ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್ಫಾರಂ
Team Udayavani, Jun 5, 2020, 9:50 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹುಬ್ಬಳ್ಳಿ: ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್ಫಾರಂ ಎಲ್ಲಿದೆ ಎಂದು ಕೇಳಿದರೆ ಯಾವುದೋ ಬೇರೆ ದೇಶದಲ್ಲಿ? ರಾಜ್ಯದಲ್ಲಿ ಇರಬಹುದಾ ಎಂದು ಆಲೋಚಿಸುವ ಪ್ರಮೇಯವೇ ಇಲ್ಲ!
ಕಾರಣ ಅದಿನ್ನು ಬೇರೆಲ್ಲೋ ಅಲ್ಲ, ನಮ್ಮ ಹುಬ್ಬಳ್ಳಿಯಲ್ಲೇ ಇರಲಿದೆ. ಸದ್ಯ ಇದರ ಕುರಿತ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.
1400 ಮೀ. ಉದ್ದ ಮತ್ತು 10 ಮೀ. ಅಗಲದ ಈ ಪ್ಲ್ಯಾಟ್ಫಾರಂ ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ಲ್ಯಾಟ್ಫಾರಂ ನಂ.1 ಆಗಿದೆ. ಈಗಿನ ಪ್ಲ್ಯಾಟ್ಫಾರಂ 550 ಮೀ. ಉದ್ದವಿದ್ದು ಇದನ್ನು 1400 ಮೀ.ಗೆ ವಿಸ್ತರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೇ (SWR) ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಪ್ಲ್ಯಾಟ್ಫಾರಂ ವಿಸ್ತರಣೆ ಸೇರಿದಂತೆ, ಮೂರನೇ ಪ್ರವೇಶ ದ್ವಾರ, ಎಲೆಕ್ಟ್ರಿಕಲ್ ಕಾಮಗಾರಿ, ಸಿಗ್ನಲಿಂಗ್ ಕಟ್ಟಡ ಇತ್ಯಾದಿ ಕಾಮಗಾರಿಗಳಿಗೆ 90 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಹುಬ್ಬಳ್ಳಿ – ಬೆಂಗಳೂರು ಹಳಿ ದ್ವಿಪಥ ಕಾಮಗಾರಿಗೆ ಪೂರಕವಾಗಿ ಪ್ಲ್ಯಾಟ್ಫಾರಂ ವಿಸ್ತರಣೆ ನಡೆಯುತ್ತಿದೆ.
ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್ಫಾರಂ ಹೊಂದಿದ ದೇಶದಲ್ಲಿ ಭಾರತವೇ ಮುಂದಿದೆ. ಈವರೆಗೆ ಗೋರಖ್ಪುರ ನಿಲ್ದಾಣದಲ್ಲಿ ಪ್ಲ್ಯಾಟ್ಫಾರಂ ಅತಿ ಉದ್ದದ ಪ್ಲ್ಯಾಟ್ಫಾರಂ ಆಗಿತ್ತು. ಇದು 1366 ಮೀ. ಉದ್ದವಿದೆ. ಎರಡನೆಯ ಸ್ಥಾನದಲ್ಲಿ ಕೊಲ್ಲಂ ಜಂಕ್ಷನ್ ನಿಲ್ದಾಣದ ಪ್ಲ್ಯಾಟ್ಫಾರಂ ಇದ್ದು, ಇದು 1180 ಮೀ. ಉದ್ದವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ
ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್
Alnavar: ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು
Successful Operation: ಅಪಘಾತದಲ್ಲಿ ಎದೆಗೆ ಹೊಕ್ಕ ಪೈಪ್-ಯುವಕನಿಗೆ ಮರುಜನ್ಮ
Minister V. Somanna: ಭಾರತೀಯ ರೈಲ್ವೇ ಜತೆ ಕೊಂಕಣ ರೈಲ್ವೇ ಶೀಘ್ರ ವಿಲೀನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.