![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 9, 2020, 9:41 AM IST
ಕಲಘಟಗಿ: ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಸೋಯಾಬಿನ್ ಬೀಜವು ಬಹತೇಕ ಮೊಳಕೆಯೊಡೆಯದೆ ಕಂಗಾಲಾಗಿರುವ ರೈತರ ನೆರವಿಗೆ ಅಧಿಕಾರಿ ವರ್ಗ ಹಾಗೂ ಸರಕಾರ ತಕ್ಷಣ ಮುಂದಾಗಬೇಕೆಂದು ಶಾಸಕ ಸಿ.ಎಂ.ನಿಂಬಣ್ಣವರ ಒತ್ತಾಯಿಸಿದರು.
ಸೋಮವಾರ ತಾಲೂಕಿನ ಉಗ್ಗಿನಕೇರಿ, ಬೇಗೂರ ಮುಂತಾದ ಗ್ರಾಮಗಳಲ್ಲಿನ ಸೋಯಾ ಬಿತ್ತಿದ ಜಮೀನುಗಳಿಗೆ ತೆರಳಿ ವೀಕ್ಷಿಸಿ, ರೈತರ ನೆರವಿಗೆ ಧಾವಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ಒಂದು ವಾರದ ಹಿಂದೆ ಬಿತ್ತನೆ ಮಾಡಿದ ಬೀಜಗಳು ಕಡಿಮೆ ಪ್ರಮಾಣದಲ್ಲಿ ಮೊಳಕೆ ಒಡೆದಿದ್ದು, ಬಹುತೇಕವಾಗಿ ಅಲ್ಲಿಯೇ ಕೊಳೆತ ಸ್ಥಿತಿಯಲ್ಲಿವೆ ಎಂದು ಬೇಗೂರ ಹಾಗೂ ಉಗ್ಗಿನಕೇರಿ ಗ್ರಾಮದ ರೈತರು ಆರೋಪಿಸಿದರು.ಸರಕಾರ ತಮ್ಮೆಲ್ಲರ ನೋವಿಗೆ ತಕ್ಷಣ ಸ್ಪಂದಿಸಲಿದೆ ಎಂದು ಸಂತೈಸಿದರು. ಅಧಿಕಾರಿಗಳು ಮರು ಬಿತ್ತನೆಗೆ ಅವಕಾಶ ಕಲ್ಪಿಸುವುದರೊಂದಿಗೆ ಉಂಟಾದ ಹಾನಿಯನ್ನು ಸರಕಾರದ ಮುಖೇನ ಭರಣ ಮಾಡಲು ಮುಂದಾಗಬೇಕೆಂದು ಸೂಚಿಸಿದರು.
ಈ ಕುರಿತು ಹಿರಿಯ ಅಧಿಕಾರಿಗಳ ಹಾಗೂ ವಿಜ್ಞಾನಿಗಳ ಗಮನಕ್ಕೆ ತರಲಾಗಿದ್ದು, ಸರಕಾರದ ನಿರ್ದೇಶನದನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಆರ್.ಸ್ಮಿತಾ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎನ್. ಎಫ್.ಕಟ್ಟೆಗೌಡರ ತಿಳಿಸಿದರು. ಸಿಪಿಐ ವಿಜಯ ಬಿರಾದಾರ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ಜಿಪಂ ಮಾಜಿ ಸದಸ್ಯ ಐ.ಸಿ.ಗೋಕುಲ, ರೈತ ಪ್ರಮುಖರಾದ ಸಿ.ಬಿ.ಹೊನ್ನಿಹಳ್ಳಿ, ನಿಜುಗುಣಿ ಕೆಲಗೇರಿ, ಪರಶುರಾಮ ರಜಪೂತ, ಅಶೋಕ ಗೋಕುಲ, ಉಳವಪ್ಪ ಬಳಿಗೇರ, ವಿ.ಬಿ.ಶಿವನಗೌಡರ, ಪ್ರಭುಲಿಂಗ ಕಂಪ್ಲಿ, ಶಿವಲಿಂಗ ಮೂಗಣ್ಣವರ, ಸಣ್ಣಕಲ್ಲಪ್ಪ ಕುಟ್ರಿ, ರವಿ ಅಲ್ಲಾಪೂರ, ಶಿವರುದ್ರ ಗೋಕುಲ, ಶಿವಪ್ಪ ಮೇಟಿ, ವಿರುಪಾಕ್ಷಿ ಭೂಪಾಳಿ, ಹನುಮಂತ ಹರಿಜನ, ಹೇಮಂತ ಕೆಲಗೇರಿ, ಯಲ್ಲಪ್ಪ ಸಂಶಿ ಇನ್ನಿತರರಿದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.