Dharwad University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

ರಾಸಾಯನಿಕ ಕೃಷಿಯ ಭಾರ ತಗ್ಗಿಸುವ ಪ್ರಯತ್ನ ಇದಾಗಿದೆ.

Team Udayavani, Aug 6, 2024, 6:10 PM IST

Dharwad  University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

ಉದಯವಾಣಿ ಸಮಾಚಾರ
ಧಾರವಾಡ: ಕ್ವಿಂಟಲ್‌ಗ‌ಟ್ಟಲೇ ರಾಸಾಯನಿಕ ಗೊಬ್ಬರ ಹಾಕಿ, ನೂರಾರು ಲೀಟರ್‌ ಕೀಟನಾಶಕ ಬಳಸಿ ಕೃಷಿ ಮಾಡುವುದು ಈಗ
ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಕೃಷಿ ಕೊನೆಗಾಣಿಸಲು ಧಾರವಾಡ ಕೃಷಿ ವಿವಿ ಜೈವಿಕ ರಸಗೊಬ್ಬರ, ಜೀವಾಣುಗಳು ಮತ್ತು ಕ್ರಿಮಿನಾಶಕಗಳನ್ನು ಸಂಶೋಧಿಸಿದೆ. ಅವುಗಳ ಬಳಕೆಗೂ ಹೊಸ ಪರಿಭಾಷಿಕೆ ಬರೆದಿದೆ.

20 ಕ್ವಿಂಟಲ್‌ ರಸಗೊಬ್ಬರ ಬಳಸುವ ಒಂದು ಬೆಳೆ ಅಥವಾ ಹೊಲಕ್ಕೆ ಕೇವಲ 20 ಕೆ.ಜಿ. ಜೈವಿಕ ಗೊಬ್ಬರ ಬಳಕೆ ಮಾಡಿ ಅಷ್ಟೇ ಇಳುವರಿ ಮತ್ತು ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬೆಳೆಯುವ ಸಂಶೋಧನೆ ವಿವಿಯ ಸಾವಯವ ಕೃಷಿ ವಿಭಾಗ ಸತತ 2017ರಿಂದ ನಡೆಸಿ ಇದೀಗ ಯಶಸ್ವಿಗೊಳಿಸಿದೆ.

ಪೇಟೆಂಟ್‌ಗೂ ಚಿಂತನೆ: ಜೈವಿಕ ದ್ರವ ಮತ್ತು ಜೈವಿಕ ಕಣಗಳನ್ನು ಕೂಡ ಶೋಧಿಸಿ ವಿವಿ ಸೈ ಎನಿಸಿಕೊಂಡಿದೆ. ಅಷ್ಟೇಯಲ್ಲ, ಈ ಎಲ್ಲ ಜೀವಾಣುಗಳನ್ನು ವರ್ಷಗಟ್ಟಲೇ ಕೆಡದಂತೆ ಮತ್ತು ಸುರಕ್ಷಿತವಾಗಿ ಕಾಯ್ದಿಡುವ ತಂತ್ರಜ್ಞಾನಗಳನ್ನು ಸ್ವತಃ
ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದು, ಅವುಗಳ ಪೇಟೆಂಟ್‌ಗೂ ಸಿದ್ಧತೆ ನಡೆಸಿದೆ.

ಕೃಷಿ ವಿವಿ ತನ್ನ ವ್ಯಾಪ್ತಿಯ ಜಿಲ್ಲೆಗಳ ಸುತ್ತಲಿನ ಎಲ್ಲ ಬೆಳೆಗಳಿಗೂ ಕಡಿಮೆ ಖರ್ಚಿನಲ್ಲಿ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಮಾಡುವ ವಿಧಾನಗಳನ್ನು ಶೋಧಿಸಿಟ್ಟಿದೆ. ಮುಂಗಾರು ಬೆಳೆಗಳಾದ ಶೇಂಗಾ, ಸೋಯಾ, ಗೋವಿನಜೋಳ ಹಾಗೂ ಹಿಂಗಾರಿ ಬೆಳೆಗಳಾದ ಕಡಲೆ, ಗೋಧಿ, ಜೋಳ ಬೆಳೆಗಳ ಮೇಲೆ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಯಶಸ್ವಿಯಾಗಿ ಶೇ.100 ಫಲಿತ ಬಂದಿದೆ. ವರ್ಷದಿಂದ ವರ್ಷಕ್ಕೆ ಜೈವಿಕ ಗೊಬ್ಬರ ಉತ್ಪಾದನೆ ಮತ್ತು ರೈತರಿಗೆ ಹಂಚಿಕೆ ಶೇ.500 ಪಟ್ಟು ಹೆಚ್ಚಾಗುತ್ತಿದ್ದು, ಸಾವಯವ ಕೃಷಿಯತ್ತ ರೈತರು ದಾಪುಗಾಲಿಡುವಂತೆ ಮಾಡಿದೆ.

ಒಂದೇ ಪದಾರ್ಥದಲ್ಲಿ 8-11 ಜೀವಾಣು:
ಸಾವಯವ ಕೃಷಿ ವಿಭಾಗ, ಈಗ ಭೂಮಿಯ ಒಳಭಾಗದಲ್ಲಿ ಸಸ್ಯ ಮತ್ತು ಗಿಡಗಳ ಬೇರಿಗೆ ಎಂಟು ವಿಭಿನ್ನ ಜೀವಾಣುಗಳನ್ನು ಒಂದೇ ಪದಾರ್ಥದಲ್ಲಿ ಕೂಡಿಟ್ಟು ನೀಡುವ ವಿನೂತನ ತಂತ್ರಜ್ಞಾನ ಶೋಧಿಸಿ ಯಶಸ್ವಿಯಾಗಿದೆ. ಭೂ ಮೇಲ್ಪದರದಲ್ಲಿ ಸಸ್ಯಗಳಿಗೆ, ಬೆಳೆಗಳಿಗೆ ದಾಳಿ ಮಾಡುವ ರೋಗಾಣುಗಳನ್ನು ತಡೆಯುವ 11 ಜೈವಿಕ ಜೀವಾಣುಗಳುಳ್ಳ ಒಂದೇ ಪದಾರ್ಥ ಸಿದ್ಧಗೊಳಿಸಿದೆ.

ರಾಸಾಯನಿಕ ಕೃಷಿಯ ಭಾರ ತಗ್ಗಿಸುವ ಪ್ರಯತ್ನ ಇದಾಗಿದೆ. ಸದ್ಯಕ್ಕೆ ಶೇ.30 ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೊರೆಯಿಂದ ರೈತರು ಮುಕ್ತರಾಗುವ ಸೂತ್ರ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಜೈವಿಕ ಕೃಷಿ ಮಾಡುವ ತಂತ್ರಜ್ಞಾನ ಶೋಧಿಸುತ್ತೇವೆ.
●ಡಾ| ಶ್ರೀಪಾದ ಕುಲಕರ್ಣಿ,
ಕೃಷಿ ವಿಜ್ಞಾನಿ, ಕೃಷಿ ವಿವಿ ಧಾರವಾಡ

ರಾಸಾಯನಿಕ ಕೃಷಿಯಿಂದ ಸಾಕಷ್ಟು ಬೆಲೆ ತೆತ್ತಿದ್ದೇವೆ. ಇದೀಗ ದೇಶಿ ಮತ್ತು ಸಾವಯವ ಕೃಷಿ ಶೋಧನೆ ಮತ್ತು ಫಲಿತಗಳು ರೈತರ ಹೊಲ ಸೇರಬೇಕಿದೆ. ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ.
●ಸಿ.ಪಿ.ಪಾಟೀಲ, ಕುಲಪತಿ, ಕೃಷಿ ವಿವಿ ಧಾರವಾಡ

■ ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೀಪಾವಳಿ ವೇಳೆಗೆ ರಾಜ್ಯ ಸರ್ಕಾರ ಢಮಾರ್…: ಭವಿಷ್ಯ ನುಡಿದ ಸಿ.ಟಿ.ರವಿ

Hubli; ದೀಪಾವಳಿ ವೇಳೆಗೆ ರಾಜ್ಯ ಸರ್ಕಾರ ಢಮಾರ್…: ಭವಿಷ್ಯ ನುಡಿದ ಸಿ.ಟಿ.ರವಿ

Hubli; ಪಿಎಫ್ಐ ಮಾದರಿಯಲ್ಲಿ‌ ಎಸ್‌ಡಿಪಿಐ ಪಕ್ಷವನ್ನೂ ನಿಷೇಧಿಸಬೇಕು: ಪ್ರಮೋದ ಮುತಾಲಿಕ‌

Hubli; ಪಿಎಫ್ಐ ಮಾದರಿಯಲ್ಲಿ‌ ಎಸ್‌ಡಿಪಿಐ ಪಕ್ಷವನ್ನೂ ನಿಷೇಧಿಸಬೇಕು: ಪ್ರಮೋದ ಮುತಾಲಿಕ್

1-joshi

Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು‌ ಸಾಲುಗಟ್ಟಿ ನಿಂತಿದ್ದಾರೆ: ಜೋಶಿ

prahlad-joshi

Hubli; ಪ್ರಹ್ಲಾದ ಜೋಶಿ ನಿವಾಸದೆದುರು ರೈತ ಹೋರಾಟಗಾರ ಆಕ್ರೋಶ

Hubballi: ಕ್ಷುಲ್ಲಕ ಕಾರಣಕ್ಕೆ ತಲ್ವಾರ್‌ನಿಂದ ಹೊಡೆದಾಡಿಕೊಂಡ ಸ್ನೇಹಿತರು; ಓರ್ವ ಗಂಭೀರ

Hubballi: ಕ್ಷುಲ್ಲಕ ಕಾರಣಕ್ಕೆ ತಲ್ವಾರ್‌ನಿಂದ ಹೊಡೆದಾಡಿಕೊಂಡ ಸ್ನೇಹಿತರು; ಓರ್ವ ಗಂಭೀರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.