ಸರ್ವರ್ ತೊಂದರೆ: ಎಪಿಎಂಸಿ ವಹಿವಾಟು ಮಂದ
Team Udayavani, Apr 18, 2018, 4:39 PM IST
ಹುಬ್ಬಳ್ಳಿ: ಮುಂಬಯಿಯ ಸರ್ವರ್ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇಬಲ್ ವೈರ್ಗಳು ಸುಟ್ಟಿದ್ದರಿಂದ ಸೋಮವಾರದಿಂದಲೇ ಸರ್ವರ್ ಡೌನ್ ಆಗಿದ್ದು, ಹೀಗಾಗಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರವೂ ಟೆಂಡರ್ ಪ್ರಕ್ರಿಯೆ ತುಂಬಾ ಮಂದಗತಿಯಲ್ಲಿ ನಡೆಯಿತು.
ವ್ಯಾಪಾರಸ್ಥರು ತಮ್ಮ ವಹಿವಾಟನ್ನು ಆನ್ಲೈನ್ ಮುಖಾಂತರವೇ ನಡೆಸುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದರೆ ಆನ್ಲೈನ್ ಮುಖ್ಯ. ಆದರೆ ಸೋಮವಾರ ಬೆಳಗ್ಗೆಯಿಂದಲೇ ಸರ್ವರ್ ಕೈಕೊಟ್ಟಿದ್ದರಿಂದ ಟೆಂಡರ್ ಪ್ರಕ್ರಿಯೆ ನಡೆಸಲು ಹಾಗೂ ವ್ಯಾಪಾರಸ್ಥರು ವಹಿವಾಟು ಮಾಡಿದ ಸರಕಿಗೆ ಪರವಾನಗಿ ಕೊಡುವುದು ಎಪಿಎಂಸಿ ಸಿಬ್ಬಂದಿಗೆ ತೀವ್ರ ಸಮಸ್ಯೆ ಆಯಿತು. ಹೀಗಾಗಿ ಹೇಗಾದರೂ ವಹಿವಾಟು ಪ್ರಕ್ರಿಯೆ ಮುಂದುವರಿಸಲು ಸಾಮಗ್ರಿಗಳ ಕೈಪಿಡಿಯ ಪಟ್ಟಿ ಸಿದ್ಧಪಡಿಸಿ ಆ ಮೂಲಕ ಪರವಾನಗಿ ನೀಡಲು ಮುಂದಾದರು. ಎಪಿಎಂಸಿಯ ಎಲ್ಲ ಗೇಟ್ಗಳಲ್ಲಿ ಸಿದ್ಧಪಡಿಸಿದ ಕೈಪಿಡಿಗಳನ್ನು ರವಾನಿಸಿ ವಹಿವಾಟು ಪ್ರಕ್ರಿಯೆಗೆ ಅನುಕೂಲ ಮಾಡಿದರು.
ಸರ್ವರ್ ತುಂಬಾ ಮಂದಗತಿಯಲ್ಲಿದ್ದ ಕಾರಣ ಟೆಂಡರ್ನಲ್ಲಿ ವಹಿವಾಟು ಆದ ದಾಖಲೆಗಳನ್ನು ಸಿಬ್ಬಂದಿಯು ನಮೂದಿಸಿ ವಹಿವಾಟು ಪ್ರಕ್ರಿಯೆ ನಡೆಸಿದರು. ಸರ್ವರ್ ಡೌನ್ ಆಗಿದ್ದರಿಂದ ವ್ಯಾಪಾರಸ್ಥರು ವಹಿವಾಟು ನಡೆಸಲು ಪರದಾಟಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು
Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ
Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.