ಯಾರ ಒಲೈಕೆಗಾಗಿ ನಮ್ಮ ವಿರುದ್ಧ ಎಫ್ಐಆರ್ ಮಾಡಸಿದ್ದೀರಿ ಗೊತ್ತು: ಶಾಸಕ ಮಹೇಶ ಟೆಂಗಿನಕಾಯಿ
Team Udayavani, Jan 7, 2024, 3:24 PM IST
ಹುಬ್ಬಳ್ಳಿ: ಪ್ರತಿಭಟನಾಕಾರರ ಮೇಲೆ ಕಾಂಗ್ರೆಸ್ ನವರು ಕೇಸ್ ಮಾಡಿದ್ದಾರೆ. ಇಂತಹದಕ್ಕೆಲ್ಲ ನಾವು ಹೆದರಲ್ಲ ಎಂದು ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಕುಟುಕಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಎಷ್ಟು ಕೇಸ್ ಹಾಕುತ್ತೀರಿ ಹಾಕಿ ನೋಡೋಣ ಎಂದರು.
ಈ ತರಹದ ಕೇಸ್ ಗಳಿಂದ ಏನನ್ನೂ ಸಾಧಿಸೋಕೆ ಆಗಲ್ಲ. ನಾವು ಯಾವ ವ್ಯಾಪಾರಸ್ಥರಿಗೆ ತೊಂದರೆ ಕೊಟ್ಟಿಲ್ಲ. ಅಂದು ಅಂಗಡಿ ಬಂದ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರ . ಸರ್ಕಾರವೇ ಪೊಲೀಸರ ಮೂಲಕ ಅಂಗಡಿ ಬಂದ್ ಮಾಡಿಸಿದ್ದು. ಹಿಂದೂ-ಮುಸ್ಲಿಂ ಜಗಳವನ್ನೂ ಹಚ್ಚಿಲ್ಲ. ಯಾರ ಒಲೈಕೆಗಾಗಿ ನಮ್ಮ ವಿರುದ್ಧ ಎಫ್ ಐ ಆರ್ ಮಾಡಸಿದ್ದೀರಿ ಗೊತ್ತು. ಹೈಕಮಾಂಡ್ ನಾಯಕರನ್ನು ಖುಷ್ ಮಾಡಲು ಹೀಗೆ ಮಾಡಿದ್ದೀರಿ. ಆರ್. ಅಶೋಕ, ಟೆಂಗಿನಕಾಯಿ, ಬೆಲ್ಲದ ಮೇಲೆ ಕೇಸ್ ಆಗಿದೆ ಎಂದು ಅವರಿಗೆ ಕಳುಹಿಸುತ್ತೀರಿ ಎಂದು ಹರಿಹಾಯ್ದರು.
ರಾಮಮಂದಿರ ಉದ್ಘಾಟನೆ ಹೇಗಾದರೂ ಅಡ್ಡಿ ಮಾಡಲು ಇದೆಲ್ಲ ನಾಟಕ. ಪ್ರತಿಭಟನೆ ನಮ್ಮ ಹಕ್ಕು, ಅದನ್ನು ಮೊಟಕಗೊಳಿಸುವ ಯತ್ನ ಸರ್ಕಾರ ಮಾಡಿದೆ. ಸರ್ಕಾರ ಏನು ಸಾಧಿಸುವುದಕ್ಕೆ ಹೊರಟಿದೆ. ಇದು ಕಾಲಚಕ್ರ. ಇನ್ನು ಆರು ತಿಂಗಳಲ್ಲಿ ಏನು ಆಗುತ್ತೆ ನೋಡಿ. ನೀವು ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ಇದೆ ಎಂದು ಸುಳ್ಳು ಹೇಳಿದ್ದೀರಿ. ನಾವು ನಿಮ್ಮ ಮುಖ್ಯಮಂತ್ರಿ, ಗೃಹ ಮಂತ್ರಿಗಳ ಮೇಲೆ ಚೀಟಿಂಗ್ ಕೇಸ್ ಮಾಡುತ್ತೇವೆ. ನಿಮ್ಮ ಹಿಟ್ಲರ್ ರೂಲ್ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.