ಅಂತೂ ಕೆಂಪಗೆರಿ ಜಲಾಶಯಕ್ಕೆ ಹರಿದು ಬಂದಳು ಗಂಗ


Team Udayavani, Aug 10, 2018, 5:29 PM IST

10-agust-21.jpg

ನರಗುಂದ: ಕಳೆದ ಒಂದೂವರೆ ತಿಂಗಳಿಂದ ತನ್ನ ಒಡಲು ಬರಿದಾಗಿಸಿಕೊಂಡು ಪಟ್ಟಣದ ಜನತೆಗೆ ಕುಡಿವ ನೀರಿನ ಹಾಹಾಕಾರ ಸೃಷ್ಟಿಸಿದ್ದ ಪಟ್ಟಣದ ಕೆಂಪಗೆರಿ ಜಲಾಶಯ ಒಡಲಾಳಕ್ಕೆ ಅಂತೂ ಗಂಗಾಮಾತೆ (ನೀರು) ಬಂದು ಸೇರುತ್ತಿದೆ. ಮಲಪ್ರಭಾ ಕಾಲುವೆಗೆ ನೀರು ಹರಿಸಲಾಗಿದ್ದು, ಪಟ್ಟಣದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲಾಡಳಿತಕ್ಕೆ ಪುರಸಭೆ ಮೂಲಕ ತೀವ್ರ ಒತ್ತಡ ಮಧ್ಯೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಕುಡಿವ ನೀರಿಗಾಗಿ ಮಲಪ್ರಭಾ ನರಗುಂದ ಶಾಖಾ ಕಾಲುವೆಗೆ ನೀರು ಹರಿಸಲು ಅನುಮತಿ ನೀಡಿದ್ದರಿಂದ ಮಂಗಳವಾರ ಕಾಲುವೆಗೆ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆಗೆ ಕಾಲುವೆ ನೀರು ಕೆಂಪಗೆರಿ ಒಡಲು ಸೇರಿಕೊಳ್ಳುತ್ತಿದೆ. 

ತಪ್ಪಿದ ಹಾಹಾಕಾರ: ಇಡೀ ಪಟ್ಟಣಕ್ಕೆ ಕುಡಿವ ನೀರಿನ ಏಕೈಕ ಮೂಲ ಕೆಂಪಗೆರಿ ಜಲಾಶಯ. ಇದು ಒಂದೂವರೆ ತಿಂಗಳ ಹಿಂದೆಯೇ ಖಾಲಿಯಾಗಿತ್ತು. ಪರಿಣಾಮ ಪುರಸಭೆ ವ್ಯಾಪ್ತಿಯ ಒಂದಷ್ಟು ಕೊಳವೆ ಬಾವಿ ಮತ್ತು ಜಲಾಶಯದಲ್ಲಿ ಅಳಿದುಳಿದ ನೀರನ್ನೇ ಪಂಪ್‌ ಸೆಟ್‌ನಿಂದ ಎತ್ತಿ ಕುಡಿಯಲು ಪೂರೈಸಲಾಗಿತ್ತು.

ಹೀಗಾಗಿ ರಾಡಿ ನೀರು, ಕೊಳವೆ ಬಾವಿ ಸವಳು ನೀರು ಕುಡಿವ ದುರ್ಗತಿಗೆ ಜನತೆ ರೋಷಿ ಹೋಗಿದ್ದರು. ಪುರಸಭೆ ತಹಶೀಲ್ದಾರ್‌ ಮೂಲಕ 3 ಬಾರಿ ಜಿಲ್ಲಾ ಧಿಕಾರಿಗೆ ಕಾಲುವೆ ನೀರು ಹರಿಸುವಂತೆ ಪತ್ರ ರವಾನಿಸಿತ್ತು. ಈ ಮಧ್ಯೆ ಶಾಸಕ ಸಿ.ಸಿ. ಪಾಟೀಲ ಕೂಡ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಿ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಒತ್ತಡ ಹೇರಿದ್ದರು.

ಪ್ರತಿ 15 ದಿನಕ್ಕೊಮ್ಮೆ ಕುಡಿವ ನೀರು ಪಡೆಯುತ್ತಿದ್ದ ಪಟ್ಟಣದ ಜನತೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಹೇಗೋ ಕೆಂಪಗೆರಿ ಜಲಾಶಯಕ್ಕೆ ಕಾಲುವೆ ನೀರು ಸೇರುತ್ತಿರುವುದು ಜನತೆ ನಿರಾಳವಾಗುವಂತಾಗಿದೆ. ಆರೇಳು ತಿಂಗಳಿಗೆ ಸಾಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗುವ ನಿರೀಕ್ಷೆ ಕಂಡು ಬಂದಿದೆ.

ಅಡ್ಡಗಟ್ಟಿ ನೀರು: ನವಿಲುತೀರ್ಥ ರೇಣುಕಾ ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗಿದ್ದು, ಮಲಪ್ರಭಾ ಕಾಲುವೆಯಿಂದ ಸೋಮಾಪುರ ಕಾಲುವೆ ಮೂಲಕ ಕೆರೆಗೆ ನೀರು ಸೇರುತ್ತಿದೆ. ಹೀಗಾಗಿ ಸೋಮಾಪುರ ಕಾಲುವೆ ಗೇಟ್‌ ಬಳಿ ಮಲಪ್ರಭಾ ಶಾಖಾ ಕಾಲುವೆ ಮಣ್ಣಿನಿಂದ ಅಡ್ಡಗಟ್ಟಿ ನೀರು ತಿರುವಿಕೊಳ್ಳಲಾಗಿದೆ. ಪುರಸಭೆ ಕಾವಲುಗಾರರನ್ನು ನೇಮಿಸಿದೆ.

10 ದಿನ ಲಭ್ಯ: ಕೆಂಪಗೆರಿ ಜಲಾಶಯ ತುಂಬಿಸಲು ಆ.7ರಿಂದ 10 ದಿನ ಅಂದರೆ ಆ.16ರವರೆಗೆ ಕಾಲುವೆಗೆ ದಿನಕ್ಕೆ 300 ಕ್ಯುಸೆಕ್‌ ನೀರು ಬಿಡಲಾಗಿದೆ. ಕಾಲುವೆ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಪುರಸಭೆಯಿಂದ ಮೂರು ಸಿಬ್ಬಂದಿ ತಂಡ ರಚಿಸಲಾಗಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಕಾಲುವೆ ನೀರು ಸಮರ್ಪಕವಾಗಿ ಜಲಾಶಯ ಸೇರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾರಾಯಣ ಪೇಂಡ್ಸೆ ತಿಳಿಸಿದರು.

ಆರು ತಿಂಗಳ ನಿರೀಕ್ಷೆ
ಕೆಂಪಗೆರಿ ಜಲಾಶಯ 19 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾಲುವೆಗೆ ಹರಿಸಿದ ನೀರು ಸಮರ್ಪಕವಾಗಿ 10 ದಿನಗಳು ಜಲಾಶಯ ಸೇರಿದರೆ ಸುಮಾರು 16 ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ಮೇಲಾಗಿ 16 ಅಡಿ ಮಾತ್ರ ಸಂಗ್ರಹಕ್ಕೆ ಅವಕಾಶ ಇದೆ. ಕಾರಣ ಹೆಚ್ಚು ನೀರು ಸಂಗ್ರಹವಾದರೆ ಜಲಾಶಯದಲ್ಲಿ ಸೋರಿಕೆ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ನಿಲುವು.

ರೈತರು ಸಹಕರಿಸಲಿ
ನರಗುಂದ ಪಟ್ಟಣಕ್ಕೆ ಕುಡಿವ ನೀರಿಗಾಗಿ ಕಾಲುವೆಗೆ ನೀರು ಬಿಡಲಾಗಿದೆ. ಕಾಲುವೆ ಮೇಲ್ಭಾಗದ ರೈತರು ಕಾಲುವೆ ನೀರು ಬಳಸಿಕೊಳ್ಳದಂತೆ ಸಹಕರಿಸಬೇಕು.
ನಾರಾಯಣ ಪೇಂಡ್ಸೆ, ಪುರಸಭೆ ಮುಖ್ಯಾಧಿಕಾರಿ

ಸಿದ್ಧಲಿಂಗಯ್ಯ ಮಣ್ಣೂರಮಠ 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.