ಜಮಖಂಡಿ: ವಿವಿಧೆಡೆ 72ನೇ ಸ್ವಾತಂತ್ರೋತ್ಸವ ಆಚರಣೆ
Team Udayavani, Aug 18, 2018, 4:55 PM IST
ಜಮಖಂಡಿ: ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು 72ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ತ ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಿದರು. ಕುಡಚಿ ರಸ್ತೆಯಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಧ್ವಜಾರೋಹಣ ನೆರವೇರಿಸಿದರು. ತಹಶೀಲ್ದಾರ್ ಪ್ರಶಾಂತ ಚನಗೊಂಡ, ಗ್ರೇಡ್-2 ತಹಶೀಲ್ದಾರರಾದ ಎಸ್.ಎಸ್.ನಾಯ್ಕಲಮಠ, ಎ.ಎಸ್. ಗೊಟ್ಯಾಳ, ಶಿರಸ್ತೆದಾರಾದ ಎನ್.ಜಿ.ಬಿರಡಿ, ಡಿ.ಬಿ.ಭೋವಿ ಕಂದಾಯ ನಿರೀಕ್ಷಕ ಬಸವರಾಜ ಸಿಂಧೂರ ಸಹಿತ ಹಲವರು ಇದ್ದರು.
ನ್ಯಾಯಾಲಯ ಆವರಣದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾ ಧೀಶೆ ಎ.ಕೆ.ನವೀನ ಕುಮಾರಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಾಧಿಧೀಶರಾದ ಸಿ.ಎಸ್. ಜಿತೇಂದ್ರನಾಥ, ಸರಸ್ವತಿದೇವಿ, ಬಿ.ಆರ್. ಮುತಾಲಿಕದೇಸಾಯಿ, ರವೀಂದ್ರಕುಮಾರ ಕಟ್ಟಿಮನಿ, ವಕೀಲರಾದ ಎಸ್.ಆರ್. ಕಾಡಗಿ, ಎನ್.ಎಸ್.ದೇವರವರ, ಸಿ.ಆರ್.ಸುತಾರ, ಎ.ಪಿ.ಕುಲಕರ್ಣಿ, ಬಿ.ವಿ.ತುಳಸಿಗೇರಿ ಸಹಿತ ಹಲವರು ಇದ್ದರು.
ತಾಲೂಕು ಆರೋಗ್ಯ ಕಚೇರಿಯಲ್ಲಿ ತಾಲೂಕು ವೈದ್ಯಾಧಿ ಕಾರಿ ಡಾ. ಗೈಬುಸಾಬ ಗಲಗಲಿ ಧ್ವಜಾರೋಹಣ ನೆರವೇರಿಸಿದರು. ಎಂ.ಎಚ್.ಕಡ್ಲಿಮಟ್ಟಿ, ಪರಮಗೊಂಡ, ವಸ್ತ್ರದ, ಜಯಶ್ರೀ, ನರಸಿಂಹ ಗಲಗಲಿ, ರವಿ ಪಾಟೀಲ, ನಾಗರಾಜ ಹೊಸಮನಿ, ಹುಣಸಿಗಿಡದ, ಎಲ್.ಎಚ್.ಹರಿಜನ, ಸಲ್ಮಾ ನದಾಫ್ ಸಹಿತ ಹಲವರು ಇದ್ದರು.
ಅರಣ್ಯ ಇಲಾಖೆ ಆವರಣದಲ್ಲಿ ತಾಲೂಕು ಎಸಿಎಫ್ ಅ ಧಿಕಾರಿ ಎಸ್.ಎಸ್. ಮಾದರ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಬಬಲಾದಿ, ಎಸ್.ಬಿ. ಗೌಡರ, ಆರ್.ಜಿ.ಮೇತ್ರಿ, ವಿ.ಎಸ್.ಕುಬಕಡ್ಡಿ, ಬಿ.ಎಂ.ಬೆಳಕಿಂಡಿ, ಎಂ.ಬಿ.ಚಂಡಕಿ ಇದ್ದರು. ಪೊಲೀಸ್ ಠಾಣೆ ಆವರಣದಲ್ಲಿ ಡಿವೈಎಸ್ಪಿ ರಾಮನಗೌಡ ಹಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಅಶೋಕ ಸದಲಗಿ, ಪಿಎಸ್ಐ ದಿನೇಶ ಜವಳಕರ, ಎಎಸ್ಐ ಎಸ್.ಡಿ.ಸಂಗಾಪುರ ಸಹಿತ ಆರಕ್ಷಕರು ಇದ್ದರು.
ಸಾಮಾಜಿಕ ಅರಣ್ಯ ಇಲಾಖೆ ಆವರಣದಲ್ಲಿ ಸಹಾಯಕ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಚೌಗಲಾ ಧ್ವಜಾರೋಹಣ ನೆರವೇರಿಸಿದರು. ಎಸ್.ಜಿ.ಸಂಗಾಲಕರ, ಎಸ್.ಐ.ನಿಂಬಾಳೆ, ಎಂ.ಎನ್.ಜತರಗರ, ಎಸ್.ಎಸ್. ಪೂಜಾರ, ಎಸ್.ಎ.ಮಡ್ಡಿ, ಕೆ.ಆರ್.ಪಾಟೀಲ ಇದ್ದರು.
ಅರ್ಬನ್ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಅಧ್ಯಕ್ಷ ಫಕೀರಸಾಬ ಬಾಗವಾನ ಧ್ವಜಾರೋಹಣ ನೆರವೇರಿಸಿದರು. ಎ.ಆರ್. ಶಿಂಧೆ, ಜಿ.ಎಸ್.ನ್ಯಾಮಗೌಡ, ಎ.ಎಂ. ಶಹಾ, ನಂದೆಪ್ಪ ದಡ್ಡಿಮನಿ, ಕಾಡು ಮಾಳಿ, ವಿ.ಐ.ಕಂಬಿ, ರುದ್ರಯ್ಯ ಕರಡಿ, ಮಾಮೂನ ಪಾರತನಳ್ಳಿ, ವೈಶಾಲಿ ಗೊಂದಿ, ಎಂ.ಬಿ. ಕಲ್ಯಾಣಶೆಟ್ಟಿ, ಸಂತೋಶ ಹಲ್ಯಾಳ ಸಹಿತ ಹಲವರು ಇದ್ದರು.
ನಗರಸಭೆಯಲ್ಲಿ ಪೌರಾಯುಕ್ತ ಗೋಪಾ ಕಾಸೆ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಚೇರಿಯಲ್ಲಿ ಎ.ಜಿ. ಪಾಟೀಲ, ಎಪಿಎಂಸಿ ಕಚೇರಿಯಲ್ಲಿ ಎಂ.ಐ.ಸಾಲಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯಲ್ಲಿ ಬಿಇಒ ಪ್ರಮೀಳಾ ದೇಶಪಾಂಡೆ ಸಹಿತ ವಿವಿಧ ತಾಲೂಕು ಮಟ್ಟದ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು
Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ
Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.