ಭಾರಿ ಮಳೆ ಸಾಧ್ಯತೆ
By election; ಶಿಗ್ಗಾವಿ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ
Contempt case: ಬಸನಗೌಡ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್
Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು
Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.