6ರಿಂದ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ
Team Udayavani, Jan 4, 2017, 12:50 PM IST
ಹುಬ್ಬಳ್ಳಿ: ಕಲಾ ಧರೋಹರದ ವತಿಯಿಂದ 9ನೇ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ ಜ.6ರಿಂದ 8ರವರೆಗೆ ನ್ಯೂ ಕಾಟನ್ ಮಾರ್ಕೆಟ್ನ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಕಲಾ ಧರೋಹರದ ಸಹ ಉಪಾಧ್ಯಕ್ಷ ವಿವೇಕ ಪವಾರ ಮಾತನಾಡಿ, ಜ.6ರಂದು ಸಂಜೆ 5:15ಕ್ಕೆ ಅಂತಾರಾಷ್ಟ್ರೀಯ ಕೊಳಲು ಕಲಾವಿದ ಪಂ| ರಾಕೇಶ ಚೌರಾಸಿಯಾ ಅವರಿಂದ ಕೊಳಲು ವಾದನವಿದೆ.
ನಂತರ ಮುಂಬೈನ ಗಾಯಕಿ ವಿದುಷಿ ದೇವಕಿ ಪಂಡಿತ ಅವರಿಂದ ಶಾಸ್ತ್ರೀಯ ಗಾಯನ ನಡೆಯುವುದು ಎಂದರು. ಜ.7ರಂದು ಸಂಜೆ 5:15ಕ್ಕೆ ಖ್ಯಾತ ತಬಲಾ ವಾದಕ ಪುಣೆಯ ಪಂ| ರಾಮದಾಸ ಪಸಪುಳೆ ಅವರಿಂದ ತಬಲಾ ಸೋಲೊ ನಡೆಯಲಿದ್ದು, ನಂತರ ಕೋಲ್ಕತ್ತದ ಅಭಿಸೇಕ್ ಲಹರಿ ಅವರಿಂದ ಸರೋದ ವಾದನ ನಡೆಯುವುದು.
ಜ.8ರಂದು ಬೆಳಗ್ಗೆ 9ಕ್ಕೆ ಪ್ರಸಿದ್ಧ ಗಾಯಕ, ಭೀಮಸೇನ ಜೋಶಿ ಅವರ ಶಿಷ್ಯ ಪುಣೆಯ ಪಂ| ಆನಂದ ಭಾಟೆ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದೆ. ಸಂಜೆ 5:15ಕ್ಕೆ ಕೀ ಬೋರ್ಡ್ ಮಾತ್ರಿಕ ಎಂದೇ ಖ್ಯಾತಿ ಪಡೆದಿರುವ ಮುಂಬೈನ ಅಭಿಜೀತ್ ಪೋಹಣಕ ಕೀಬೋರ್ಡ್ ಮೇಲೆ ಶಾಸ್ತ್ರೀಯ ಸಂಗೀತ ನುಡಿಸುವರು.
ಇದೇ ಸಂದರ್ಭದಲ್ಲಿ ಅವರಿಗೆ ಪ್ರಸಕ್ತ ಗಂಗೂಬಾಯಿ ಹಾನಗಲ್ಲ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರ 1 ಲಕ್ಷ ರೂ. ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ನಂತರ ಪುರಸ್ಕೃತ ಪಂಡಿತ ಅಜಯ ಪೋಹಣಕರ ಅವರಿಂದ ಶಾಸ್ತ್ರೀಯ ಗಾಯನ ಜರುಗಲಿದೆ ಎಂದರು.
ಸಂಗೀತ ಮಹೋತ್ಸವಕ್ಕೆ ಸಹ ಕಲಾವಿದರಾಗಿ ಪಂ| ರಾಮದಾಸ ಪಸಪುಳೆ, ಪಂ| ರವೀಂದ್ರ ಯಾವಗಲ್, ಪಂ| ವಿಶ್ವನಾಥ ನಾಕೋಡ, ಶ್ರೀಧರ ಮಾಂಡ್ರೆ (ತಬಲಾ), ಪಂ| ವ್ಯಾಸಮೂರ್ತಿ ಕಟ್ಟಿ, ಅಭಿಷೇಕ ಶಿಂಕರ, ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ) ಸಾಥ್ ನೀಡುವರು.
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಗೀತ ಮಹೋತ್ಸವದ ಪ್ರಾಯೋಜಕತ್ವ ವಹಿಸಲಿದೆ ಎಂದು ತಿಳಿಸಿದರು. ಸಂಗೀತ ಮಹೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ದೇಶಪಾಂಡೆ ನಗರದ ಡಾ| ಗಂಗೂಬಾಯಿ ಹಾನಗಲ್ಲ ಅವರ ನಿವಾಸದಲ್ಲಿ ಪ್ರವೇಶ ಪಾಸ್ಗಳನ್ನು ನೀಡಲಾಗುತ್ತಿದೆ ಎಂದರು.
ಕಲಾ ಧರೋಹರ ಕಳೆದ 9 ವರ್ಷಗಳಿಂದ ಸಂಗೀತ ಮಹೋತ್ಸವ ಆಯೋಜಿಸುತ್ತಿದೆ. ಮನೆ-ಮನೆಗಳಲ್ಲಿ ಶಾಸ್ತ್ರೀಯ ಸಂಗೀತದ ಬೈಠಕ್ಗಳನ್ನು ಆಯೋಜಿಸುವ ಮೂಲಕ ಸಂಪ್ರದಾಯಕ್ಕೆ ಮರುಜೀವ ತುಂಬಲಾಗುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದಲ್ಲದೇ ಶಾಸ್ತ್ರೀಯ ಸಂಗೀತ ತರಬೇತಿ ನೀಡಲಾಗುತ್ತಿದೆ. ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ವಿವರಿಸಿದರು. ದಿನೇಶ ಹಾನಗಲ್ಲ, ಸುಪ್ರಿಯಾ ಆಚಾರ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
MUDA Case: ಸಿದ್ದರಾಮಯ್ಯ ಅಧಿಕಾರದಲ್ಲಿದ್ರೆ ತನಿಖೆ ಮೇಲೆ ಪ್ರಭಾವ ಖಚಿತ: ಶಾಸಕ ಯತ್ನಾಳ್
Hubli; ಕೋರ್ಟ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರಮೋದ ಮುತಾಲಿಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.