ಎಟಿಎಂ ವ್ಯವಹಾರಕ್ಕೂ ಇನ್ನು ಒಟಿಪಿ ವ್ಯವಸ್ಥೆ


Team Udayavani, Aug 18, 2019, 9:53 AM IST

huballi-tdy-2

ಹುಬ್ಬಳ್ಳಿ: ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಕೆನರಾ ಬ್ಯಾಂಕ್‌ ಮುಂದಾಗಿದ್ದು, ಇನ್ಮುಂದೆ ಎಟಿಎಂನಿಂದ ಹಣ ಪಡೆಯಲು ಒಟಿಪಿ ಸಂಖ್ಯೆ ಕಡ್ಡಾಯವಾಗಿದೆ.

ಎಟಿಎಂ ಕೇಂದ್ರಗಳಲ್ಲಿನ ವ್ಯವಹಾರಗಳಿಗೆ ಸೂಕ್ತ ರಕ್ಷಣೆ ಇಲ್ಲ ಎನ್ನುವ ಭಾವನೆ ಗ್ರಾಹಕರಲ್ಲಿ ಮೂಡಿತ್ತು. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದರೂ ವಂಚಕರು ತಮ್ಮದೇ ಕರಾಮತ್ತು ತೋರಿಸಿ ಎಟಿಎಂ ಕಾರ್ಡ್‌ನ ಸಮಗ್ರ ಮಾಹಿತಿಯನ್ನೇ ದೋಚುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಮೊದಲ ಬಾರಿಗೆ ಎಟಿಎಂ ವ್ಯವಹಾರಕ್ಕೂ ಒಟಿಪಿ ವ್ಯವಸ್ಥೆ ಜಾರಿಗೆ ತಂದಿದ್ದು, ಆ. 17ರಿಂದ ಎಟಿಎಂ ವ್ಯವಹಾರ ಮತ್ತಷ್ಟು ವಿಶ್ವಾಸ ಗಳಿಸಲಿದೆ.

ಐದು ಸಾವಿರಕ್ಕಷ್ಟೇ ಒಟಿಪಿ: ಕೆನರಾ ಬ್ಯಾಂಕ್‌ ಗ್ರಾಹಕರು ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದರೆ ಮಾತ್ರ ಈ ಒಟಿಪಿ ಅನ್ವಯಿಸಲಿದೆ. ಅಲ್ಲದೆ ಐದು ಸಾವಿರ ರೂ. ಮೇಲಿನ ವ್ಯವಹಾರಕ್ಕೆ ನಿಗದಿ ಮಾಡಲಾಗಿದೆ. ದಿನದಲ್ಲಿ ಎರಡು ಅಥವಾ ಮೂರು ವ್ಯವಹಾರಗಳಿಂದ ಐದು ಸಾವಿರ ಮೀರಿದರೂ ಒಟಿಪಿ ಕಡ್ಡಾಯವಾಗಲಿದೆ. ಒಂದು ದಿನದಲ್ಲಿ ಐದು ಸಾವಿರಕ್ಕಿಂತ ಕಡಿಮೆಯಿರುವ ವ್ಯವಹಾರಕ್ಕೆ ಇದು ಅನ್ವಯಿಸುವುದಿಲ್ಲ. ಬೇರೆ ಬ್ಯಾಂಕ್‌ ಗ್ರಾಹಕರ ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿನ ವ್ಯವಹಾರಕ್ಕೂ ಇದು ಅನ್ವಯಿಸುವುದಿಲ್ಲ.

ಕಾರ್ಯ ಹೇಗೆ: ಈಗಿನ ಎಟಿಂಎ ವ್ಯವಹಾರ ಹಂತಗಳೇ ಇರಲಿದ್ದು, ಹೆಚ್ಚುವರಿಯಾಗಿ ಒಟಿಪಿ ಆಯ್ಕೆ ಇರುತ್ತದೆ. ಎಟಿಎಂ ಕಾರ್ಡ್‌ ಪಿನ್‌ ಸಂಖ್ಯೆ ಒತ್ತಿದ ನಂತರ ಐದು ಸಾವಿರ ಮೇಲಿನ ಹಣ ಆಯ್ಕೆ ಮಾಡಿದ ನಂತರ ಗ್ರಾಹಕರ ಖಾತೆಗೆ ನೀಡಿದ ಮೊಬೈಲ್ ಒಟಿಪಿ ಬರಲಿದೆ. ಅದನ್ನು ಎಟಿಎಂ ಯಂತ್ರದ ಮೇಲೆ ನಮೂದಿಸಬೇಕು. ಇದಕ್ಕೆ 30 ಸೆಕೆಂಡ್‌ ಸಮಯ ನೀಡಿದ್ದು, ತಪ್ಪಿದರೆ ವ್ಯವಹಾರ ಅರ್ಧಕ್ಕೆ ಕಡಿತಗೊಳ್ಳಲಿದೆ.

ಮೊಬೈಲ್ ಕಡ್ಡಾಯ: ಕೆನರಾ ಬ್ಯಾಂಕ್‌ ಗ್ರಾಹಕರು ಆರ್‌ಎಂಎನ್‌ ಸಂಖ್ಯೆಯ ಮೊಬೈಲ್ನ್ನು ಜತೆಗೆ ತೆಗೆದುಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಆ ದಿನ ಐದು ಸಾವಿರಕ್ಕಿಂತ ಕಡಿಮೆ ವ್ಯವಹಾರ ಮಾಡಬೇಕಾಗುತ್ತದೆ. ಡೆಬಿಟ್ ಕಾರ್ಡ್‌ ನೀಡಲು ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಖಾತೆಗೆ ನೀಡಿದ ಮೊಬೈಲ್ ಸಂಖ್ಯೆ ಬಳಕೆ ಮಾಡದೆ ಇನ್ನೊಬ್ಬರಿಗೆ ಹೋಗಿದ್ದರೆ ಬ್ಯಾಂಕ್‌ಗೆ ತೆರಳಿ ಹೊಸ ಸಂಖ್ಯೆ ನೀಡಲೇಬೇಕು. ಇಲ್ಲದಿದ್ದರೆ ಎಟಿಎಂ ವ್ಯವಹಾರ ಅಸಾಧ್ಯವಾಗಲಿದೆ.

ಹಣ ತೆಗೆಯುತ್ತಿದ್ದಾಗಲೇ ಒಟಿಪಿ ಕೇಳತೊಡಗಿತು. ಈ ಕುರಿತು ಬ್ಯಾಂಕ್‌ ಅಧಿಕಾರಿಗಳ ಬಳಿ ವಿಚಾರಿಸಿದಾಗ ಹೊಸ ವ್ಯವಸ್ಥೆ ಅಳವಡಿಸಿರುವುದು ಗೊತ್ತಾಯಿತು. ಮನೆಗೆ ಹೋಗಿ ಮೊಬೈಲ್ ತಂದು ಹಣ ಡ್ರಾ ಮಾಡಿಕೊಂಡಿದ್ದೇನೆ. ಆರಂಭದಲ್ಲಿ ಒಂದಿಷ್ಟು ಕಷ್ಟ ಅನಿಸುತ್ತೆ. ಆದರೆ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯ ಕಾರ್ಯ. ಈ ವ್ಯವಸ್ಥೆಯನ್ನು ಎಲ್ಲ ಬ್ಯಾಂಕ್‌ಗಳು ಜಾರಿಗೆ ತಂದರೆ ಇನ್ನೂ ಸೂಕ್ತ.•ಅಕ್ಷಯ ಕಿಣಿ, ಬ್ಯಾಂಕ್‌ ಗ್ರಾಹಕ

ಎಟಿಎಂ ಕಾರ್ಡ್‌ ದುರ್ಬಳಕೆಯಾಗುತ್ತಿರುವ ದೂರುಗಳು ಬಂದಿದ್ದವು. ಕೆಲ ದೂರುಗಳನ್ನು ಆಧರಿಸಿ ಸಿಸಿ ಕ್ಯಾಮೆರಾ ವಿಡಿಯೋ ನೋಡಿದಾಗ ಗುರುತು ಸಿಗದ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಕರಣಗಳು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಒಟಿಪಿ ಸುರಕ್ಷಾ ವ್ಯವಸ್ಥೆಯಿಂದ ಆದಷ್ಟು ದುರ್ಬಳಕೆ ಹಾಗೂ ವಂಚನೆಗಳನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಗ್ರಾಹಕರು ಯಾವುದೇ ಮಾಹಿತಿಯನ್ನು ಅನ್ಯರೊಂದಿಗೆ ಹಂಚಿಕೊಳ್ಳಬಾರದು.•ಮನೋಜ ರೇವಣಕರ, ಹಿರಿಯ ಪ್ರಬಂಧಕ, ಕೆನರಾ ಬ್ಯಾಂಕ್‌

 

•ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.